
ಮುಂಡ್ಕೂರು ಕಜೆ ಮಾರಿಗುಡಿಯ ಗರ್ಭಗುಡಿಗೆ ಶಿಲಾನ್ಯಾಸ ಹಾಗ ನಿಧಿ ಕಳಶ ಸ್ಥಾಪನಾ ಕಾರ್ಯಕ್ರಮ.
ಉಡುಪಿಯ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಮಹಾಮಾಯ ದೇವಸ್ಥಾನ(ಕಜೆ ಮಾರಿಗುಡಿ) ಸಚ್ಚರಿಪೇಟೆ , ಇಲ್ಲಿ ಗರ್ಭಗುಡಿಗೆ ಶಿಲಾನ್ಯಾಸ ಹಾಗೂ ನಿಧಿ ಕಲಶ ಸ್ಥಾಪನಾ ಕಾರ್ಯಕ್ರಮವು 15/11/23, ರಂದು ಪೂಜಾ ವಿಧಿ ವಿಧಾನಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಹಳಷ್ಟು ಮಂದಿ ಭಕ್ತರು ಬಂಗಾರ, ಬೆಳ್ಳಿ, ನವರತ್ನ ಇತ್ಯಾದಿ ಅಮೂಲ್ಯ ಕಾಣಿಕೆಗಳನ್ನು ಇತ್ತು ಧನ್ಯರಾದರು.
ಫೆಬ್ರವರಿ ತಿಂಗಳಲ್ಲಿ ನವೀಕೃತ ನೂತನ ಶಿಲಾಮಯ ಗರ್ಭಗುಡಿ ನಿರ್ಮಾಣಗೊಂಡು 2024ರ ಫೆಬ್ರವರಿ 26ಬ್ರಹ್ಮಕಲಕೋತ್ಸವ ನಡೆಯಲಿದೆ.
ನಿಧಿ ಕಳಶ ಹಾಗೂ ಗರ್ಭಗುಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾಭಿಮಾನಿಗಳು ಪಾಲ್ಗೊಂಡು ಕ್ಷೇತ್ರ ಮಾತೆಯ ಅನುಗ್ರಹಕ್ಕೆ ಪಾತ್ರರಾದರು.
ಮುಂದಿನ ದಿನಗಳಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತ ಬಂಧುಗಳು ತನು ಮನ ಧನ ಗಳಿಂದ ಸಹಕಾರವಿತ್ತು ಕ್ಷೇತ್ರ ಮಾತೆಯ ಅನುಗ್ರಹಕ್ಕೆ ಪಾತ್ರರಾಗಿ ಪುನೀತರಾಗಬೇಕೆಂದು ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.
ದೀಪಾವಳಿ ಹಬ್ಬದ ಶುಭಾಶಯಗಳು
ದೀಪಾವಳಿ ಹಬ್ಬದ ಶುಭಾಶಯಗಳು
ದೀಪಾವಳಿ ಹಬ್ಬದ ಶುಭಾಶಯಗಳು