April 2, 2025
ಸುದ್ದಿ

ಎ.21,ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ.


ವರದಿ: ಉಮೇಶ್ ಕೆ.ಅಂಚನ್.


ಸದ್ಗುರು ಶ್ರೀ ಅನಿರುದ್ಧ ಬಾಪೂರವರ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್ ಮತ್ತದರ ಸಹ ಸಂಸ್ಥೆಗಳ ವತಿಯಿಂದ ಬೃಹತ್ ರಕ್ತದಾನ ಶಿಬಿರವು ಎ.21ರಂದು ಮಹಾರಾಷ್ಟ್ರದ ಮುಂಬಯಿ , ಪುಣೆ,ನಾಸಿಕ್, ನಾಗ್ಪುರ ಮುಂತಾದ ದೊಡ್ಡ ಪ್ರದೇಶದಲ್ಲಿ ಸೇರಿದಂತೆ ದೆಹಲಿ , ಮದ್ಯಪ್ರದೇಶ, ಕರ್ನಾಟಕ, ಗೋವಾ, ಗುಜರಾತ್ ರಾಜ್ಯಗಳು ಕೂಡಿ ಸುಮಾರು 120 ಕಡೆಗಳಲ್ಲಿ ನಡೆಯಿತು.


ಮುಂಬಯಿಯಲ್ಲಿ ಬಾಂದ್ರಾ ಪೂರ್ವದ ಖೇರ್ವಾಡಿ ನ್ಯೂ ಇಂಗ್ಲಿಷ್ ಹೈಸ್ಕೂಲ್ ವಠಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಬಿರವು ನಡೆದಿದ್ದು ಸುಮಾರು 7029 ರಷ್ಟು ಯೂನಿಟ್ ರಕ್ತ ಜಮಾ ಆಗಿದ್ದು ಪುಣೆಯಲ್ಲಿ 1020 ಯೂನಿಟ್ ಹಾಗೂ ಒಟ್ಟು ಮಹಾರಾಷ್ಟ್ರಾದ್ಯಂತ 14,327 ಯೂನಿಟ್ ರಕ್ತ ಸಂಗ್ರಹ ಆಗಿದೆ. ಈ ಪ್ರದೇಶಗಳಲ್ಲಿ ಒಟ್ಟು 166 ಬ್ಲಡ್ ಬ್ಯಾಂಕುಗಳು ಭಾಗವಹಿಸಿದ್ದವು.


ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರವು 1999 ರಿಂದ ಪ್ರತೀ ವರ್ಷ ನಡೆಯುತ್ತಿದ್ದು ಈ ತನಕ 2ಲಕ್ಷ ಯೂನಿಟ್ ರಕ್ತ ದಾನ ಮಾಡಿದೆ.

Related posts

ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಪತ್ತೆಯಾದ ಭಾಗ್ಯಶ್ರೀ ಯ ಪರಿವಾರ ಹುಡುಕ ಬಲ್ಲಿರಾ ?

Mumbai News Desk

ಕಾಂಗ್ರೆಸ್ ಗೆ ಕೈ ಕೊಟ್ಟ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ

Mumbai News Desk

ಐಸಿಎಸ್ ಸಿ  10 ತರಗತಿಯ ಫಲಿತಾಂಶ – ಪೂರ್ಣ ಶ್ರೀಧರ ಭಂಡಾರಿ.ಶೇ  98.2% ಅಂಕ 

Mumbai News Desk

ರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಮತ್ತು ಸಬಲೀಕರಣ ಸಮಸ್ಯೆಗಳ ಬಗ್ಗೆ ಚರ್ಚೆ.

Mumbai News Desk

ನಗರದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರಿಗೆ ಬೆಸ್ಟ್ ಡಾಕ್ಟರ್ ಆಫ್ ಮುಂಬೈ 2025 ಪುರಸ್ಕಾರ.

Mumbai News Desk

ಯಕ್ಷಗಾನ ಕಲಾವಿದ, ಹಾಸ್ಯ ಚಕ್ರವರ್ತಿ, ಅರುಣ್ ಕುಮಾರ್ ಜಾರ್ಕಳಗೆ ಕುಂದೇಶ್ವರ ಸಮ್ಮಾನ್

Mumbai News Desk