April 21, 2025
ಮುಂಬಯಿ

ಬೊರಿವಲಿ ಪೂರ್ವ, ಶ್ರೀ ಜಗದೀಶ್ವರಿ ಬ್ರಹ್ಮ ಬೈದರ್ಕಳ ಗರಡಿಯ ವತಿಯಿಂದ ರಕ್ತದಾನ ಶಿಬಿರ




ರಕ್ತದಾನದಂತಹ ಜನಪರ ಸೇವೆಗೆ ಎಲ್ಲರೂ ಕೈಜೋಡಿಸೋಣ – ಹರಿದೀಶ್ ಕುಮರ್ ಬಿ.

ಮುಂಬಯಿ : ಧಾರ್ಮಿಕ ಸೇವೆಯೊಂದಿಗೆ ಬೊರಿವಲಿ ಪೂರ್ವದ ಶ್ರೀ ಜಗದೀಶ್ವರಿ ಬ್ರಹ್ಮ ಬೈದರ್ಕಳ ಗರಡಿಯ ವತಿಯಿಂದ ರಕ್ತದಾನ ಶಿಬಿರ ನಡೆಸಿ ಇಲ್ಲಿ ಸಂಗ್ರಹವಾದ ರಕ್ತವನ್ನು ತಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾಗುತ್ತಿದ್ದು ನಿಜಕ್ಕೂ ಪುಣ್ಯ ಕಾರ್ಯ. ಇಂತಹ ಕಾರ್ಯದಲ್ಲಿ ಬಾಗವಹಿಸುವುದು ನನ್ನ ಸೌಬಾಗ್ಯ. ನಾವೆಲ್ಲರೂ ಸೇರಿ ಇಂತಹ ಜನಪರ ಕಾರ್ಯಕ್ಕೆ ಪ್ರೋತ್ಸಾಹಿಸೋಣ ಎಂದು ಐಬಿಪಿಎಸ್ ನಿರ್ದೇಶಕ ತುಳು-ಕನ್ನಡಿಗ ಹರಿದೀಶ್ ಕುಮರ್ ಬಿ. ನುಡಿದರು.

ಏ. 20ರಂದು ಬೊರಿವಲಿ ಪೂರ್ವ, ಶ್ರೀ ಜಗದೀಶ್ವರಿ ಬ್ರಹ್ಮ ಬೈದರ್ಕಳ ಗರಡಿಯ ವತಿಯಿಂದ ಗರಡಿಯ ಪ್ರಮುಖರಾದ ಶೇಖರ ಇಂದು ಸಾಲ್ಯಾನ್ ಇವರ ನೇತೃತ್ವದಲ್ಲಿ ಬೊರಿವಲಿ ಬ್ಲಡ್ ಸೆಂಟರ್ ಇದರ ಜಂಟಿ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಥಳೀಯ ನಗರ ಸೇವಕಿ ಆಸವರಿ ಪಾಟೀಲ್ ಉಪಸ್ಥಿತರಿದ್ದು ರಕ್ತದಾನ ಶಿಬಿರಕ್ಕೆ ಶುಭ ಹಾರೈಸುತ್ತಾ ಸಂತೋಷ ವ್ಯಕ್ತಪಡಿಸಿ ಶ್ರೀ ಜಗದೀಶ್ವರಿ ಕ್ಷೇತ್ರವನ್ನು ಜೀರ್ಣೋದ್ದಾರ ಮಾಡವ ಅಗತ್ಯವಿದ್ದು ಸಮಿತಿಯೊಂದಿಗೆ ನಾವೆಲ್ಲರೂ ಸಹರಿಸೋಣ ಎಂದರು.

ಆದಿತ್ಯ ಬಿರ್ಲಾ ಮನಿ ಲಿಮಿಟೆಡ್ ನ ಸಿ.ಇ.ಓ. ಅಶೋಕ್ ಸುವರ್ಣ ತಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾಗುವ ರಕ್ತದಾನ ಶಿಬಿರವು ಈ ಧಾರ್ಮಿಕ ಕ್ಷೇತ್ರದಲ್ಲಿ ನಡೆಯುತ್ತಿರುವುದು ಕ್ಷೇತ್ರದ ಸಮಿತಿಯ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ರಕ್ತದಾನ ಶಿಬಿರ ನಡೆದಿದ್ದು ನೂರಾರು ಮಂದಿ ಬಾಗವಹಿಸಿ ರಕ್ತದಾನ ನೀಡಿ ಸಹಕರಿದರು.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರ ವರೆಗೆ ರಕ್ತದಾನ ಶಿಬಿರ ನಡೆದಿದ್ದು ನೂರಾರು ಮಂದಿ ಬಾಗವಹಿಸಿ ರಕ್ತದಾನ ನೀಡಿ ಸಹಕರಿದರು.

ಕ್ಷೇತ್ರದ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ್ ಸಾಲ್ಯಾನ್, ಕಾರ್ಯದರ್ಶಿ ಸಿ.ಎ. ಅಭಿಜಿತ್ ಶೆಟ್ಟಿ, ಕೋಶಾಧಿಕಾರಿ ಆಶಿಶ್ ಕೋಟ್ಯಾನ್, ಧನೀಶ್ ಕೋಟ್ಯಾನ್, ಕರುಣೇಶ್ ಕೋಟ್ಯಾನ್, ಖ್ಯಾತ ರಂಗ ನಿರ್ದೇಶಕ ಕರುಣಾಕರ ಕಾಪು, ಸದಾಶಿವ ಸಾಲ್ಯಾನ್ ವಾರಂಗ, ದಯಾನಂದ ಪೂಜಾರಿ ವಾರಂಗ, ವಿಶ್ವನಾಥ ಬಂಗೇರ, ರಾಘು ಕೋಟ್ಯಾನ್, ಮಹಿಳಾ ಸದಸ್ಯರು ಉಪಸ್ಥಿತರಿದ್ದು ರಕ್ತದಾನ ಶಿಬಿರದ ಯಶಸ್ಸಿಗೆ ಸಹಕರಿಸಿದರು.

Related posts

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ (ರಿ) ಕಾಮೋಟೆ ಇದರ ಮಹಿಳಾ ವಿಭಾಗದ ವತಯಿಂದ ಜಾಗತಿಕ ಮಹಿಳಾ ದಿನಾಚರಣೆ,

Mumbai News Desk

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ, 

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ರಜತ ಮಹೋತ್ಸವ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಸಮಾವೇಶ, ಗೋಷ್ಠಿ, ಪುಸ್ತಕ ಬಿಡುಗಡೆಗೆ, ಕವಿ ಗೋಷ್ಠಿ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, 88 ನೇ ವಾರ್ಷಿಕೋತ್ಸವ

Mumbai News Desk

ಮಹಾರಾಷ್ಟ್ರ Education Today.Co.ಇವರ ವತಿಯಿಂದ ಪ್ರಶಸ್ತಿ ಪ್ರಧಾನ ಸಮಾರಂಭ – ಮುಂಬೈ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಡೈನಾಮಿಕ್ ಸ್ಕೂಲ್ ಅವಾರ್ಡ್

Mumbai News Desk

ಕಲೆಂಬೋಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥ -ವಾರ್ಷಿಕ ಅಯ್ಯಪ್ಪ ಮಹಾಪೂಜೆ ಭಕ್ತಿ, ಸಂಭ್ರಮದೊಂದಿಗೆ ಸಂಪನ್ನ,

Mumbai News Desk