32 C
Mumbai
March 7, 2026
Mumbai News Kannada
ಕರಾವಳಿ

ಕುಲಶೇಖರ ಶ್ರೀ ವೀರನಾರಾಯಣ  ದೇವಸ್ಥಾನದ ಮೇಲ್ಟಾವಣಿಗೆ ಗುದ್ದಲಿ ಪೂಜೆ ,





ಶ್ರೀ ಕ್ಷೇತ್ರ  ಸುಂದರ ಮಾಯವಾಗುತ್ತದೆ ;ಮಾಣಿಲ ಶ್ರೀ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರಗೊಂಡು ಸುಂದರವಾಗಿ ದೈವಿಕವಾಗಿ ಪುನರ್ ನಿರ್ಮಾಣ ಗೊಂಡ  ದೇವಸ್ಥಾನದ ಅಂಗಣವನ್ನು ಮಳೆ, ಬಿಸಿಲಿನಿಂದ ರಕ್ಷಿಸಿ, ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 60 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಕ್ಷೇತ್ರಕ್ಕೆ ಮೇಲ್ಟಾವಣಿ  ನಿರ್ಮಾಣಕ್ಕಾಗಿ

ಗುದ್ದಲಿ ಪೂಜೆ ಮಾ29ನೇ ಶುಕ್ರವಾರ ಬೆಳಿಗ್ಗೆ  ಸುಮುಹೂರ್ತದಲ್ಲಿ ಶ್ರೀಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ  ಅನಂತ ಉಪಾಧ್ಯಾಯರ ಮತ್ತು ಶ್ರೀ ಹರಿ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು,

ಆಡಳಿತ ಮೊತ್ತೇಸರರು ಪುರುಷೋತ್ತಮ ಕುಲಾಲ್ ಕಲ್ಬಾವಿ,, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಯವರು ಉಪಸ್ಥಿತಿಯಲ್ಲಿ, ಮುಂಬೈಯ ದಾನಿ ದೇವಕಿ ಸುನಿಲ್ ಸಾಲಿಯನ್, ಡಾ. ಸುರೇಖಾ ರತನ್ ಕುಲಾಲ್ಇವರ ಯಜಮಾನಿಕೆಯಲ್ಲಿ ಧಾರ್ಮಿಕ ವಿಧಿಗಳು  ನಡೆದವು.

ಮಾಣಿಲ ಶ್ರೀಗಳು ಆಶೀರ್ವಚನ ನೀಡಿ ಕ್ಷೇತ್ರದಲ್ಲಿ ಧರ್ಮ ಕಾರ್ಯಗಳು ನಡೆಯುತ್ತಿರುವಾಗ  ಭಕ್ತರಿಗೆ  ಅನುಕೂಲಕ್ಕಾಗಿ  ಮತ್ತು ದೇವಸ್ಥಾನದ ಮಳೆ ಬಸಿಲಿನ ರಕ್ಷಣೆಗಾಗಿ,ಧ್ಯಾನ ಮತ್ತು  ಶುಭ ಕಾರ್ಯಗಳು ನಡೆಯುವುದಕ್ಕೆ ಸುತ್ತಲು ಮೇಲ್ಟಾವಣಿಗೆ ಅಗತ್ಯ ವಾಗಿದೆ ಅದರ ಯೋಜನೆಯನ್ನು ರೂಪಿಸಿ ಇರುವುದು ಅಗತ್ಯವಾಗಿತ್ತು ಈ ಮೂಲಕ ಕ್ಷೇತ್ರ ಇನ್ನಷ್ಟು ಸುಂದರಮಯವಾಗಲಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾದ ಎ ದಾಮೋದರ್  , ಸೇವ ಟ್ರಸ್ಟ್ ನ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್, ಸೇವಾ ಸಮಿತಿಯ ಅಧ್ಯಕ್ಷ ಕೆ. ಸುಂದರ ಕುಲಾಲ್ ಶಕ್ತಿನಗರ, ಮಹಿಳಾ ಮಂಡಳಿಯ ಅಧ್ಯಕ್ಷ  ಗೀತಾ ಮನೋಜ್ ಮರೋಳಿ,  ನ್ಯಾ. ರವೀಂದ್ರ ಮುನ್ನಿ ಪಾಡಿ, ಸುರೇಶ್ ಕುಲಾಲ್ ಮಂಗಳದೇವಿ ,ಗಿರಿಧರ್  ಜೆ ಮೂಲ್ಯ , ಕಸ್ತೂರಿ ಪಂಜ , ರೂಪ ಬಂಗೇರ,ಕುಂಬಾರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು  ಅಧ್ಯಕ್ಷ ನ್ಯಾ.ಭಾಸ್ಕರ್ ಪೆರುವಾಯಿ, ಎಂ .ಪಿ ಬಂಗೇರ,ಸದಾಶಿವ ಕುಲಾಲ್,  ನ್ಯಾ. ರಾಮ್ ಪ್ರಸಾದ್ ,ಪ್ರವೀಣ್ ಬಸ್ತಿ ,  ನ್ಯಾ. ಉದಯಾನಂದ  ,ದಿನೇಶ್ ಕುಲಾರ್ ಮುಂಬಯಿ, ಗಂಗಾಧರ್ ಬಂಜನ್, ಲl ಅನಿಲ್ ದಾಸ್. ನಾಗರಾಜ್ ಸುರತ್ಕಲ್, ಕಾರ್ಪೊರೇಟರ್ ಗಣೇಶ್ ಕುಲಾಲ್, ಆನಂದ ಉರ್ವ , ಮೋಹನ ದಾಸ್ ಅಲಪೆ, ಧೂಮಪ್ಪ ಮಂದಾರ ಬೈಲು, ವಿಶ್ವನಾಥ್ ಬಂಗೇರ,ನಾಗವೇಣಿ, ಚಂದ್ರಪ್ರಭ, 

ಸಿವಿಲ್ ಗುತ್ತಿಗೆದಾರ ಹೊನ್ನಪ್ಪ ಕುಲಾಲ್, ಸುರೇಶ್ ಕುಲಾಲ್ ಮುಂಬೈ, ವಿಶ್ವನಾಥ್ ವಾಮಂಜೂರು, ಸದಾಶಿವ ಬಿಜೈ, ವಿನಯ್ ಕುಮಾರ್.ಮತ್ತಿತರ ಗಣ್ಯರು ,ಭಕ್ತರು ಪಾಲ್ಗೊಂಡಿದ್ದರು,

Show quoted text



Related posts

ಶಾರದಾ ಪ್ರಿ ಯುನಿವರ್ಸಿಟಿ ಕಾಲೇಜ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

Mumbai News Desk

ಕೀನಾರ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಶ್ರೀ ಸಂತೋಷ್ ಶೆಟ್ಟಿಗೆ ಸನ್ಮಾನ

Mumbai News Desk

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ಸಂಸ್ಕೃತಿ ಸೌಧದ ಉಗ್ರಾಣ ತುಂಬಲಿ’: ಭಾಸ್ಕರ ರೈ ಕುಕ್ಕುವಳ್ಳಿ

Mumbai News Desk

ಅಯೋಧ್ಯೆಯಿಂದ ಬಂದು ಕಾಪು ಹೊಸ ಮಾರಿಗುಡಿ ದೇವಳದಲ್ಲಿ : 9 ದೀಪ ಬೆಳಗಿದ ಪೇಜಾವರ ಶ್ರೀಗಳು

Mumbai News Desk

ಸುರತ್ಕಲ್ ಸುಭಾಷಿತ ನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ

Mumbai News Desk

 ಜ7 : ಅತ್ತೂರು, ಗುಂಡ್ಯಡ್ಕ ಸಾರ್ವಜನಿಕ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಕ್ತ ಸಮಿತಿ, 46ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk