
ಘಾಟ್ಕೊಪರ್ ಪಶ್ಚಿಮ ಅಸಲ್ಫಾ, ಎನ್ ಎಸ್ ಎಸ್ ರೋಡ್ ಬಾಜಿ ಮಾರ್ಕೆಟ್ ಬಳಿಯ ಶ್ರೀ ಗೀತಾಂಬಿಕ ಸೇವಾ ಸಮಿತಿ ಸಂಚಾಲಕತ್ವದ, ಶ್ರೀ ಗೀತಾಂಬಿಕ ದೇವಸ್ಥಾನದಲ್ಲಿ, 38ನೇ ನಾಗರ ಪಂಚಮಿ ಹಾಗೂ ಆಶ್ಲೇಷ ಬಲಿ ಉತ್ಸವ, ಜುಲೈ. 29ರಂದು ವಿವಿಧ ಧಾರ್ಮಿಕ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ದಿನವಿಡೀ ನಡೆಯಲಿದೆ.
ಕಾರ್ಯಕ್ರಮದ ವಿವರ :
ಬೆಳಿಗ್ಗೆ 7:00 ಘಂಟೆಗೆ – ಪ್ರಾರ್ಥನೆ, ಪ್ರಧಾನ ಹೋಮ, ನಾಗ ತನು- ತಂಬಿಲ
ಬೆಳಿಗ್ಗೆ ಗಂಟೆ 11ಕ್ಕೆ : ಕಲ್ಪೋಕ್ತ ಪ್ರಸನ್ನ ಪೂಜೆ , ವಟು ಆರಾಧನೆ, ಪಂಚಾಮೃತ ಅಭಿಷೇಕ ,ಆಶ್ಲೇಷ ಬಲಿ
ಮಧ್ಯಾಹ್ನ 12ಕ್ಕೆ: ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ
12:30 ಗಂಟೆಗೆ : ಅನ್ನದಾನ ( ಶೋಭಾ ಕುಶಾಲ ಶೆಟ್ಟಿ ಇವರ ಸೇವೆ )
ಸಂಜೆ 5:00ಗೆ : ಸದಸ್ಯರ ಮಕ್ಕಳಿಂದ ನ್ಯತ್ಯೋತ್ಸವ
ಸಂಜೆ 6:00ಗೆ ಸಭಾ ಕಾರ್ಯಕ್ರಮ
ಸಂಜೆ 6.30ರಿಂದ: ಕಲ್ಲಡ್ಕ ವಿಠ್ಠಲ್ ನಾಯಕ್ ಮತ್ತು ಬಳಗದವರಿಂದ ಹಾಸ್ಯ ರಸಮಂಜರಿ
ಸಮಿತಿಯ ಅಧ್ಯಕ್ಷರಾದ ಸುರೇಶ್ ಭಂಡಾರಿ ಕಡಂದಲೇ, ಗೌರವಾಧ್ಯಕ್ಷ ಮುದ್ರಾಡಿ ದಿವಾಕರ್ ಶೆಟ್ಟಿ , ಉಪಾಧ್ಯಕ್ಷರುಗಳಾದ ಸತೀಶ್ ಶೆಟ್ಟಿ, ರಮಾನಾಥ್ ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೋಟ್ಯಾನ್, ಪ್ರಧಾನ ಅರ್ಚಕರಾದ ಸುರೇಶ್ ಭಟ್,ಸಮಿತಿಯ ಎಲ್ಲಾ ಸದಸ್ಯರು,ಮಹಿಳಾ ವಿಭಾಗ, ಶ್ರೀ ಗೀತಾಂಬಿಕ ಯಕ್ಷಗಾನ ಮಂಡಳಿಯ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೇ, ಉಪಾಧ್ಯಕ್ಷರುಗಳಾದ ಕರ್ನೂರು ಮೋಹನ್ ರೈ, ಪ್ರಕಾಶ್ ಶೆಟ್ಟಿ ಸುರತ್ಕಲ್, ಸತೀಶ್ ಶೆಟ್ಟಿ ಕೊಟ್ರಪಾಡಿ, ಪ್ರಧಾನ ಭಾಗವತ ಪೊಲ್ಯ ಲಕ್ಷ್ಮೀನಾರಾಯಣಶೆಟ್ಟಿ, ಗೌರವ ಕಾರ್ಯದರ್ಶಿ ಮಾನಾಡಿ ಸದಾನಂದಶೆಟ್ಟಿ, ಸಂಚಾಲಕ ಸುನಿಲ್ ಅಮೀನ್ ಹಾಗೂ ಸಮಿತಿಯ ಸದಸ್ಯರು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.







