30 C
Mumbai
April 24, 2026
Mumbai News Kannada
ಮುಂಬಯಿ

ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಎಸೋಸಿಯೇಶನ್ ಮುಂಬಯಿ 2ನೇ ವೈಜ್ಞಾನಿಕ ಸಭೆ, ಉಪನ್ಯಾಸ.





ಮುಂಬಯಿ ಮಹಾನಗರದ ಬಂಟ ವೈದರುಗಳ ಸಂಘಟನೆ ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಎಸೋಸಿಯೇಶನ್ ನ 2ನೇ ವೈಜ್ಞಾನಿಕ ಸಭೆ (2nd Scientific Meeting) ಮೇ 5ರಂದು ಸಂಜೆ, ಕುರ್ಲಾ ಪೂರ್ವ ಬಂಟರ ಭವನದ ವಿಸ್ತಾರಿತ ಸಂಕಿರ್ಣದ 2ನೇ ಮಹಡಿಯ ಸಭಾಗ್ರಹದಲ್ಲಿ ಎಸೋಸಿಯೇಶನ್ ನ ಅಧ್ಯಕ್ಷರಾದ ಡಾ. ಸುಧೀರ್ ಅಡ್ಯಂತಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಈ ಸಂಧರ್ಭದಲ್ಲಿ ನಗರದ ಜನಪ್ರಿಯ ಹೃದ್ರೋಗ ತಜ್ಞ, ಸದಾನಂದ ಹೆಲ್ದಿ ಲಿವಿಂಗ್ ನ ಡಾ. ಸದಾನಂದ ಆರ್. ಶೆಟ್ಟಿ ಅವರು ‘ಹೃದಯ ಖಾಯಿಲೆ, ಅದ್ಯಾತ್ಮ ಮತ್ತು ಜೀವನ ಶೈಲಿ” ಕುರಿತು ಉಪನ್ಯಾಸ ನೀಡಿದರು. ಡಾ ಸದಾನಂದ ಶೆಟ್ಟಿ ಅವರು ಅಧ್ಯಾತ್ಮ ಮತ್ತು ಜೀವನ ಶೈಲೈಯಿಂದ ಹೇಗೆ ಸುಖಮಯವಾಗಿ, ಸರಳ ರೀತಿಯಲ್ಲಿ ಬದುಕಬಹುದು ಎಂದು ಬಹು ಸುಂದರವಾಗಿ ವ್ಯಖ್ಯಾನ ನೀಡಿದರು.
ನ್ಯಾಯವಾದಿ ಅಶೋಕ್ ಶೆಟ್ಟಿ ಅವರು “ವಿಲ್ ಮಾಡುವುದು ಹೇಗೆ” ಕುರಿತು (How to Make a Will)ಸೊಗಸಾಗಿ ವಿವರಣೆ ನೀಡಿದರು. ವಿಲ್ ಹೇಗೆ ಮಾಡುವುದು , ಯಾವಾಗ ವಿಲ್ ಮಾಡುವುದು ಮತ್ತು ವಿವಿಧ ಪ್ರಕಾರಗಳ ವಿಲ್ ಕುರಿತು ನ್ಯಾಯವಾದಿ ಅಶೋಕ್ ಶೆಟ್ಟಿ ಸವಿಸ್ತಾರವಾಗಿ ವಿವರಿಸುತ್ತಾ ವಿಲ್ ನ್ನು ಸಾಮಾನ್ಯ ಪೇಪರ್ ನಲ್ಲಿಯೂ ಮಾಡಬಹುದು, ಆದರೆ ಎರಡು ಸಾಕ್ಷಿಗಳು ಅತೀ ಮುಖ್ಯ ಎಂದು ತಿಳಿಸಿದರು.

ಜನಪ್ರಿಯ ವೈದ್ಯ, ಧಾರ್ಮಿಕ, ಸಾಮಾಜಿಕ ಕಳಕಳಿಯ ಡಾ. ರಂಜನ್ ಶೇಣವ ಸೇರಿದ್ದ ಎಲ್ಲರಿಗೂ ಹಾಗೂ ಸಹಕಾರ ನೀಡಿದವರಿಗೆ ಧನ್ಯವಾದ ಸಮರ್ಪಿಸಿದರು. ಡಾ. ಅಜಿತ್ ಶೆಟ್ಟಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.
ಡಾ. ಉದಯ ಶೆಟ್ಟಿ, ಡಾ. ಸುಹಾಸ್ ನಾಯಕ್, ಡಾ. ಶರತ್ ಶೆಟ್ಟಿ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದರು.
ಸಭೆಯಲ್ಲಿ ಒಟ್ಟು 87 ವೈದ್ದರುಗಳು ಉಪಸ್ಥಿತರಿದ್ದು,ಡಾ. ಸದಾನಂದ ಶೆಟ್ಟಿ ಹಾಗೂ ನ್ಯಾಯವಾದಿ ಅಶೋಕ್ ಶೆಟ್ಟಿ ಮಂಡಿಸಿದ ಎರಡು ಉಪಯುಕ್ತ, ವಿಭಿನ್ನ ವಿಷಯಗಳ ಬಗ್ಗೆ ವಿಶೇಷ ಮಾಹಿತಿ ಪಡೆದರು.



Related posts

ಮುಂಬೈ : ಮೊದಲ ಮಹಿಳಾ ಬಿಎಂಸಿ ಆಯುಕ್ತರಾಗಿ ಅಶ್ವಿನಿ ಭಿಡೆ ನೇಮಕ

Mumbai News Desk

ಮುಂಬೈ: ಕುರ್ಲಾ ಬೆಸ್ಟ್ ಬಸ್ ಅಪಘಾತ ಪ್ರಕರಣ, ಚಾಲಕರನ್ನು ನೇಮಿಸಿಕೊಳ್ಳುವಲ್ಲಿ ಮತ್ತು ತರಬೇತಿ ನೀಡುವಲ್ಲಿ ನಿರ್ಲಕ್ಷ – ಪೊಲೀಸರ ಆರೋಪ

Mumbai News Desk

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ಸನ್ಮಾನ

Mumbai News Desk

ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಹಾಗೂ ಶನೀಶ್ವರ ಮಹಾಪೂಜೆ.

Mumbai News Desk

ಬಂಟರ ಸಂಘದ  ಜೋಗೇಶ್ವರಿ-ದಹಿಸರ್ ಪ್ರಾದೇಶಿಕ  ಸಮಿತಿಯ ಯುವ ವಿಭಾಗದ ವತಿಯಿಂದ ವಿಹಾರ ಕೂಟ.

Mumbai News Desk

ಶ್ರೀ ಮಹಿಷಮರ್ಧಿನಿ ದೇವಸ್ಥಾನ 34ನೇ ವಾರ್ಷಿಕ ಶರವನ್ನವರಾತ್ರಿ ಸಂನನ್ನ:

Mumbai News Desk