32 C
Mumbai
March 7, 2026
Mumbai News Kannada
ಕರಾವಳಿ

ವೇಣೂರು ,ಅಂಡೆಂಜ ಗ್ರಾಮದಲ್ಲಿ ವಿಜೃಂಭಣೆಯಿಂದ ಜರಗಿದ ಬುನ್ನಾನ್ ಕುಟುಂಬದ ನೇಮೋತ್ಸವ.





ವೇಣೂರು ಸಮೀಪದ ಅಂಡೆಂಜ ಗ್ರಾಮದ ಮಂಜಿ ಬೆಟ್ಟು ಕೇಶವ ಬುನ್ನಾನ್ ಇವರ ನೇತ್ರತ್ವದಲ್ಲಿ, ಹಾಗೂ ಮುಂಬೈ ವಸಾಯಿ ಪರಿಸರದ ಕೊಡುಗೈ ದಾನಿಗಳು ಹಾಗೂ ಹೊಟೇಲ್ ಉದ್ಯಮಿಗಳಾದ ದೇವೇಂದ್ರ ಬುನ್ನಾನ್, ಹಾಗೂ ರಾಮ ಮಡಿವಾಳ ಇವರ ಮುಂದಾಳ್ತನದಲ್ಲಿ ಬುನ್ನಾನ್ ಕುಟುಂಬದ ದೈವದ ಕೋಲ(ನೇಮವು) ಬಹಳ ವಿಜೃಂಭಣೆಯಿಂದ, ಭಕ್ತಿಯಿಂದ ತಾರೀಕು 13/12/2023 ಬುಧವಾರ ರಾತ್ರಿ 8.30 ರಿಂದ ಜರುಗಿತು.


ಬಿರವು,ಬಾಬು ಬಳಗದರಿಂದ ಕೋಲ ಹಾಗೂ ದಿನೇಶ್ ಮೂಡಬಿದ್ರೆ ಬಳಗದವ ರಿಂದ ವಾಧ್ಯ ನಾದಸ್ವರ, ತುಳುನಾಡು ಹಾಗೂ ಮುಂಬೈಯ ಭೂತಾರಾಧನೆಯ ದಾರ್ಮಿಕ ಸಂಘಟಿಗ ಉಮೇಶ್ ಕಾಂತಾವರ ಇವರ ಮಧ್ಯಸ್ಥಿಕೆಯಲ್ಲಿ ನೆರವೇರಿತು. ಪ್ರಥಮವಾಗಿ, ಗ್ರಾಮದ ಪುರೋಹಿತರಿಂದ ಪೂಜಾ ವಿಧಾನಗಳು ನಡೆದ , ಆನಂತರ 5.30 ಕ್ಕೆ ಸಂಜೆ ಸರಿಯಾಗಿ ಬಂಡಾರ ಇಳಿಸಿವೇಕೆ ನಡೆಯಿತು. ಬಂದ ಭಕ್ತಾದಿಗಳು, ಹಾಗೂ ಗ್ರಾಮದ ನೆರೆಕರೆ ಹಾಗೂ ಕುಟುಂಬದ ಬಂಧು ಬಾಂಧವರಿಗೆ ಅನ್ನದಾನದ ಸೇವೆ ಹಾಗೂ ಚಾ,ಲಘು ಉಪಹಾರದ ವ್ಯವಸ್ಥೆ ಮಾಡಲಾಯಿತು .


ಸುಮಾರು 8 ದೈವಗಳ ನೇಮ ಸೇವೆ ರಾತ್ರಿ 8.30 ರಿಂದ ಮರುದಿನ ಮಧ್ಯಾಹ್ನ 2.30 ತನಕ ಬಹಳ ಅರ್ಥಪೂರ್ಣವಾಗಿ ಸುಮಾರು ಅಂದಾಜು 1000 ಜನ ಭಕ್ತಾಧಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಧಾರ್ಮಿಕ ದೈವಾರಾಧನೆ, ಕಾರ್ಯಕ್ರಮದಲ್ಲಿ ,ಕೇವಲ ಬುನ್ನಾನ್ ಪರಿವಾರ ಅಲ್ಲದೆ ಇತರ ಜಾತಿ, ಪರಜಾತಿ ಬಂದು ಭಾಂದವರು, ಊರು ಪರವೂರಿನವರು ಶ್ರದ್ಧೆ ಭಕ್ತಿ ಬಂದು , ಬುನ್ನಾನ್ ಕುಟುಂಬದ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡರು.



Related posts

ಉಳ್ತೂರು  ಚಿತ್ತಾರಿ‌ ಶ್ರೀ ಮಹಾಗಣಪತಿ   ದೈವಸ್ಥಾನ   ದೇಗುಲದಲ್ಲಿ ಪ್ರತಿಷ್ಠಾಪನಗೊಳ್ಳಲಿರುವ ಮಹಾಗಣಪತಿ   ವಿಗ್ರಹದ ಪುರಮೆರವಣಿಗೆ.

Mumbai News Desk

ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಮಕ್ಕಳಿಗೆ ಜ್ಞಾನ ಬೆಳಕು ಶಿಬಿರ

Mumbai News Desk

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾದಿ ಶಕ್ತಿ ಕ್ಷೇತ್ರ ಸಂಭ್ರಮದ ನಿಧಿಕುಂಬ ಪ್ರತಿಷ್ಠಾಪನೆ.. ರುದ್ರ ಯಾಗ 

Mumbai News Desk

ಕೀನಾರ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಶ್ರೀ ಸಂತೋಷ್ ಶೆಟ್ಟಿಗೆ ಸನ್ಮಾನ

Mumbai News Desk

ಮೂಲ್ಕಿ ಬಂಟರ ಸಂಘ (ರಿ) ಅಧ್ಯಕ್ಷರಾಗಿ ಅಶೋಕ್ ಕುಮಾರ್ ಶೆಟ್ಟಿ,  ಗೌರಾವಾಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಆಯ್ಕೆ.

Mumbai News Desk

ಮಂಗಳೂರಿನ ನಗರ ಸೇವಕ ಜಗದೀಶ್ ಶೆಟ್ಟಿ ಆತ್ಮ ಹತ್ಯೆಗೆ ಯತ್ನ.

Mumbai News Desk