April 2, 2025
ಸುದ್ದಿ

ಸುರತ್ಕಲ್: ಸಿಲಿಂಡರ್ ಸ್ಫೋಟ ಪ್ರಕರಣ ತೀವ್ರವಾಗಿ ಗಾಯಗೊಂಡ ಮಹಿಳೆಯರಿಬ್ಬರ ಸಾವು

ಸುರತ್ಕಲ್ ನ ತಡಂಬೈಲ್ ವೆಂಕಟರಮಣ ಕಾಲೋನಿಯಲ್ಲಿ ಡಿಸೆಂಬರ್ 18ರಂದು ಮಧ್ಯಾಹ್ನ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಪರಿಣಾಮ ಗಾಯಗೊಂಡಿದ್ದ ವಸಂತಿ ಹಾಗೂ ಪುಷ್ಪ ಅವರು ಚಿಕಿತ್ಸೆ ಪಲ್ಲಿಕಾರಿಯಾಗಿದೆ ಸಾವನ್ನಪ್ಪಿದ್ದಾರೆ.
ಇಬ್ಬರಿಗೂ ಕಳೆದ 9 ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುಷ್ಪ ಶೆಟ್ಟಿ ಅವರು ಡಿಸೆಂಬರ್ 26ರಂದು ಸಾವನ್ನಪ್ಪಿದ್ದರೆ, ವಸಂತಿ ಶೆಟ್ಟಿ ಯವರು ಇಂದು ಇಹಲೋಕ ತ್ಯಜಿಸಿದರು.

ಗ್ಯಾಸ್ ಸೋರಿಕೆಯಾಗಿರುವುದು ಗಮನಕ್ಕೆ ಬಾರದೆ ವಸಂತಿ ಅವರು ಅಡುಗೆ ಕೋಣೆಯಲ್ಲಿನ ಸ್ಟವ್ ಗೆ ಬೆಂಕಿ ಹಚ್ಚಿದ್ದರಿಂದ ದೊಡ್ಡ ಮಟ್ಟದ ಸ್ಪೋಟವಾಗಿ ಬೆಂಕಿ ಹತ್ತಿಕೊಂಡಿತು.ವಸಂತಿ ಅವರನ್ನು ರಕ್ಷಿಸಲು ಹೋದ ಪುಷ್ಪ ಅವರಿಗೂ ತೀವ್ರ ತರಹದ ಸುಟ್ಟ ಗಾಯವಾಗಿತ್ತು.
ಕೂಡಲೇ ಸ್ಥಳೀಯರು ಧಾವಿಸಿ ಬಂದು ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನಪ್ಪಿದ್ದಾರೆ. ಮುಂಬಯಿ ನ್ಯೂಸ್ ನ ಮಂಗಳೂರು ಪ್ರತಿನಿಧಿ ಧನಂಜಯ ಶೆಟ್ಟಿ ಅವರ ತಾಯಿ ಪುಷ್ಪ ಶೆಟ್ಟಿ ಅವರ ದುರ್ದೈವದ ಮರಣಕ್ಕೆ ಮುಂಬಯಿ ನ್ಯೂಸ್ ನ ನಿರ್ದೇಶಕ ಕುಮಾರ ಬಂಗೇರ ಮತ್ತು ಸಿಬ್ಬಂದಿ ವರ್ಗ ಸಂತಾಪ ವ್ಯಕ್ತ ಪಡಿಸಿದ್ದಾರೆ.

Related posts

ತುಳು ಕೂಟದ ಫೌಂಡೇಶನ್, ನಲ್ಲಸೋಪಾರ , ಶ್ರೀದೇವಿ ಯಕ್ಷಕಲಾ ನಿಲಯ ವಿರಾರ್-ನಲ್ಲಸೋಪರ  ವಾರ್ಷಿಕೋತ್ಸವ ದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಚೀನಾದ  ಮಿಲಿಯನ್ ಡಾಲರ್ ರೌಂಡ್ ಟೇಬಲ್ ಅಧೀವೇಶನಕ್ಕೆ ಸ್ಪೀಕ‌ರ್ ಆಗಿ   ಡಾ| ಆರ್.ಕೆ ಶೆಟ್ಟಿ ಆಯ್ಕೆ

Mumbai News Desk

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಮಯೂರ್ ಉಳ್ಳಾಲ್ ಆಯ್ಕೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (NGO); ಜಿಲ್ಲೆಯ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಡಿ. ಆರ್. ರಾಜು ನಿಧನಕ್ಕೆ ಶ್ರದ್ದಾಂಜಲಿ ಸಭೆ

Mumbai News Desk

ಮಜ್ ಗಾಂವ್ ನ ರಾಜ್ ಕಮಲ್ ಟೈಲರ್ಸ್ ನ ಮಾಲಕ ದೇವಪ್ಪ ಪೂಜಾರಿ ನಿಧನ

Mumbai News Desk