
ಮಂಗಳೂರು , ಜ.4: ಮಂಗಳೂರು ಮಹಾನಗರದ ಬೋಳೂರು ವಾರ್ಡ್ ನ ನಗರ ಸೇವಕ ಜಗದೀಶ್ ಶೆಟ್ಟಿ ಅವರು ತನ್ನ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ನಗರದ ಸ್ಟೇಟ್ ಬ್ಯಾಂಕ್ ಬಳಿ ಕಾರಿನಲ್ಲಿ ಕುಳಿತು, ವಿಷ ಸೇವಿಸಿ ಒದ್ದಾ ಡುತ್ತಿರುವುದನ್ನು ಕಂಡ ಸಾರ್ವಜನಿಕರು, ಜಗದೀಶ ಶೆಟ್ಟಿ ಅವರನ್ನು ಕಾರಿನಿಂದ ಹೊರ ತಂದು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಹಳೇ ಹಿಂದಿ ಚಿತ್ರದ ಹಾಡುಗಳನ್ನು ಹಾಡುತ್ತಿದ್ದರು. ಶಕ್ತಿ ನಗರದ ಸಾನಿದ್ಯ ವಿಶೇಷ ಮಕ್ಕಳ ಶಾಲೆಯ ಆಡಳಿತ ಮಂಡಳಿ ಯಲ್ಲಿ ಸಕ್ರಿಯ ರಾಗಿದ್ದರು.
.
.
.
.
.
.
.