April 1, 2025
ಮುಂಬಯಿ

ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಎಸೋಸಿಯೇಶನ್ ಮುಂಬಯಿ 2ನೇ ವೈಜ್ಞಾನಿಕ ಸಭೆ, ಉಪನ್ಯಾಸ.

ಮುಂಬಯಿ ಮಹಾನಗರದ ಬಂಟ ವೈದರುಗಳ ಸಂಘಟನೆ ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಎಸೋಸಿಯೇಶನ್ ನ 2ನೇ ವೈಜ್ಞಾನಿಕ ಸಭೆ (2nd Scientific Meeting) ಮೇ 5ರಂದು ಸಂಜೆ, ಕುರ್ಲಾ ಪೂರ್ವ ಬಂಟರ ಭವನದ ವಿಸ್ತಾರಿತ ಸಂಕಿರ್ಣದ 2ನೇ ಮಹಡಿಯ ಸಭಾಗ್ರಹದಲ್ಲಿ ಎಸೋಸಿಯೇಶನ್ ನ ಅಧ್ಯಕ್ಷರಾದ ಡಾ. ಸುಧೀರ್ ಅಡ್ಯಂತಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂಧರ್ಭದಲ್ಲಿ ನಗರದ ಜನಪ್ರಿಯ ಹೃದ್ರೋಗ ತಜ್ಞ, ಸದಾನಂದ ಹೆಲ್ದಿ ಲಿವಿಂಗ್ ನ ಡಾ. ಸದಾನಂದ ಆರ್. ಶೆಟ್ಟಿ ಅವರು ‘ಹೃದಯ ಖಾಯಿಲೆ, ಅದ್ಯಾತ್ಮ ಮತ್ತು ಜೀವನ ಶೈಲಿ” ಕುರಿತು ಉಪನ್ಯಾಸ ನೀಡಿದರು. ಡಾ ಸದಾನಂದ ಶೆಟ್ಟಿ ಅವರು ಅಧ್ಯಾತ್ಮ ಮತ್ತು ಜೀವನ ಶೈಲೈಯಿಂದ ಹೇಗೆ ಸುಖಮಯವಾಗಿ, ಸರಳ ರೀತಿಯಲ್ಲಿ ಬದುಕಬಹುದು ಎಂದು ಬಹು ಸುಂದರವಾಗಿ ವ್ಯಖ್ಯಾನ ನೀಡಿದರು.
ನ್ಯಾಯವಾದಿ ಅಶೋಕ್ ಶೆಟ್ಟಿ ಅವರು “ವಿಲ್ ಮಾಡುವುದು ಹೇಗೆ” ಕುರಿತು (How to Make a Will)ಸೊಗಸಾಗಿ ವಿವರಣೆ ನೀಡಿದರು. ವಿಲ್ ಹೇಗೆ ಮಾಡುವುದು , ಯಾವಾಗ ವಿಲ್ ಮಾಡುವುದು ಮತ್ತು ವಿವಿಧ ಪ್ರಕಾರಗಳ ವಿಲ್ ಕುರಿತು ನ್ಯಾಯವಾದಿ ಅಶೋಕ್ ಶೆಟ್ಟಿ ಸವಿಸ್ತಾರವಾಗಿ ವಿವರಿಸುತ್ತಾ ವಿಲ್ ನ್ನು ಸಾಮಾನ್ಯ ಪೇಪರ್ ನಲ್ಲಿಯೂ ಮಾಡಬಹುದು, ಆದರೆ ಎರಡು ಸಾಕ್ಷಿಗಳು ಅತೀ ಮುಖ್ಯ ಎಂದು ತಿಳಿಸಿದರು.

ಜನಪ್ರಿಯ ವೈದ್ಯ, ಧಾರ್ಮಿಕ, ಸಾಮಾಜಿಕ ಕಳಕಳಿಯ ಡಾ. ರಂಜನ್ ಶೇಣವ ಸೇರಿದ್ದ ಎಲ್ಲರಿಗೂ ಹಾಗೂ ಸಹಕಾರ ನೀಡಿದವರಿಗೆ ಧನ್ಯವಾದ ಸಮರ್ಪಿಸಿದರು. ಡಾ. ಅಜಿತ್ ಶೆಟ್ಟಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.
ಡಾ. ಉದಯ ಶೆಟ್ಟಿ, ಡಾ. ಸುಹಾಸ್ ನಾಯಕ್, ಡಾ. ಶರತ್ ಶೆಟ್ಟಿ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದರು.
ಸಭೆಯಲ್ಲಿ ಒಟ್ಟು 87 ವೈದ್ದರುಗಳು ಉಪಸ್ಥಿತರಿದ್ದು,ಡಾ. ಸದಾನಂದ ಶೆಟ್ಟಿ ಹಾಗೂ ನ್ಯಾಯವಾದಿ ಅಶೋಕ್ ಶೆಟ್ಟಿ ಮಂಡಿಸಿದ ಎರಡು ಉಪಯುಕ್ತ, ವಿಭಿನ್ನ ವಿಷಯಗಳ ಬಗ್ಗೆ ವಿಶೇಷ ಮಾಹಿತಿ ಪಡೆದರು.

Related posts

ಗೋಕುಲದಲ್ಲಿ ಅತ್ಯಂತ ಸಂಭ್ರಮದಿಂದ ವೈಭವೀಕರಿಸಿದ  “ಪುರುಷರ ಮಹಾ ದಿನ” – ಪ್ರತಿಭಾ ಪ್ರದರ್ಶನ”

Mumbai News Desk

ದಿವಾಕರ್ ಕರ್ಕೇರರ ಅಭಿನಂದನಾ ಸಮಾರಂಭ.

Mumbai News Desk

ಮುಂಬಯಿಯ ಪ್ರಥಮ ಭೂಗತ ಮೆಟ್ರೋ 3ರ ಮೊದಲ ಹಂತ ಶೀಘ್ರವೇ ಕಾರ್ಯರಂಭ

Mumbai News Desk

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕಲ್ಲುರ್ಟಿ ಮಂತ್ರದೇವತಾ ಸಾನಿಧ್ಯ ಕೋಪರಖೈರಣೆ, ಧರ್ಮದೈವ ತಾಯಿ ಕಲ್ಲುರ್ಟಿಯ ಮಾಸಿಕ ಸಂಕ್ರಾಂತಿ ಸೇವೆ

Mumbai News Desk

ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಶನ್ ನ ಮಹಿಳಾ ಭಚತ್ ಘಟಕ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ ದೇವಸ್ಥಾನದ  ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk