32 C
Mumbai
March 7, 2026
Mumbai News Kannada
ಮುಂಬಯಿ

ಪೌರಾಣಿಕ ವಾಚಕ ಸಮಿತಿ ಮುಂಬಯಿ,ಇದರ   49ನೇ ವಾರ್ಷಿಕ ಶನಿಪೂಜೆ





 

  ಹೆಜಮಾಡಿ ಗೋಪಾಲ್ ಎ. ಕೋಟ್ಯಾನ್ಕಾರ್ ಅವರಿಂದ ಸ್ಥಾಪಿಸಲ್ಪಟ್ಟಿರುವ ಪೌರಾಣಿಕ ವಾಚಕ ಸಮಿತಿ ಇದರ 49 ನೇ ವಾರ್ಷಿಕ ಶನಿಪೂಜೆ ಮಾರ್ಚ್ 1 ರಂದು ಶನಿವಾರ ಬೆಳಿಗ್ಗೆ ಅಂಧೇರಿ ಪಶ್ಚಿಮದ ವೀರ ದೇಸಾಯಿ ಮಾರ್ಗದ ಶ್ರೀ ಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ಜರಗಿತು.

ಬೆಳಿಗ್ಗೆ 10 ಗಂಟೆಗೆ ಕಲಶ ಮುಹೂರ್ತವನ್ನು ಸಮಿತಿಯ ಅರ್ಚಕರಾದ ಚಂದ್ರ ಶೇಖರ ಬಂಗೇರ ಅವರು ವಾಡಿಕೆಯ ವಿಧಿಯಂತೆ  ನೆರವೇರಿಸಿದರು. ಪ್ರಾರಂಭದಲ್ಲಿ ಶನಿಗ್ರಂಥ ವಾಚಕರಾಗಿ ಸುರೇಂದ್ರನಾಥ್ ಹಳೆಯಂಗಡಿ, ಅರ್ಥ ವಿವರಣಕಾರರಾಗಿ  ರತ್ನಾಕರ್ ಬಿ. ಬಂಗೇರ ಅವರು ಗ್ರಂಥ ಪಾರಾಯಣಕ್ಕೆ ಚಾಲನೆ ನೀಡಿದರು. ನಂತರ ಪಾರಾಯಣದಲ್ಲಿ  ಇಂದಿರಾ ಮೆಂಡನ್, ಎಚ್. ಮಹಾಬಲ್, ಗೀತಾ ಮೆಂಡನ್, , ಜಗನ್ನಾಥ್ ಪುತ್ರನ್, ಹರೀಶ್ ಕಾಂಚನ್, ಪ್ರೇಮಾ ಅಮೀನ್,  ಪುರಂದರ ಅಮೀನ್, ಶ್ಯಾಮ್ ಪುತ್ರನ್, ಮೋಹನ್ ಅಮೀನ್, ಸಂಜೀವ ಬಂಗೇರ,ಕೇಶವ ಬಂಗೇರ,  ಅವರು ಪಾಲ್ಗೊಂಡರು. ಅರ್ಥ ವಿವರಣೆಯಲ್ಲಿ ಬಾಲಕೃಷ್ಣ ಪೂಜಾರಿ, ಜಗನ್ನಾಥ್ ಕಾಂಚನ್,ಶೇಖರ್ ಮೆಂಡನ್, ಲಕ್ಷ್ಮಣ್ ಸುವರ್ಣ,ಪುಷ್ಪ ಬಂಗೇರ, , ಲೋಕನಾಥ್ ಕಾಂಚನ್ ನಿರ್ವಹಿಸಿದರು.,4.30ರಿಂದ 5.30 ರ ವರೆಗೆ ಭಜನೆ, ಹಾಗೂ ಸಮಿತಿಗೆ ಸಹಕಾರ, ಪ್ರೋತ್ಸಾಹ ನೀಡುತ್ತಿರುವ ಹಾಗೂ ಮುಖ್ಯ ಅತಿಥಿ ಯಾಗಿದ್ದ ಮುರುಗನ್ ನಂಬಿಯರ್ ಅವರನ್ನು  ಸನ್ಮಾನ ಮಾಡಲಾಯಿತು.ಮಹಾ ಮಂಗಳಾರತಿ ಬಳಿಕ ಪ್ರಸಾದ ವಿತರಣೆ ನಡೆಯಿತು.ಸಮಿತಿಯ ಅಧ್ಯಕ್ಷ ರತ್ನಾಕರ್ ಬಂಗೇರ, ಪ್ರಧಾನ ಕಾರ್ಯದರ್ಶಿ ಲೋಕನಾಥ್ ಕಾಂಚನ್, ಕೋಶಾಧಿಕಾರಿ ಸದಾಶಿವ ಎನ್. ಸುವರ್ಣ, ಹರೀಶ್ ಕಾಂಚನ್, ಕೇಶವ್ ಬಂಗೇರ ಅವರು ಮುಂದಾಳತ್ವ ವಹಿಸಿದ್ದರು, ವಾಸು ಉಪ್ಪುರು, ಪುರಂದರ ಅಮೀನ್ ಪೂಜಾ ವಿಧಿಯಲ್ಲಿ ಸಹಕರಿಸಿದರು 

 ಈ ಪುಣ್ಯ ಕಾರ್ಯಕ್ರಮದಲ್ಲಿ  ಭಾಗವಹಿಸಿ ತನು, ಮನ, ಧನದಿಂದ ಸಹಕರಿಸಿದ ಭಕ್ತ ಭಾಂದವರಿಗೆ ಕಾರ್ಯದರ್ಶಿ ಲೋಕನಾಥ್ ಕಾಂಚನ್ ಧನ್ಯವಾದ ಅರ್ಪಿಸಿದರು.



Related posts

ಬಿಲ್ಲವರ ಅಸೋಸಿಯೇಷನ್ ಮುಂಬೈ ಬೊರಿವಲಿ-ದಹಿಸರ್ ಸ್ಥಳೀಯ ಕಚೇರಿ ವತಿಯಿಂದ ಗಣರಾಜ್ಯೋತ್ಸವ ಆಚರಣೆ

Mumbai News Desk

ಮುಂಬೈ: ಕುರ್ಲಾ ಬೆಸ್ಟ್ ಬಸ್ ಅಪಘಾತ ಪ್ರಕರಣ, ಚಾಲಕರನ್ನು ನೇಮಿಸಿಕೊಳ್ಳುವಲ್ಲಿ ಮತ್ತು ತರಬೇತಿ ನೀಡುವಲ್ಲಿ ನಿರ್ಲಕ್ಷ – ಪೊಲೀಸರ ಆರೋಪ

Mumbai News Desk

ಮುಂಬಯಿ ನ್ಯೂಸ್ ವೀಕ್ಷಕರ /ಓದುಗರ ಮನೆ, ಮನೆ ಗಣಪತಿ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗ ದಿಂದ ಲಲಿತ ಶಾಸ್ತ್ರ ನಾಮಾವಳಿ ಮತ್ತು ಭಜನೆ.

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ; “ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಗೆ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ – 2024 ಪ್ರದಾನ

Mumbai News Desk

ಕನ್ನಡ ಸಂಘ ಸಯನ್ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮ : ಒಗ್ಗಟ್ಟಿನಿಂದ ಸಂಘದ ಬಲವರ್ಧನೆಗೆ ಪ್ರವೀಣ್ ಭಟ್ ಕರೆ.

Mumbai News Desk