
ಜಯ ಸಿ ಸುವರ್ಣ ಅಭಿಮಾನಿಗಳು ಹಾಗೂ ಮುಂಬೈ ಬಿಲ್ಲವರು, ಶ್ರೀ ನಾರಾಯಣ ಗುರು ಭಜನಾ ಮಂಡಲ –
ಹಾಗೂ ಕಾಂದಿವಿಲಿ ಬಿಲ್ಲವರು ಇದರ ಜಂಟಿ ಆಯೋಜನೆಯಲ್ಲಿ ಶನೀಶ್ವರ ಸಂಪೂರ್ಣ ಗ್ರಂಥ ಪಾರಾಯಣ ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಪೂಜೆಯನ್ನು ಸೆ. 27 ಶನಿವಾರ, ಕಾಂದಿವಲಿ ಪಶ್ಚಿಮದ ಮಹಾವೀರ ನಗರ, ಪಿ. ಜೆ. ಪಂಚೋಲಿಯ ಶಾಲಾ ಸಭಾಗ್ರಹದಲ್ಲಿ ಆಯೋಜಿಸಿದೆ.
ಕಾರ್ಯಕ್ರಮ :
ಮಧ್ಯಾಹ್ನ 12.30ಕ್ಕೆ – ಕಲಶ ಪ್ರತಿಷ್ಠೆ
12.42ರಿಂದ 1.30 – ಭಜನೆ
1.30ರಿಂದ 7.30 – ಶನೀಶ್ವರ ಸಂಪೂರ್ಣ ಗ್ರಂಥ ಪಾರಾಯಣ ( ಶ್ರೀ ಶನಿಮಹಾತ್ಮ ಸೇವಾ ಸಮಿತಿ ಖಾರ್ ನ ಸದಸ್ಯರಿಂದ)
7.30 – ಮಹಾ ಮಂಗಳಾರತಿ
8.30ರಿಂದ ರಾತ್ರಿ 9 – ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ
ಧಾರ್ಮಿಕ ಸಭಾ ಕಾರ್ಯಕ್ರಮ :
ಅಧ್ಯಕ್ಷತೆ : ಸೂರ್ಯಕಾಂತ್ ಜಯ ಸುವರ್ಣ (ಕಾರ್ಯಧ್ಯಕ್ಷರು – ಭಾರತ್ ಬ್ಯಾಂಕ್,ಉಪಾಧ್ಯಕ್ಷರು- ಬಿಲ್ಲವರ ಮಹಾಮಂಡಲ ಮೂಲ್ಕಿ)
ಮುಖ್ಯ ಅತಿಥಿ : ಗೋಪಾಲ್ ಸಿ ಶೆಟ್ಟಿ ( ಮಾಜಿ ಸಂಸದರು)
ಗೌರವ ಅತಿಥಿಗಳು :
ಎರ್ಮಾಳು ಹರೀಶ್ ಶೆಟ್ಟಿ ( ಸಮಾಜ ಸೇವಕ) ನ್ಯಾಯವಾದಿ ಸೋಮನಾಥ ಅಮಿನ್ (ಉಪಾಧ್ಯಕ್ಷರು- ಭಾರತ್ ಬ್ಯಾಂಕ್)
ಜಗನ್ನಾಥ್ ವಿ ಕೋಟ್ಯಾನ್ (ಹೋಟೆಲ್ ಉದ್ಯಮಿ, ಮಾಜಿ ಕಾರ್ಯಧ್ಯಕ್ಷರು ಗೊರೆಗಾಂವ್ ಸ್ಥಳಿಯ ಸಮಿತಿ) ದುರ್ಗಾ ಪ್ರಸಾದ್ ಸಿ ಸಾಲಿಯಾನ್( ಗೌರವ ಕಾರ್ಯದರ್ಶಿ- ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಮಹಾರಾಷ್ಟ್ರ )
ಸಮಾಜ ಬಾಂಧವರು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸು ಗೊಳಿಸುವಂತೆ ಶ್ರೀ ನಾರಾಯಣ ಗುರು ಭಜನಾ ಮಂಡಲದ ಅಧ್ಯಕ್ಷ ಅಶೋಕ್ ಕೆ ಕುಕ್ಯಾನ್, ಕಾರ್ಯದರ್ಶಿ ಕೇಶವ ಎಸ್ ಪೂಜಾರಿ, ಕೋಶಾಧಿಕಾರಿ ಸಭಿತಾ ಜಿ ಪೂಜಾರಿ, ಕಾಂದಿವಿಲಿ ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ನ ನಿರ್ದೇಶಕ ಗಂಗಾಧರ್ ಜೆ ಪೂಜಾರಿ ಮತ್ತು ಜಯ ಸಿ ಸುವರ್ಣ ಅಭಿಮಾನಿಗಳು, ಮುಂಬೈ ಬಿಲ್ಲವರು, ಕಾಂದಿವಲಿ ಬಿಲ್ಲವರು ವಿನಂತಿಸಿದ್ದಾರೆ.
.




