32 C
Mumbai
March 7, 2026
Mumbai News Kannada
ಪ್ರಕಟಣೆ

ಶ್ರೀ ಶನೀಶ್ವರ ಮಹತೋಭಾರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್. ಶನಿ ಕಥೆ ಪ್ರವಚನ ಮತ್ತು  ಗ್ರಂಥ ವಾಚನ ಶಿಕ್ಷಣ ತರಬೇತಿ – 





ಶ್ರೀ ಶನೀಶ್ವರ ಮಹತೋಭಾರ ದೇವಸ್ಥಾನ, ಕುರಾರ್ ವಿಲೇಜ್ ನಲ್ಲಿ ಶನಿ ಕಥೆ ಪ್ರವಚನ ಮತ್ತು ಶನಿ ಗ್ರಂಥ ವಾಚನ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜೂ.22 ಶನಿವಾರ, ಸಂಜೆ 6 ಗಂಟೆಗೆ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಹಾಗು ಸಲೆಹೆಗಾರರು ಮತ್ತು ಹಿರಿಯ ಶನಿ ಕಥಾ ಪ್ರವಚನಕಾರರಾದ ನಾರಾಯಣ್ ಶೆಟ್ಟಿ ಅವರ ಮುಖೆನ ಜರಗಲಿದೆ.

ಮುಂಬೈ ಮಹಾನಗರದಲ್ಲಿ ಸಮರ್ಥ ಅರ್ಥ ಹೇಳುವ ಶನಿ ಕಥಾ ಪ್ರವಚನಕಾರರ ಸಮಸ್ಸೆ ಈಗಾಗಲೇ ಎದ್ದು ಕಾಣುತ್ತಿದೆ, ಒಂದು ತಲೆಮಾರು ಕಳೆದ ನಂತರ ಮುಂದೆ ಶನಿ ಕಥೆ ಹೇಳುವ ಯುವ ಪ್ರತಿಭೆ ಈಗಾಗಲೇ ತಯಾರು ಮಾಡಬೇಕಿದೆ ಎನ್ನುವ ಕಾಳಜಿಯನ್ನು ಅರ್ಥೈಸಿಕೊಂಡ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯರು, ಯುವ ಪೀಳಿಗೆಗೆ ಶನಿ ಕಥೆ ಹೇಳುವ ರೀತಿ, ವಿಷಯ ಸಾಮ್ರಾಜ್ಯ, ಕಥೆಯಲ್ಲಿ ಅಡಕವಾದ ಒಳಅರ್ಥ ಮತ್ತು ಭಾವಾರ್ಥ, ಆದ್ಯಾತ್ಮಿಕ ಚೌಕಟ್ಟು, ಹಾಗು ಭಕ್ತಿ ಮಾರ್ಗ ಪ್ರಚೋದನೆ ಮತ್ತು ಗ್ರಂಥ ಪಠನೆಯ ರೀತಿ, ಪ್ರಾರಂಭ ಹಾಗು ಮುಕ್ತಾಯದ ಚೌಕಟ್ಟು, ಅಧ್ಯಾಯ ಮುಕ್ತಾಯದ ರೀತಿ ನೀತಿ ಯನ್ನು ಪ್ರತೀ ಭಾನುವಾರ ಸಂಜೆ 6 ರಿಂದ 8 ರ ತನಕ ದೇವಸ್ಥಾನದಲ್ಲಿ ಶ್ ಶ್ರೀನಿವಾಸ ಸಾಫಲ್ಯರು ಮತ್ತು ನಾರಾಯಣ್ ಶೆಟ್ಟಿ ಯವರು ಉಚಿತವಾಗಿ ತರಬೇತಿ ನೀಡಲಿದ್ದಾರೆ.

ಆಸಕ್ತಿಯುಳ್ಳ ಮಕ್ಕಳು, ಮಹಿಳೆಯರು ಮತ್ತು ಯುವಕರು, ಮಹನೀಯರು ಈ ತರಬೇತಿ ಯಲ್ಲಿ ಭಾಗವಹಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪೂಜಾ ಸಮಿತಿಯ ಉಪಾದ್ಯಕ್ಶರಾದ ರಮೇಶ್ ಆಚಾರ್ಯ ಇವರನ್ನು ಸಂಪರ್ಕಿಸಬಹುದು -೯೮೯೨೪೧೩೨೦೪. (9892413204)



Related posts

ಮಾ. 4ರಿಂದ 8ರ ತನಕ ; ಇತಿಹಾಸ ಪ್ರಸಿದ್ದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

Mumbai News Desk

ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೊರಿವಿಲಿ 35ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ.

Mumbai News Desk

ನ. 25ಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮುತ್ತುಟ್ ಫೈನಾನ್ಸ್ ಲಿಮಿಟೆಡ್ ನ ಜಂಟಿ ಆಶ್ರಯದಲ್ಲಿ ಅ. 10ಕ್ಕೆ ಸ್ಥನ್ಯ ಪಾನ ಸಪ್ತಾಹ

Mumbai News Desk

ಏ. 13 ರಂದು ಮಂಗಳೂರಲ್ಲಿ ನಡೆಯಲಿರುವ ಕುಲಾಲ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ಮಾ. 9ರಂದು ಮೊಗವೀರ ಮಾಸಿಕದ 85ರ ಸಂಭ್ರಮ

Mumbai News Desk