34.7 C
Karnataka
March 31, 2025
ಸುದ್ದಿ

ಮುಂಬೈ ಕನ್ನಡತಿ ನ್ಯಾ. ಮೀನಾಕ್ಷಿ ಅಚಾರ್ಯರಿಗೆ ಗ್ಲೋಬಲ್ ಲೀಗಲ್ ಅವಾರ್ಡ್ಸ್ ನಿಂದ, “ವರ್ಷದ ವ್ಯವಸ್ಥಾಪಕಿ ಪಾಲುದಾರ ಮಹಿಳೆ” ಪ್ರಶಸ್ತಿ.

ಮುಂಬಯಿ : ಕಾನೂನು ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಮಡಿದ ET ಗ್ಲೋಬಲ್ ಲೀಗಲ್ ಅವಾರ್ಡ್ಸ್ 2025 ರ “ವರ್ಷದ ವ್ಯವಸ್ಥಾಪಕಿ ಪಾಲುದಾರ – ಮಹಿಳೆ” ಪ್ರಶಸ್ತಿಯನ್ನು ಮಹಾನಗರದ ಅಂಧೇರಿ ಪೂರ್ವದ ಖ್ಯಾತ ವಕೀಲೆ ಕನ್ನಡತಿ ನ್ಯಾ. ಮೀನಾಕ್ಷಿ ಪದ್ಮನಾಭ ಅಚಾರ್ಯ ಪಡೆದಿದ್ದಾರೆ.

ಮಾರ್ಚ್ 5, 2025 ರಂದು ಮುಂಬಯಿಯಲ್ಲಿ ನಡೆದ ET ಗ್ಲೋಬಲ್ ಲೀಗಲ್ ಕನ್ವೆನ್ಷನ್ 2025 ರಲ್ಲಿ ಈ ಪ್ರಶಸ್ತಿಯನ್ನು ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ.ಎನ್. ಸಾಯಿಕೃಷ್ಣ ಅವರು ಪ್ರಧಾನಿಸಿದರು.

ಕಾನೂನು ಕ್ಷೇತ್ರದಲ್ಲಿ 20 ವರ್ಷಕ್ಕಿಂತಲೂ ಅಧಿಕ ಕಾಲದ ಅನುಭವವನ್ನು ಪಡೆದಿರುವ ನ್ಯಾ. ಮೀನಾಕ್ಷಿ ಅಚಾರ್ಯ ಅವರು ಈಗಾಗಲೇ ಪ್ರತಿಷ್ಠಿತ ಪೋರ್ಬಸ್ ಇಂಡಿಯಾ ಸೇರಿ ಹಲವಾರು ಉನ್ನತ ಮಟ್ಟದ ಪ್ರಶಸ್ತಿ, ಪುರಸ್ಕಾರ ಹಾಗೂ ಸನ್ಮಾನಗಳನ್ನು ದೇಶ ವಿದೇಶಗಳಲ್ಲೂ ಪಡೆದಿದ್ದು ಕಳೆದ ಸುಮಾರು 15 ವರ್ಷಗಳಿಂದ ಮುಂಬಯಿಯ ಅಂಧೇರಿ ಪೂರ್ವದ ಸಹರ್ ನಲ್ಲಿ ಅರ್.ಎಮ್. ಎ. ಲೀಗಲ್ ನ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಇವರ ಸಂಸ್ಥೆಯು ದೆಹಲಿ, ಬೆಂಗಳೂರು, ಪುಣೆ, ಹೈದರಾಬಾದ್, ಚಿನ್ನೈ, ಮತ್ತು ಯುನೈಟೆಡ್ ಕಿಂಗ್ ಡಂನಲ್ಲಿ ಖಚೇರಿಯನ್ನು ಹೊಂದಿದೆ. ವಿಲೀನತೆ, ಸ್ವಾಧೀನತೆ, ಖಾಸಗಿ ಷೇರುಗಳು ಮತ್ತು ಹೂಡಿಕೆಗಳು, ವಿದೇಶಿ ಹೂಡಿಕೆ ನೀತಿಗಳು, ಕಾರ್ಪೊರೇಟ್ ಮತ್ತು ವಾಣಿಜ್ಯ ವಹಿವಾಟುಗಳು, ಬಂಡವಾಳ ಮಾರುಕಟ್ಟೆ, ಇ-ವಾಣಿಜ್ಯ, ರಿಯಲ್ ಎಸ್ಟೇಟ್, ಮೂಲಸೌಕರ್ಯ, ಉದ್ಯೋಗ ಮತ್ತು ಕಾರ್ಮಿಕ ವಿಷಯಗಳಲ್ಲಿ ಇವರು ಪರಿಣಿತರು.

ಬಂಟ್ವಾಳ ತಾಲೂಕಿನ ಕುರಿಯಾಲ ಗ್ರಾಮ
ಸೀತಾರಾಮ ಬಾಬು ಆಚಾರ್ಯ ಮತ್ತು ಶೋಭಾ ಸೀತಾರಾಮ ಆಚಾರ್ಯ ದಂಪತಿಯ ಸುಪುತ್ರಿಯಾದ ಇವರು ಮೂಡಬಿದ್ರೆಯ ಇರುವೆಲ್ ನ ಪದ್ಮನಾಭ ರಾಮಣ್ಣ ಆಚಾರ್ಯ ಅವರ ಪತಿ.
ಪುತ್ರ ಧ್ರುವ ಆಚಾರ್ಯ ಬೆಂಗಳೂರಿನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ.
ಇವರನ್ನು ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ಜೈ ಶ್ರೀ ವಿಶ್ವಕರ್ಮ ಭಜನಾ ಸಂಘ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯು ಸನ್ಮಾನಿಸಿದೆ.

Related posts

ಮಂಗಳೂರು ವಿವಿ ಘಟಿಕೋತ್ಸವ : ರೋಹನ್ ಮೊಂತೇರೋ, ಕನ್ಯಾನ ಸದಾಶಿವ ಶೆಟ್ಟಿ, ಎಂ. ಎನ್ ರಾಜೇಂದ್ರಕುಮಾರ್ ಗೆ ಗೌರವ ಡಾಕ್ಟರೇಟ್

Mumbai News Desk

ತುಳುವೆರೆ ಆಯಾನೊ ಕೂಟ ಕುಡ್ಲ ಅಧ್ಯಕ್ಷರಾಗಿ ಶಮಿನ ಆಳ್ವ ಆಯ್ಕೆ

Mumbai News Desk

ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಪ್ರವೀಣ್ ಭೋಜ ಶೆಟ್ಟಿ ಆಯ್ಕೆ

Mumbai News Desk

ಬಂಟರ ಸಂಘ ಮುಂಬೈಯ ನೂತನ ಟ್ರಸ್ಟಿ   ಉಳ್ತೂರು  ಮೋಹನ್ದಾಸ್ ಶೆಟ್ಟಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಭಿನಂದನೆ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ

Mumbai News Desk

ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟನೆ –  ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಪ್ರದಾನ

Mumbai News Desk