28.4 C
Mumbai
March 7, 2026
Mumbai News Kannada
ಮುಂಬಯಿ

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಕೋಪರಖೈರನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ 46ನೇ ಸಂಸ್ಥಾಪನಾ ದಿನಾಚರಣೆ





ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಕೋಪರ್‌ಖೈರನೆ ಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆಯನ್ನು ಅಗಸ್ಟ್ 21 ರಂದು ದೀಪ ಪ್ರಜ್ವಲಿಸಿ ಕೇಕ್ ಕತ್ತರಿಸುವ ಮೂಲಕ ಬಲು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರುಗಳಾದ ತೇಜ್ ಕುಮಾರ ಗೌಡ, ಇಂದಿರಾ ಅಂಚನ್, ಸುಭಾಷ್ ಚಾವ್ಲಾ, ಸುಧಾಕರ ಪೂಜಾರಿ, ಕರುಣಾಕರ ಶೆಟ್ಟಿ, ತರ‍್ಸೇಮ್ ಸಿಂಗ್ ಶೈನಿ, ವಿಜಯ್ ಕೇನಿಯ ಮುಂತಾದವರು ಉಪಸ್ಥಿತರಿದ್ದು ಭಾರತ್ ಬ್ಯಾಂಕಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಬ್ಯಾಂಕಿನ ಉತ್ತರೋತ್ತರ ಅಭಿವೃದ್ಧಿಗಾಗಿ ಶುಭ ಹಾರೈಸಿದರು.
ಅತಿಥಿಗಳಾಗಿ ಬಿಲ್ಲವರ ಅಶೋಸಿಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿಯ ಗೌರವಾಧ್ಯಕ್ಷ ಧರ್ಮದರ್ಶಿ ರಮೇಶ ಎಮ್. ಪೂಜಾರಿ, ಉಪಕಾರ್ಯಾಧ್ಯಕ್ಷ ವಿ. ಕೆ. ಸುವರ್ಣ ಹಾಗೂ ಕೃಷ್ಣ ಎಮ್. ಪೂಜಾರಿ ಶಾಖೆಗೆ ಭೇಟಿ ನೀಡಿ ಶುಭ ಹಾರೈಸಿದರು.
ಕೋಪರಖೈರನೆ ಶಾಖೆಯ ಪ್ರಬಂಧಕ ರಾಜೀವ ಎಮ್. ಪೂಜಾರಿ ಅತಿಥಿ ಗಣ್ಯರನ್ನು ಮತ್ತು ಗ್ರಾಹಕರನ್ನು ಸ್ವಾಗತಿಸಿದರು ಉಪಪ್ರಬಂಧಕ ಧರ್ಮೆಂದ್ರ ಸುವರ್ಣ ಸಿಬ್ಬಂದಿಗಳಾದ ಶ್ರೀನಿಧಿ ಬಂಗೇರ, ಚಂದ್ರಹಾಸ ಅಮೀನ, ಸ್ನೇಹಲ್ ಮೊರಾಜ್ಕರ್, ಶಿಥಿಲ್ ಕುಮಾರ್ ಮತ್ತು ರಿತಿಕಾ ಪೋಶಮ್ ಉಪಸ್ಥಿತರಿದ್ದರು



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ರಿಯಾನ್ ಸತೀಶ್ ಕೋಟ್ಯಾನ್ ಗೆ ಶೇ 94.20 ಅಂಕ.

Mumbai News Desk

ಮುಂಬಯಿ : ಫೆ. 1ರಿಂದ ಆಟೋರಿಕ್ಷಾ, ಟ್ಯಾಕ್ಸಿ ದರ 3ರೂ. ಏರಿಕೆ.

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಾರ್ಥನಾ ಪೂಜಾರಿಗೆ ಶೇ 94.40 ಅಂಕ.

Mumbai News Desk

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ).ಇದರ ವಾರ್ಷಿಕ ವಿಹಾರ ಕೂಟ

Mumbai News Desk

ಮುಂಬಯಿ ಕನ್ನಡ ಸಂಘ : ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk

ಎಲ್ಲರ ಬದುಕಲ್ಲಿ ಧರ್ಮ ಕಾರ್ಯಗಳು ನಡೆಯಲಿ: ಸಾಣೂರು ಸಾಂತಿಂಜ ಜನಾರ್ದನ ಭಟ್‌

Mumbai News Desk