
ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಸಮಿತಿಯಲ್ಲಿ ಕೆ ಭೋಜರಾಜ್ ರವರಿಗೆ ನುಡಿ ನಮನ ಕಾರ್ಯಕ್ರಮವು ದಿನಾಂಕ 14.12.2025 ರಂದು 5 ಗಂಟೆಗೆ ಸರಿಯಾಗಿ ಸಂಘದ ವಠಾರದಲ್ಲಿ ಜರಗಿತು.

ಪ್ರಾರಂಭದಲ್ಲಿ ಗುರು ಪೂಜೆ ಮಾಡಿ ದಿವಂಗತ ಕೆ ಭೋಜರಾಜ್ ರವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಭೆಯನ್ನು ಪ್ರಾರಂಭಿಸಲಾಯಿತು.

ಪ್ರಾರಂಭದಲ್ಲಿ ಸ್ಥಳೀಯ ಸಮಿತಿಯ ಗೌ. ಕಾರ್ಯದರ್ಶಿಯವರು ಕೆ ಭೋಜರಾಜ್ ರವರ ಪರಿಚಯವನ್ನು ಸಭೆಯಲ್ಲಿ ತಿಳಿಸಿದರು ಶ್ರದ್ಧಾಂಜಲಿ ಅರ್ಪಿಸಿದರು. ತದನಂತರ ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಉಪಾಧ್ಯಕ್ಷರಾದ ಪುರುಷೋತ್ತಮ ಕೋಟ್ಯಾನ್ ಮತ್ತು ಭಾಸ್ಕರ್ ಕರ್ನಿರೆ, ಚಂದ್ರಹಾಸ ಪಾಲನ್, ದೇವದಾಸ್ ಗುಜರನ್, ದೇವರಾಜ್ ಪೂಜಾರಿ, ತಿಲಕ್ ಸನಿಲ್, ಮತ್ತು ಕಾರ್ಯಾಧ್ಯಕ್ಷರಾದ ಶ್ರೀಧರ್ ಬಿ ಅಮೀನ್ , ಪುರಂದರ ಪೂಜಾರಿ ಯವರು ಕೆ ಭೋಜರಾಜ್ ರವರಿಗೆ ನುಡಿ ನಮನ ಸಲ್ಲಿಸಿದರು.

ಕೊನೆಗೆ ಕೆ ಭೋಜರಾಜ್ ರವರಿಗೆ ಆತ್ಮಕ್ಕೆ ಪರಮಾತ್ಮ ಸದ್ಗತಿಯನ್ನು ಕೊಡಲಿ ಮತ್ತು ಸಮಾಜಕ್ಕೆ ಆದ ನಷ್ಟ ಮತ್ತು ಸಂಸಾರಕ್ಕೆ ಆದ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಗುರು ದೇವರು ಕೊಡಲಿ ಎಂದು ಎರಡು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು.




