September 6, 2026
Mumbai News Kannada
ಮುಂಬಯಿ

ಪಡುಬಿದ್ರಿ ಕಾಡಿಪಟ್ನ ಮೊಗವೀರ ವೆಲ್ಫೇರ್ ಎಸೋಸಿಯೆಷನ್, ಮುಂಬಯಿ : ವಾರ್ಷಿಕ ವಿಹಾರಕೂಟ





ಪಡುಬಿದ್ರಿ ಕಾಡಿಪಟ್ನ ಮೊಗವೀರ ವೆಲ್ಫೇರ್ ಎಸೋಸಿಯೇಷನ್ ಮುಂಬಯಿಯ ವತಿಯಿಂದ ವಾರ್ಷಿಕ ವಿಹಾರ ಕೂಟ 22/3/25ರ ಸಂಜೆಯಿಂದ 23/3/25ರ ಸಂಜೆ ತನಕ ಗೋರೈ ಮುಂಬಯಿಯ ಫಾರ್ಮ್ ರಿಜೆನ್ಸಿ ರೆಸಾರ್ಟ್ ನಲ್ಲಿ ಸಂಭ್ರಮ, ಉಲ್ಲಾಸದಿಂದ ಜರಗಿತು.
22ರ ಸಂಜೆ ನಡೆದ ವಿಚಾರ ವಿನಿಮಯ, ಚರ್ಚಾ ಕೂಟದಲ್ಲಿ ಮಹಾಸಭೆಯ ಮುಂದಿನ ಯೋಜನೆಗಳ ಬಗ್ಗೆ, ಸದಸ್ಯರಿಗೆ ನೀಡುವ ಆರ್ಥಿಕ ಸಹಾಯ ಹಾಗೂ ಇನ್ನಿತರ ವಿಷಯದ ಬಗ್ಗೆ ಚರ್ಚಿಸಲಾಯಿತು.
ಮರುದಿನ ಸದಸ್ಯರು ವಿವಿಧ ಮನೋರಂಜನೆ, ವಿನೋದವಳಿಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಸಭಾದ ಅಧ್ಯಕ್ಷರಾದ ಹರೀಶ್ ಪುತ್ರನ್ ಅವರ ಮುಂದಾಳತ್ವದಲ್ಲಿ ನಡೆದ ವಿಹಾರಕೂಟದಲ್ಲಿ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.
ಕಾರ್ಯದರ್ಶಿ ವಿಜಯ ಸಾಲ್ಯಾನ್ ಪಾಲ್ಗೊಂಡ ಎಲ್ಲರಿಗೂ ಕೊನೆಯಲ್ಲಿ ವಂದಿಸಿದರು.


ಅಧ್ಯಕ್ಷರಾದ ಹರೀಶ್ ಪುತ್ರನ್, ಉಪಾಧ್ಯಕ್ಷ ಶಶಿಕಾಂತ್ ಕೋಟ್ಯಾನ್, ಗೌರವ ಕಾರ್ಯದರ್ಶಿ ವಿಜಯ ಸಾಲ್ಯಾನ್, ಕೋಶಾಧಿಕಾರಿ ಹೇಮಂತ್ ಮೆಂಡನ್, ಸದಸ್ಯರುಗಳಾದ ಯುವರಾಜ್ ಶ್ರೀಯಾನ್, ಪುಷ್ಪರಾಜ್ ಕೋಟ್ಯಾನ್, ನಾರಾಯಣ ಕೋಟ್ಯಾನ್, ವಾಸುದೇವ ಸುವರ್ಣ, ಗಂಗಾಧರ ಬಂಗೇರ, ಗಣೇಶ್ ಬಂಗೇರ, ನಾರಾಯಣ ಬಂಗೇರ, ದೀಪಕ್ ಪುತ್ರನ್, ನಾಗೇಶ್ ಸಾಲ್ಯಾನ್, ಮಹೇಂದ್ರ ಕಾಂಚನ್, ದಿನರಾಜ ಸಾಲ್ಯಾನ್, ಜಗದೀಶ್ ಅಮೀನ್, ಜಯಶೀಲ ಕರ್ಕೇರ, ತೇಜಸ್ ಬಂಗೇರ, ಅಶೋಕ್ ಪುತ್ರನ್, ಕಿಶೋರ್ ಕಾಂಚನ್, ಯಶ್ವಂತ್ ಕರ್ಕೇರ, ಮಾಸ್ಟರ್ ಶ್ಲೋಕ್ ಕಾಂಚನ್ ವಿಹಾರ ಕೂಟದಲ್ಲಿ ಪಾಲ್ಗೊಂಡಿದ್ದರು.
ಪಡುಬಿದ್ರಿ ಕಾಡಿಪಟ್ನ ಮೊಗವೀರ ವೆಲ್ಫೇರ್ ಎಸೋಸಿಯೆಷನ್ ಸಮಾಜ ಬಾಂದವರಲ್ಲಿ ಸಹೋದರತ್ವ ಬೆಳೆಸುವುದರೊಂದಿಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ರಂಗದಲ್ಲಿ ಸೇವಾ ನಿರತವಾಗಿದೆ. ವೈದಕೀಯ ಶಿಬಿರ, ರಕ್ತದಾನ ಶಿಬಿರ, ಹಾಗೂ ಸದಸ್ಯರಿಗೆ ಆರ್ಥಿಕ ಸಹಾಯ ಮಾಡುತ್ತಿದೆ.



Related posts

ಕುಲಾಲ ಸಂಘ ಮುಂಬಯಿ: ಮಂಗಳೂರು ಕುಲಾಲ ಭವನ ಉದ್ಘಾಟನೆ: ಸಿಎಸ್‌ಟಿ-ಮುಲುಂಡ್-ಮಾನ್ಖುರ್ದ್ ಸ್ಥಳೀಯ ಸಮಿತಿಯವರಿಂದ ಆಮಂತ್ರಣ ಪತ್ರಿಕೆ ವಿತರಣಾ ಸಮಾರಂಭ

Mumbai News Desk

ಕರ್ನಾಟಕ ಸಂಘ ಪನ್ವೆಲ್ ಇದರ  34ನೇ ವಾರ್ಷಿಕೋತ್ಸವ.

Mumbai News Desk

ಸಾಫಲ್ಯ ಸೇವಾ ಸಂಘದ ಸ್ತ್ರೀ ಶಕ್ತಿ ಕಾರ್ಯಕ್ರಮ

Mumbai News Desk

ಬಂಟರ ಸಂಘ ಮುಂಬಯಿ ಮೀರಾ -ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗ ಆಯೋಜಿಸಿದ ಆರೋಗ್ಯ ಉಪನ್ಯಾಸ.

Mumbai News Desk

ಡಾ. ಪ್ರಾಜ್ಞಾ ಸಾಲ್ಯಾನ್ . ಎಂ. ಡಿ. ಎಸ್. ನಲ್ಲಿ ಉನ್ನತ ಸಾಧನೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಶ್ರೀಶ ಕುಶಾಲಪ್ಪ ಮೂಲ್ಯ ಗೆ ಶೇ 93.60 ಅಂಕ.

Mumbai News Desk