32 C
Mumbai
March 7, 2026
Mumbai News Kannada
ಮುಂಬಯಿ

ಮುಂಬೈ ಗಿರ್ ಗಾಂವ್ ನಲ್ಲಿ  “ಗುಡಿಪಾಡ್ವಾ”  ಹಿಂದೂ ನವ ವರ್ಷಾಚರಣೆಯ ಸಂಭ್ರಮ.





ಸುದ್ದಿ ವಿವರ : ಪಿ.ಆರ್.ರವಿಶಂಕರ್ 8483980035

         ಉತ್ತರಮುಂಬೈ ಯಲ್ಲಿನ   ಗಿರ್ ಗಾಂವ್ ಪರಿಸರದಲ್ಲಿ ಕಳೆದ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುವ ಯುಗಾದಿ ಪಾಡ್ವಾ ನವ ವರ್ಷ ಸಂಭ್ರಮಾಚರಣೆಯು  ತಾ.30 ರಂದು ಅದ್ದೂರಿಯಾಗಿ ಜರಗಿತು.

      ಮುಂಬೈ ಮಹಾನಗರದಲ್ಲಿ “ಟ್ರೆಂಡ್ ಸೆಟ್ಟರ್ಸ್” ಶೀರ್ಷಿಕೆಯಡಿಯಲ್ಲಿ ನಿತಿನ್ ಇಂದಿರಾ ವಿಷ್ಣು ಕದಮ್ ಇವರು ಪ್ರತೀ ವರ್ಷ ಆಯೋಜಿಸುವ ಈ ಉತ್ಸವದ ಮೂಲಕ ಚೈತ್ರ ಮಾಸದ ಸ್ವಾಗತ ಹಾಗೂ ಅತೀ ಪುರಾತನ ಹಿಂದೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುವಂತಹ ಮಹತ್ತರ ಧ್ಯೇಯೋದ್ದೇಶಗಳನ್ನು ಒಳಗೊಂಡಿರುತ್ತದೆ. ಗುಡಿಪಾಡ್ವ ಹಬ್ಬವು ಮರಾಠೀ ಹಾಗೂ ಕೊಂಕಣಸ್ಥ  ಸಮುದಾಯದ ಹೊಸವರ್ಷದ ಆಚರಣೆಯಾಗಿದ್ದು ಹಿಂದುತ್ವದ ವಿಶೇಷ ಧ್ಯೇಯೋದ್ದೇಶದೊಂದಿಗೆ ಸಮಸ್ಥ ಹಿಂದೂ ಸಮುದಾಯದ ಜನರು ಜಾತಿ ಭಾಷಾ ಭೇದವಿಲ್ಲದೆಯೇ ಇದರಲ್ಲಿ ಶೃದ್ಧಾ ಭಕ್ತಿಯೊಂದಿಗೆ ಭಾಗವಹಿಸುತ್ತಾರೆ.

   ಇದೇ ತಾ.30 ರ ಮಾರ್ಚ್ ರವಿವಾರದಂದು ಜರಗಿದ 17 ನೆಯ ವರ್ಷದ ಉತ್ಸವದಲ್ಲಿ ಮುಂಬೈ ಮಹಾನಗರಿಯ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಹಿಂದೂ ಭಾವಿಕರು ತಮ್ಮ ವಿಶೇಷ ಪಾರಂಪಾರಿಕ ಉಡುಗೆಯೊಂದಿಗೆ ಭಾಗವಹಿಸಿದ್ದರು.

 ಬೆಳಿಗ್ಗೆ ಗಿರ್ ಗಾಂವ್ ಬಳಿಯ ಪ್ರಾರ್ಥನಾ ಸಮಾಜ್ ಬಳಿಯಿಂದ ಆರಂಭಗೊಂಡ ಭವ್ಯ ಮೆರವಣಿಗೆಯು ಮದ್ಯಾಹ್ನ 2 .30 ಗಂಟೆಗೆ ಧೋಬಿತಲಾವ್ ಬಳಿ ( ಪಾರ್ಸಿ ಡೈರಿಯ ಸಮೀಪ) ನಿರ್ಮಿಸಿದ ಭವ್ಯ ಪೂಜಾ ಮಂಟಪದಲ್ಲಿ ಸಂಪನ್ನಗೊಂಡಿತು.

ಮಹಾರಾಷ್ಟ್ರದ ಭವ್ಯ ಸಂಸ್ಕೃತಿ ಹಾಗೂ ಇತಿಹಾಸವನ್ನು ಬಿಂಬಿಸುವ ವೈವಿಧ್ಯಮಯ ಟ್ಯಾಬ್ಲೋಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು.

          ಶ್ರೀ ಸಿದ್ಧಿವಿನಾಯಕ ಮಂದಿರದ ಪ್ರತಿಕೃತಿಯೊಂದಿಗೆ ನಿರ್ಮಿಸಿದ ವಿಶೇಷ ಪೂಜಾಮಂಟಪದಲ್ಲಿ ಜರಗಿದ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಪೂಜಾ ಕಾರ್ಯಕ್ರಮದಲ್ಲಿ ಡಾ• ಸುದೇಶ್ ಸಾಲಿಯಾನ್,  ಮುಂಬೈ ಸಿದ್ಧಿವಿನಾಯಕ ಮಂದಿರದ ಮಾಜೀ ಟ್ರಸ್ಟೀ ನಿತಿನ್ ಕದಮ್ , ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥರಾದ ಸತ್ಯಾ ಎಸ್. ಕೋಟ್ಯಾನ್ ,  ಆಹಾರ್ ಸಂಸ್ಥೆಯ ಜೋನ್ 1 ಅಧ್ಯಕ್ಷರಾದ ಮಹೇಂದ್ರ ಕರ್ಕೆರಾ ( ಮಹೇಶ್ ಲಂಚ್ ಹೋಮ್) ಮತ್ತು ಶಂಕರ್ ಶೆಟ್ಟಿ( ಮಿಲನ್ ಕಾಫೀ ಹೌಸ್) ಹಾಗೂ  ಹಲವಾರು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.

ಚಿತ್ರ ಹಾಗೂ ವಿವರ :
ಪಿ.ಆರ್.ರವಿಶಂಕರ್ ಡಹಾಣೂ ರೋಡ್ :   8483980035



Related posts

ಮಹಾರಾಷ್ಟ್ರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ: ಕನ್ನಡಿಗ ಡಾ. ಕೆ. ಎಚ್. ಗೋವಿಂದರಾಜ್ (ಐಎಎಸ್) ಅವರಿಗೆ ಒಕ್ಕಲಿಗರ ಸಂಘ ಮಹಾರಾಷ್ಟ್ರ ವತಿಯಿಂದ ಗೌರವ

Mumbai News Desk

ಸಂಸ್ಕೃತಿ ಅಮೀನ್ ದುರ್ಮರಣ ; ಬಿಲ್ಲವರ ಎಸೋಸಿಯೇಷನ್ ಮತ್ತು ಸ್ಥಳೀಯರಿಂದ ಪ್ರತಿಭಟನೆ, ಇಬ್ವರ ಬಂಧನ – ಬಿಲ್ಡರ್ ಪರಾರಿ

Mumbai News Desk

ಭಾರತ್ ಬ್ಯಾಂಕ್ ಈ ವರ್ಷದ 2024 ಕ್ಯಾಲೆಂಡರ್ ಬಿಡುಗಡೆ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಅದ್ಧೂರಿ ಕ್ರೀಡಾ ಕೂಟ ದಂಗಲ್ 2024 ಸಮಾರೋಪ ಸಮಾರಂಭ

Mumbai News Desk

ಮುಂಬಯಿ ನ್ಯೂಸ್ ವೀಕ್ಷಕರ /ಓದುಗರ ಮನೆ, ಮನೆ ಗಣಪತಿ

Mumbai News Desk

ಮದರ್ ಇಂಡಿಯಾ 19ನೇ ಈಸ್ಟ್ ಬಾಂಬೆ ಹಳೇ ವಿದ್ಯಾರ್ಥಿ ಸ್ಕೌಟ್ ಬಳಗದ 4ನೇ ವಾರ್ಷಿಕ ಸ್ನೇಹ ಸಮ್ಮಿಲನ.

Mumbai News Desk