ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ (NCUI), NAFCUB ಮತ್ತು ಕರ್ನಾಟಕ ಫೆಡರೇಶನ್ ಆಫ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗಳ ಸಹಯೋಗದೊಂದಿಗೆ ಇ-ಪ್ಲಸ್ ಇಂಟೆಲೆಕ್ಚುವಲ್ ಮೀಡಿಯಾ ಆಯೋಜಿಸಿದ್ದ ಸಹಕಾರಿ ಬ್ಯಾಂಕುಗಳ ಶೃಂಗಸಭೆಯಲ್ಲಿ, ನಮ್ಮ ಬ್ಯಾಂಕ್ನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಪ್ರತಿಷ್ಠಿತ “ಐಕಾನಿಕ್ ಲೀಡರ್ಸ್ – ಯೂತ್ ಚೇರ್ಮನ್ ಅವಾರ್ಡ್ 2025” ನೀಡಿ ಗೌರವಿಸಲಾಗಿದೆ. ಮಹಾರಾಷ್ಟ್ರದ ಖೋಪೋಲಿಯ ನೊವೊಟೆಲ್ ಹೋಟೆಲ್ನಲ್ಲಿ 2026ರ ಜನವರಿ 31ರಂದು ನಡೆದ ಸಮಾರಂಭದಲ್ಲಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ನ ಉಪ ಸಿಇಒ ಆದ ಗೋಪಾಲ್ ಎಂ. ಭಗತ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಗಮನಾರ್ಹ ಸಾಧನೆಯು ಕೇವಲ ದೂರದೃಷ್ಟಿಯ ನಾಯಕತ್ವವನ್ನು ಮಾತ್ರವಲ್ಲದೆ, ಭಾರತ್ ಬ್ಯಾಂಕ್ನ ಪ್ರತಿಯೊಬ್ಬ ಉದ್ಯೋಗಿಯ ಸಮೂಹ ಶ್ರದ್ಧೆ, ಶಿಸ್ತು ಮತ್ತು ತಂಡದ ಕೆಲಸವನ್ನು ಪ್ರತಿಬಿಂಬಿಸುತ್ತದೆ. ಇದು ಪಾರದರ್ಶಕತೆ, ನಾವೀನ್ಯತೆ, ಗ್ರಾಹಕರ ನಂಬಿಕೆ ಮತ್ತು ಸಹಕಾರಿ ಮೌಲ್ಯಗಳ ಬಗ್ಗೆ ನಮ್ಮ ಬ್ಯಾಂಕ್ ಹೊಂದಿರುವ ಬದ್ಧತೆಗೆ ಸಂದ ಗೌರವವಾಗಿದೆ ಎಂದು ಪ್ರಶಸ್ತಿ ಸ್ವೀಕರಿಸಿ ಸೂರ್ಯಕಾಂತ್ ಸುವರ್ಣ ಪ್ರತಿಕ್ರಿಯಿಸಿದರು.
ಈ ಹೆಮ್ಮೆಯ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ದಿನೇಶ್ ಬಿ. ಸಾಲ್ಯಾನ್ ಮತ್ತು ಸಿಐಎಸ್ಒ (CISO) ಭಾಸ್ಕರ್ ರಾವ್ ಅವರು ಉಪಸ್ಥಿತರಿದ್ದರು.




