
ಮುಂಬಯಿ ಮಹಾನಗರದ ಪ್ರತಿಷ್ಠಿತ ಜಾತಿ ಸಂಘಗಳಲ್ಲಿೊಂದಾದ ಶ್ರೀ ರಜಕ ಸಂಘ (ರಿ.), ಮುಂಬಯಿ ಇವರ ಪ್ರಯೋಜಿತ್ವದಲ್ಲಿ ಜಾತಿ ಬಾಂಧವರಿಂದ ಸ್ಥಾಪಿಸಲ್ಪಟ್ಟ ರಾಜಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 41ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 7 ರಂದು, ರವಿವಾರ ಬೆಳಿಗ್ಗೆ 10.00 ಗಂಟೆಗೆ, ಮುಂಬಯಿಯ ದೇವಾಡಿಗ ಸಂಘ ಹಾಲ್, ಕೈಲಾಶ್ ಲಸ್ಸಿ ಹತ್ತಿರ, ದಾದರ್ ಪೂರ್ವದಲ್ಲಿ ಶ್ರೀಯುತ ಶಂಕರ್ ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸೊಸೈಟಿಯ ಷೇರುದಾರರು ಈ ವಾರ್ಷಿಕ ಮಹಾಸಭೆಗೆ ಸರಿಯಾದ ಸಮಯಕ್ಕೆ ಹಾಜರಾಗಿ ಸಭೆಗೆ ಸಹಕಾರ ನೀಡಬೇಕೆಂದು ಉಪಾಧ್ಯಕ್ಷೆ ನ್ಯಾಯವಾದಿ ಗೀತಾ ನಾರಾಯಣ್ ಕುಂದರ್, ಗೌರವ ಕಾರ್ಯದರ್ಶಿ ತುಕಾರಾಂ ಜಿ. ಮಡಿವಾಳ, ಗೌರವ ಕೋಶಾಧಿಕಾರಿ ರಮೇಶ್ ಪಲಿಮಾರ್, ಕಾರ್ಯಕಾರಿ ಸದಸ್ಯರಾದ ಪಿ. ನೀಲಯ ಗುಜರನ್, ಉಮೇಶ್ ಸಾಲ್ಯಾನ್, ನರೇಂದ್ರ ಅತ್ತಾವರ್, ಶಂಕರ್ ಸಾಲ್ಯಾನ್, ವಸಂತ್ ಮಡಿವಾಳ, ಸುರೇಶ್ ಸಾಲ್ಯಾನ್, ಶಂಕರ್ ಸಾಲಿಯಾನ್ ಹಾಗೂ ವಿಜೇಶ್ ಕುಂದರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





