32 C
Mumbai
March 7, 2026
Mumbai News Kannada
ಮುಂಬಯಿ

ಬಿಲ್ಲವರ ಎಸೋಸಿಯೇಷನ್ ಮುಂಬಯಿ, ನಲಾಸೋಪಾರ – ವಿರಾರ್  ಸ್ಥಳೀಯ ಸಮಿತಿಯ ಅರಸಿನ ಕುಂಕುಮ ಕಾರ್ಯಕ್ರಮ 





 

  ನಾಲಾಸೋಪಾರ    : ಬಿಲ್ಲವರ ಎಸೋಸಿಯೇಷನ್ ಮುಂಬಯಿ, ನಾಲಾಸೋಪಾರ – ವಿರಾರ್  ಸ್ಥಳೀಯ ಸಮಿತಿಯ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ ಫೆ. 11ರಂದು ಸಮಿತಿಯ  ಕಚೇರಿಯಲ್ಲಿ ನೆರವೇರಿತು. 

ಅರ್ಚಕರಾದ ಪ್ರವೀಣ್ ಸುವರ್ಣ ಮತ್ತು ನಾಗೇಶ್ ಕೋಟ್ಯಾನ್ ಪೂಜಾ ಕಾರ್ಯವನ್ನು ನೆರವೇರಿಸಿದರು. ಸಮಿತಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಮುಗಿದ ಬಳಿಕ  ಸಮಿತಿಯ   ಕಾರ್ಯಾಧ್ಯಕ್ಷರಾದ ಗಣೇಶ್ ವಿ ಸುವರ್ಣ,  ಉಪಾಧ್ಯಕ್ಷರಾದ ಆನಂದ್ ಕೋಟ್ಯಾನ್, ಸದಾಶಿವ ಪೂಜಾರಿ,  ಜೊತೆ ಕಾರ್ಯದರ್ಶಿ  ಶುಭ ಸುವರ್ಣ,  ಕೋಶಾಧಿಕಾರಿ ನಳಿನ ಪೂಜಾರಿ, ಮಹಿಳಾ ಸಂಚಾಲಕಿ ಲಕ್ಷ್ಮಿ ಎಸ್ ಕೋಟ್ಯಾನ್ ಮತ್ತು ಮಹಿಳಾ ಸದಸ್ಯರು ದೀಪ ಪ್ರಚಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.  

   ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪರಸ್ಪರ ಅರಸಿನ ಕುಂಕುಮ ತಿಲಕವನ್ನಿಟ್ಟು  ನೀಡಿ ಗೌರವಿಸಿದರು. 

ಈ ಶುಭ ಕಾರ್ಯಕ್ರಮದಲ್ಲಿ ಬಿಲ್ಲವರ ಎಸೋಸಿಯೇಷನ್ ಮುಂಬಯಿ ಅಧ್ಯಕ್ಷರಾದ ಹರೀಶ್ ಜಿ ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್  ಸಾಲ್ಯಾನ್ನ್, ಯುವ ವಿಭಾಗದ ಕಾರ್ಯಾಧ್ಯಕ್ಷರಾದ ನಿಲೇಶ್ ಪೂಜಾರಿ ಪಲಿಮಾರ್, ಕೇಂದ್ರ ಕಚೇರಿಯ ಪ್ರತಿನಿಧಿ ಕೇಶವ ಕೋಟ್ಯಾನ್,  ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ನಿರ್ದೇಶಕರಾದ ಮೋಹನ್ ದಾಸ್  ಪೂಜಾರಿ ಹಾಗೂ ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಹಲವಾರು ಗಣ್ಯರ ದಾನಿಗಳ ಸಹಕಾರದಿಂದ ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಲಾಯಿತು . ಕಾರ್ಯಕ್ರಮದ ಯಶಸ್ವಿಗಾಗಿ ಸದಸ್ಯರಾದ ದಯಾನಂದ ಬೊಂಟ್ರ, ಕಮಲಾಕರ ಸುವರ್ಣ, ಶೇಖರ ಪೂಜಾರಿ, ಮಲ್ಲಿಕಾ ಆರ್ ಪೂಜಾರಿ, ಪುಷ್ಪಕೋಟ್ಯಾನ್, ಶೋಭಾ ಕೆ ಪೂಜಾರಿ ,ರಾಜೇಶ್ ಕುಕ್ಯಾನ್, ಪುರಂದರ ಸಾಲ್ಯಾನ್,  ಶುಭಾ ಎಸ್. ಪೂಜಾರಿ, ಸಂಗೀತ ಅಮೀನ್, ವಾಣಿ ಬಿ ಕೋಟ್ಯಾನ್,  ರೋಹಿಣಿ ಪಿ. ಸಾಲಿಯಾನ್ , ಸುಮತಿ ಪೂಜಾರಿ,

ಹೇಮಾ ಎ ಪೂಜಾರಿ, ವನಿತಾ ಪೂಜಾರಿ, ಇಂದಿರಾ ಪೂಜಾರಿ,  ಯಶೋಧ ಕೋಟ್ಯಾನ್, ದೇವಕಿ ಕರ್ಕೇರ, ಸುಗಂಧಿ ಕೋಟ್ಯಾನ್, ಮಾಲತಿ ಆರ್ ಪೂಜಾರಿ, ವೀಣಾ ಅಂಚನ್, ವಿಮಲ್ ಎಸ್ ಸಾಲ್ಯಾನ್ ಸಹಕರಿಸಿದರು.

ಕಾರ್ಯಕ್ರಮಕ್ಕೆ ದಾನಿಗಳಾದ ಅಶೋಕ್ ಸಾಲ್ಯಾನ್, ಜ್ಯೋತಿ  ಎಂ ಸಾಲ್ಯಾನ್,  ಹರ್ಷಲ್ ಶ್ರೀಧರ ಪೂಜಾರಿ ಮತ್ತು ಮೀರಾ ದಹಾಣು ಬಂಟ್ಸ ನ  ಪದಾಧಿಕಾರಿಗಳು ಶುಭ ಎಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.



Related posts

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ 35ನೇ ವಾರ್ಷಿಕ ಮಹಾಪೂಜೆ

Mumbai News Desk

ಅಂಧೇರಿ ಪಶ್ಚಿಮ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಗೆ ಭೇಟಿ ನೀಡಿ ಭಕ್ತರನ್ನು ಹರಸಿದ ಶ್ರೀ ಓಡಿಯೂರು ಸ್ವಾಮಿ

Mumbai News Desk

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

Mumbai News Desk

ಮಾನನಷ್ಟ ಪ್ರಕರಣದಲ್ಲಿ ಸಂಜಯ್ ರಾವುತ್ ದೋಷಿ, ಜೈಲು ಶಿಕ್ಷೆ – ನ್ಯಾಯಾಲಯದ ಮಹತ್ತರ ನಿರ್ಧಾರ.

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ರಾಯರ ಆರಾಧನೆ

Mumbai News Desk

ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ;ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk