ಪಾಲ್ಘರ್ ( ತಾ. 26.07.2024)
ಪಾಲ್ಘರ್ ನ ಹಿರಿಯ ಹೋಟೆಲ್ ಉದ್ಯಮಿ ಹಾಗೂ ಶಹರ ಮಧ್ಯೆ ಇರುವ ನಿತ್ಯಾನಂದ ಹೋಟೆಲ್ ಮಾಲಕರಾದ ರಘು ಕೆ. ಶೆಟ್ಟಿ ( 76 ವ) ಇವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಸರಳ ವ್ಯಕ್ತಿತ್ವದ ಅವರು ಉದ್ಯಮಿಯಾಗಿ , ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಜನಾನುರಾಗಿ ಯಾಗಿದ್ದರು. ನಿತ್ಯಾನಂದ ಸ್ವಾಮಿಯವರ ಪರಮ ಭಕ್ತರಾಗಿದ್ದ ಇವರು ಬೊಯಿಸರ್ ನಿತ್ಯಾನಂದ ಮಂದಿರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
ಪತ್ನಿ , ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ ರಘು ಶೆಟ್ಟಿಯವರ ನಿಧನಕ್ಕೆ ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥ ಮಂಡಳಿ ಹಾಗೂ ಭಕ್ತವೃಂದದ ಸದಸ್ಯರು ಗಾಢ ಶೋಕವನ್ನು ವ್ಯಕ್ತ ಪಡಿಸುತ್ತಾ ಶೃದ್ಧಾಂಜಲಿಯನ್ನು ಅರ್ಪಿಸಿರುತ್ತಾರೆ.
ಸ್ಥಳೀಯ ಚಿತಾಗಾರದಲ್ಲಿ ಅಪರಾಹ್ನ ಅಂತ್ಯಕ್ರಿಯೆಯು ಜರಗಿದ್ದು ಬಂಧು ಮಿತ್ರರು , ಉದ್ಯಮಿಗಳು , ಅಸಂಖ್ಯ ತುಳುಕನ್ನಡಿಗರು ಭಾಗವಹಿಸಿದ್ದರು.
News sent by :
P.R.Ravishanker 8483980035