✒️ ಸುದ್ದಿ ವಿವರ : ಪಿ.ಆರ್.ರವಿಶಂಕರ್ 8483980035
ಬೊಯಿಸರ್ ಪಶ್ಚಿಮದಲ್ಲಿನ ಸಿಡ್ಕೋ ವಲಯದಲ್ಲಿನ (ರೈಲ್ವೇ ಸ್ಟೇಷನ್ ಚಿತ್ರಾಲಯ ರಸ್ತೆ) ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಇದೇ ಬರುವ ತಾ.18 ನೆಯ ಬುಧವಾರ 2024 ರಂದು ಸಂಜೆ ಶ್ರೀ ಗಣೇಶ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಪೂಜೆಯು ವಿದ್ಯುಕ್ತವಾಗಿ ಜರಗಲಿದೆ.
ಸಂಜೆ 6 ಗಂಟೆಯಿಂದ 8 ರ ತನಕ ಶ್ರೀ ಜಯಶೀಲ ಗುರುಸ್ವಾಮಿಯವರ ಉಪಸ್ಥಿತಿಯಲ್ಲಿ ಮೀರಾ ರೋಡ್ ನ ಸುಪ್ರಸಿದ್ಧ ಲಕ್ಶ್ಮೀನಾರಾಯಣ ಭಜನಾ ಮಂಡಲಿಯವರಿಂದ ಭಕ್ತಿ ಭಜನಾ ಕಾರ್ಯಕ್ರಮವಿದೆ. 8 ರಿಂದ 8.30 ರ ತನಕ ಮಹಾ ಮಂಗಳಾರತಿ ಹಾಗೂ ತೀರ್ಥಪ್ರಸಾದ , 8.30 ರಿಂದ 8.45 ರ ತನಕ ಹರಿವರಾಸನಮ್
ಜರಗಲಿದ್ದು ಬಳಿಕ ಪ್ರಸಾದ ರೂಪದಲ್ಲಿ ಅನ್ನದಾನ ಜರಗಲಿದೆ.
ಸರ್ವ ಭಕ್ತಾದಿಗಳ ಜೀವನದಲ್ಲಿ ಉತ್ತಮ ಆರೋಗ್ಯ , ಸಂತಸ ಹಾಗೂ ಸುಭಿಕ್ಷತೆಯ ಪ್ರಾರ್ಥನೆಗಳೊಂದಿಗೆ ಶ್ರೀ ಗಣೇಶ ಅಯ್ಯಪ್ಪ ಮಂದಿರದ ದಿವ್ಯ ಸನ್ನಿಧಿಯಲ್ಲಿ ಜರಗುವ ಈ ಪವಿತ್ರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ವ ಭಕ್ತಾಭಿಮಾನಿಗಳು ಕುಟುಂಬ ಸಮೇತ ಭಾಗವಹಿಸಿ ಕೃಪಾನುಗ್ರಹಿತರಾಗಬೇಕಾಗಿ ಆಯೋಜಕರಾದ ದಯಾನಂದ ಶೆಟ್ಟಿ ಹಾಗೂ ಸಂತೋಷ ಸ್ವಾಮಿ ( ತುಂಗಾ ಹಾಸ್ಪಿಟಲ್ಸ್) ಇವರು ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.
ಸುದ್ದಿ ವಿವರ : ಪಿ.ಆರ್.ರವಿಶಂಕರ್