September 6, 2026
Mumbai News Kannada
ಸುದ್ದಿ

ಪಾಲ್ಘರ್ ರಘು ಶೆಟ್ಟಿ ನಿಧನ.





 ಪಾಲ್ಘರ್ ( ತಾ. 26.07.2024)

ಪಾಲ್ಘರ್ ನ ಹಿರಿಯ ಹೋಟೆಲ್ ಉದ್ಯಮಿ ಹಾಗೂ ಶಹರ ಮಧ್ಯೆ ಇರುವ ನಿತ್ಯಾನಂದ ಹೋಟೆಲ್ ಮಾಲಕರಾದ‌ ರಘು ಕೆ. ಶೆಟ್ಟಿ ( 76 ವ) ಇವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ  ಬೆಳಿಗ್ಗೆ ನಿ‍‍ಧನರಾಗಿದ್ದಾರೆ. ಸರಳ ವ್ಯಕ್ತಿತ್ವದ ಅವರು  ಉದ್ಯಮಿಯಾಗಿ , ಧಾರ್ಮಿಕ  ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಜನಾನುರಾಗಿ ಯಾಗಿದ್ದರು. ನಿತ್ಯಾನಂದ ಸ್ವಾಮಿಯವರ ಪರಮ ಭಕ್ತರಾಗಿದ್ದ ಇವರು ಬೊಯಿಸರ್ ನಿತ್ಯಾನಂದ ಮಂದಿರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

    ಪತ್ನಿ , ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ ರಘು ಶೆಟ್ಟಿಯವರ ನಿಧನಕ್ಕೆ ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದ ವಿಶ್ವಸ್ಥ ಮಂಡಳಿ ಹಾಗೂ ಭಕ್ತವೃಂದದ ಸದಸ್ಯರು ಗಾಢ ಶೋಕವನ್ನು ವ್ಯಕ್ತ ಪಡಿಸುತ್ತಾ ಶೃದ್ಧಾಂಜಲಿಯನ್ನು ಅರ್ಪಿಸಿರುತ್ತಾರೆ.

    ಸ್ಥಳೀಯ ಚಿತಾಗಾರದಲ್ಲಿ ಅಪರಾಹ್ನ ಅಂತ್ಯಕ್ರಿಯೆಯು ಜರಗಿದ್ದು ಬಂಧು ಮಿತ್ರರು , ಉದ್ಯಮಿಗಳು , ಅಸಂಖ್ಯ ತುಳುಕನ್ನಡಿಗರು ಭಾಗವಹಿಸಿದ್ದರು.

News sent by :

P.R.Ravishanker 8483980035



Related posts

ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಅವರಿಗೆ ಪರಿಸರ ಪ್ರೇಮಿ ಸಮಿತಿಯಿಂದ ಸ್ವಾಗತ.

Mumbai News Desk

ನಿಟ್ಟೆ ವಿಶ್ವವಿದ್ಯಾಲಯದ   ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೂಲ್ಕಿ ಜೀವನ್ ಕೆ. ಶೆಟ್ಟಿ  ಆಯ್ಕೆ

Mumbai News Desk

ಉಡುಪಿಯಲ್ಲಿ ನಡೆಯಲಿರುವ ‘ದೇವಾಡಿಗ ಮಹಾಧಿವೇಶನ 2026’: ಪಾವಂಜೆಯಲ್ಲಿ ಪೂರ್ವಭಾವಿ ಸಭೆ ಸಂಪನ್ನ

Mumbai News Desk

ಪೊವಾಯಿ: ರಾಘು ವಿ ಶೆಟ್ಟಿ ನಿಧನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಮುನಿರಾಜ್ ಜೈನ್ ಮತ್ತು ದಿ. ನ್ಯಾ. ಸುಭಾಷ್ ಶೆಟ್ಟಿ ಯವರಿಗೆ ನುಡಿ ನಮನ.

Mumbai News Desk

ರಾಷ್ಟ್ರ, ಕರ್ನಾಟಕ ಮತ್ತು ಮಹಾರಾಷ್ಟ್ರದ ಇಂದಿನ ಸಂಕ್ಷಿಪ್ತ ಮುಖ್ಯಾಂಶಗಳು

Mumbai News Desk