April 2, 2025
ಸುದ್ದಿ

ಕೊಂಡೆವೂರು ಶ್ರೀಗಳ 21 ನೇ ಚಾತುರ್ಮಾಸ್ಯ ವ್ರತಾಚರಣೆಉಪ್ಪಳ ಜು:    ಕೊಂಡೆವೂರು

 

ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ 21 ನೇ ಚಾತುರ್ಮಾಸ್ಯ ವ್ರತಸಂಕಲ್ಪವನ್ನು ಗುರುಪೂರ್ಣಿಮೆಯಂದು ತಾ 21.07.2024 ಆದಿತ್ಯವಾರ  ಕೊಂಡೆವೂರು ಮಠದಲ್ಲಿ ಕೈಗೊಳ್ಳಲಿದ್ದಾರೆ. ಆ ದಿನ ಬೆಳಿಗ್ಗೆ 9.00 ಕ್ಕೆ ಗಣಹೋಮ, ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತಾಭೀಷೇಕ, ಸೀಯಾಳಾಭೀಷೇಕ, 10.30 ಕ್ಕೆ ವ್ಯಾಸಪೂಜೆ ಆರಂಭವಾಗಿ 12.00 ಕ್ಕೆ ಮಂಗಳಾರತಿ, 12.30 ಕ್ಕೆ ಮಹಾಪೂಜೆ ನಂತರ ಅನ್ನಪ್ರಸಾದ ನಡೆಯಲಿದೆ. ಸಾಯಂಕಾಲ 7 ಕ್ಕೆ “ಶ್ರೀ ಗುರುಪಾದುಕಾ ಪೂಜೆ”, ಭಜನೆ ನಂತರ ಪರಮಪೂಜ್ಯರು ಸತ್ಸಂಗ ನಡೆಸಿ ಅನುಗ್ರಹ ಮಂತ್ರಾಕ್ಷತೆ ನೀಡಲಿದ್ದಾರೆ.

18.09.2024 ಕ್ಕೆ ಸಂಪನ್ನಗೊಳ್ಳಲಿರುವ ಚಾತುರ್ಮಾಸ್ಯದ ಈ  ಸತ್ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

    ಪ್ರತಿದಿನ ಸಂಜೆ 5.30 ರಿಂದ 7 ರವರೆಗೆ ವಿವಿಧ ಭಜನಾ ತಂಡಗಳಿ೦ದ ಭಜನಾಸೇವೆ ನಡೆಯಲಿದ್ದು, ಪ್ರತೀ ಭಾನುವಾರ ವಿದ್ವಾಂಸರಿ೦ದ ಪ್ರವಚನ, ಯಕ್ಷಗಾನ ತಾಳಮದ್ದಳೆ, ಭರತನಾಟ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ಚಾತುರ್ಮಾಸ್ಯದ ಈ ಪುಣ್ಯ ಸಮಯದಲ್ಲಿ ಭಕ್ತಾದಿಗಳು ಶ್ರೀ ಮಠಕ್ಕೆ ಆಗಮಿಸಿ ಶ್ರೀ ಗಾಯತ್ರೀ ಮಾತೆಯ ಹಾಗೂ ನಿತ್ಯಾನಂದ ಭಗವಾನರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಕೊಂಡೆವೂರು ಮಠದ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Related posts

ಮುಂಬಯಿಯಲ್ಲಿ ಜರಗಲಿರುವ ಶ್ರೀ ವಿಶ್ವಪ್ರಸನ್ನ ತೀರ್ಥರ ಜನ್ಮವರ್ದಂತಿ ಬಗ್ಗೆ ಪೂರ್ವಭಾವಿ ಸಭೆ.

Mumbai News Desk

ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅಭಿನಂದನೆ

Mumbai News Desk

ಸಮಾಜ ಸೇವಕ ಯೋಗೇಶ್ ಕೆ ಹೆಜ್ಮಾಡಿ‌‌ ದಂಪತಿ ಹಾಗೂ  ಗೋಪಾಲ್ ವಿ ಅಂಚನ್ ದಂಪತಿ ಆವರ ದಾಂಪತ್ಯ ಜೀವನದ ಸ್ವರ್ಣ  ಮಹೋತ್ಸವ  ಸಂಭ್ರಮ ಆಚರಣೆ,

Mumbai News Desk

ಕಟೀಲು:ಚಂದು ಪೂಜಾರಿ ನಿಧನ.

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿ. ಎಸ್ ಎಸ್ ಮನೋಹರ್ ಶೆಟ್ಟಿ ಅವರಿಗೆ ನುಡಿ ನಮನ.

Mumbai News Desk

ಮಜ್ ಗಾಂವ್ ನ ರಾಜ್ ಕಮಲ್ ಟೈಲರ್ಸ್ ನ ಮಾಲಕ ದೇವಪ್ಪ ಪೂಜಾರಿ ನಿಧನ

Mumbai News Desk