30.9 C
Mumbai
June 8, 2026
Mumbai News Kannada
ಸುದ್ದಿ

ಪಾಲ್ಘರ್ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ವತಿಯಿಂದ ಶ್ರೀ ರಾಮ ಪ್ರಸಾದ ವಿತರಣೆ





ಚಿತ್ರ, ವರದಿ : ಪಿ.ಆರ್.ರವಿಶಂಕರ್ 

 ಬೊಯಿಸರ್  ತಾ.22- 01- 2024

” ಆಯೋಧ್ಯೆಯಲ್ಲಿ ಶ್ರೀ ರಾಮ ಮೂರ್ತಿಯ ಪ್ರಾಣಪ್ರತಿಷ್ಟೆಯು ಜರಗುತ್ತಿದ್ದು ಈ ಐತಿಹಾಸಿಕ ಸಂದರ್ಭವನ್ನು ರಾಷ್ಟ್ರೀಯ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ.  ಬೊಯಿಸರ್ ನ ಶ್ರೀರಾಮ ಮಂದಿರದಲ್ಲಿ ಅಸಂಖ್ಯ ಭಕ್ತಾಭಿಮಾನಿಗಳು ಇಂದು ಶ್ರೀರಾಮಮಂದಿರ , ಮಹಾದೇವ ಮಂದಿರ ಹಾಗೂ ಸ್ವಾಮಿ ನಿತ್ಯಾನಂದ ಮಂದಿರಕ್ಕೆ ದರ್ಶನಾಕಾಂಕ್ಷಿಗಳಾಗಿ ಭೇಟಿ ನೀಡುತ್ತಿದ್ದಾರೆ. ಈ ವಿಶೇಷ ಕ್ಷಣಗಳ  ಸಂತಸವನ್ನು ಸಿಹಿ ಹಂಚಿಕೊಂಡು ಆಚರಿಸೋಣ ಎಂಬ ಸದುದ್ದೇಶದಿಂದ ಪ್ರಸಾದ ರೂಪದಲ್ಲಿ ಲಾಡೂ ಹಂಚುತ್ತಿದ್ದೇವೆ ” ಹೀಗೆಂದು ಪಾಲ್ಘರ್ ತಾಲೂಕು ಹೋಟೆಲ್ ಅಸೋಸಿಯೇಶನ್  ಅದ್ಯಕ್ಷರಾದ  ಶ್ರೀ  ರಘುರಾಮ್ ಎಮ್. ರೈ  ನುಡಿದರು.    ಬೊಯಿಸರ್ ಪಶ್ಚಿಮದಲ್ಲಿನ  ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಇಂದು ಆರಂಭಗೊಂಡ ಐದನೆಯ ವರ್ಷದ  ದೇವೀ ಜಪಪಾರಾಯಣ ಅನುಷ್ಟಾನ ಕಾರ್ಯಕ್ರಮದ    ಆರಂಭದಲ್ಲಿನ ದೀಪಪ್ರಜ್ವಲನೆಯ ಬಳಿಕ ಅವರು ಮಾತನಾಡುತ್ತಿದ್ದರು.

          ಶ್ರೀ  ಸ್ವಾಮಿ ನಿತ್ಯಾನಂದ ಮಂದಿರ , ಶ್ರೀ ರಾಮ ಮಂದಿರ ಹಾಗೂ ಮಹಾದೇವ ಮಂದಿರ ಈ ಮೂರು ಮಂದಿರಗಳು ಒಂದೇ ಸ್ಥಳದಲ್ಲಿದ್ದು ಅಲ್ಲಿನ  ಪೂರ್ಣ ಪರಿಸರವು ಇಂದು ರಂಗೋಲಿ, ದೀಪಾಲಂಕಾರ ಹಾಗೂ ಹೂ ತೋರಣಗಳಿಂದ ಅಲಂಕೃತವಾಗಿದ್ದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.  ಬೆಳಿಗ್ಗೆಯಿಂದ   ರಾತ್ರಿಯ ತನಕ  ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಂದಿರ ದರ್ಶನಕ್ಕೆ ಆಗಮಿಸಿದ್ದರು. ಶ್ರೀ ರಾಮ ಮಂದಿರದಲ್ಲಿ ಭಜನೆ ಹಾಗೂ ಶ್ರೀ ರಾಮಾಯಣದ ಪ್ರವಚನ ಕಾರ್ಯಕ್ರಮ ಜರಗಿತು. 

ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ದೇವೀ ಜಪಪಾರಾಯಣ ಹಾಗೂ ದೀಪೋತ್ಸವ ಜರಗಿತು.

ಮಂದಿರದ ಮುಖದ್ವಾರದಲ್ಲಿ ಸಿದ್ಧಗೊಳಿಸಿದ ಪ್ರಸಾದ ಬೂತ್ ನಲ್ಲಿ  ಆಗಮಿಸಿದ ಭಕ್ತಾದಿಗಳೆಲ್ಲರಿಗೂ ಸಿಹಿ ಲಾಡೂಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಹೋಟೆಲ್ ಅಸೋಸಿಯೇಶನ್ ನ ಸದಸ್ಯರು ಹಾಗೂ ಸ್ವಾಮಿ ನಿತ್ಯಾನಂದ ಭಕ್ತವೃಂದದ ಸದಸ್ಯರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಸಹಕರಿಸಿದರು.

ಚಿತ್ರ ಹಾಗೂ ವರದಿ

ಪಿ.ಆರ್.ರವಿಶಂಕರ್ ~8483980035

Photo journalist , Dahanu Road (W.Rly)



Related posts

ಜಾಗತಿಕ ಮಟ್ಟದಲ್ಲಿ ಕಾರ್ಕಳದ ಪ್ರತಿಭೆ: ಇಥಿಯೋಪಿಯದಲ್ಲಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ನಿಟ್ಟೆಯ ವಿಶಾಲ್ ಪೂಜಾರಿ

Mumbai News Desk

ಬಂಗಾಳದಲ್ಲಿ ಬಿಜೆಪಿ ಗೆಲುವು: ಹಲವು ವರ್ಷಗಳ ನಂತರ ತೆರೆದ ದುರ್ಗಾ ದೇವಸ್ಥಾನ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ  ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಿಗೆ ಅಭಿನಂದನೆ

Mumbai News Desk

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk

ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ), ಕೆ.ಎಸ್.ರಾವ್ ನಗರ ಮೂಲ್ಕಿ ಇದರ ಮಾಜಿ ಅಧ್ಯಕ್ಷರ ಧರ್ಮಪತ್ನಿ ಶ್ರೀ ಕುಸುಮ ಆರ್ ಸುವರ್ಣ ನಿಧನ

Mumbai News Desk

ವಸಯಿ ತಾಲೂಕ ಹೋಟೆಲ್ ಎಸೋಸಿಯೇಶನಿಂದ  ಪ್ರತಿಭಟನೆ

Mumbai News Desk