ವಸಯಿ ಕರ್ನಾಟಕ ಸಂಘದ ಅಧ್ಯಕ್ಷ, ಶ್ರೀ ರಜಕ ಸಂಘ ವಸಯಿ ವಲಯದ ಮಾಜಿ ಅಧ್ಯಕ್ಷ, ಉದ್ಯಮಿ, ಪಿ ದೇವೇಂದ್ರ ಬುನ್ನಾನ್ ಅವರು ಇಂದು (ಗುರುವಾರ, ನವೆಂಬರ್ 6, 2025) ಸಂಜೆ 4:05 ಕ್ಕೆ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣದಿಂದಾಗಿ ಸಂಘದ ಸದಸ್ಯರು ಮತ್ತು ಕನ್ನಡಿಗರ ವಲಯದಲ್ಲಿ ತೀವ್ರ ದುಃಖ ಮನೆ ಮಾಡಿದೆ.
ಸಂಘಕ್ಕೆ ಶ್ರೀ ಬುನ್ನಾನ್ ಅವರ ಸೇವೆ ಅಪಾರವಾಗಿದ್ದು, ಅವರ ನಿಧನಕ್ಕೆ ವಸಯಿ ಕರ್ನಾಟಕ ಸಂಘದ ಪದಾಧಿಕಾರಿಗಳು ಮತ್ತು ಸಮಸ್ತ ಸದಸ್ಯರು, ಶ್ರೀ ರಜಕ ಸಂಘದ ಪದಾಧಿಕಾರಿಗಳು, ಶ್ರೀ ರಜಕ ಸಂಘದ ವಸಯಿ ವಲಯದ, ಹಾಗೂ ಎಲ್ಲಾ ವಲಯದ ಪದಾಧಿಕಾರಿಗಳು,ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ, ಶುಕ್ರವಾರ (ನವೆಂಬರ್ 7, 2025) ಬೆಳಿಗ್ಗೆ 11:00 ಗಂಟೆಗೆ ನಡೆಯಲಿದೆ.
ಸ್ಥಳ: 1st ಫ್ಲೋರ್, ಜನಾರ್ಧನ್ ಪ್ಯಾಲೇಸ್, 60 Ft ರೋಡ್, ವಸಾಯಿ ಪಶ್ಚಿಮ.




