30 C
Mumbai
April 24, 2026
Mumbai News Kannada
ಸುದ್ದಿ

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ಅಧ್ಯಕ್ಷರಾಗಿ ಲವ ಎನ್. ಕರ್ಕೇರ ಮರು ಆಯ್ಕೆ.





ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು – ಅಧ್ಯಕ್ಷರಾಗಿ ಲವ ಎನ್. ಕರ್ಕೇರ ಮರು ಆಯ್ಕೆ.

ಕಾಪು , ಮಾ5:: ಕಾಪುವಿನಲ್ಲಿ ಹಲವು ವರ್ಷಗಳಿಂದ ಕಾರ್ಯಚರಿಸುತ್ತಿರುವ ಜನಪ್ರಿಯ ಆರ್ಥಿಕ ಸಂಸ್ಥೆ ” ಅಕ್ಷಯಧಾರ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ” ಇದರ ನಿರ್ದೇಶಕ ಮಂಡಳಿಯ ಸಭೆಯು ಮಾರ್ಚ್ 5ರಂದು ನಡೆಯಿತು.


ಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ , ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲವ ಕರ್ಕೆರ ಅವರು ಸತತ ಮೂರನೇ ಅವಧಿಗೆ ಆರ್ಥಿಕ ಸಂಸ್ಥೆಯ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಕ್ಷಯಧಾರಾ ಸೊಸೈಟಿಯ ಉಪಾಧ್ಯಕ್ಷರಾಗಿ ಇರ್ಫಾನ್ , ನಿರ್ದೇಶಕರುಗಳಾಗಿ ಜಗದೀಶ್ ಮೆಂಡನ್, ಶಿವರಾಂ ಆಚಾರ್ಯ , ಉತ್ತಮ್ ಕುಮಾರ್ ಬಂಗೇರಾ, ಪ್ರದೀಪ್ .ಯು. , ರಮೇಶ್ ಶೆಟ್ಟಿ ಕಲ್ಯ , ಯೊಗೀಶ್ ಆಚಾರ್ಯ , ಶಾಫಿ , ನಂದಕಿಶೊರ್ , ಶ್ರೀಮತಿ ಸುಜಾತ ಹಾಗೂ ಶ್ರೀಮತಿ ವಿಮಲ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಜಯಂತಿ ಅವರು ಕರ್ತವ್ಯ ನಿರ್ವಹಿಸಿದರು.
ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಳೆದ 14 ವರ್ಷಗಳಿಂದ ತನ್ನ ಉತ್ಕರ್ಷ ಸೇವೆ, ಹಾಗೂ ಆಕರ್ಷಕ ಬಡ್ಡಿದರದ ಸಾಲ, ಸೌಲ್ಯಭ್ಯದಿಂದ ಗ್ರಾಹಕರ, ಠೇವಣಿದಾರರ, ಉದ್ದಿಮೆದಾರರ ಮೆಚ್ಚಿನ ಆರ್ಥಿಕ ಸಂಸ್ಥೆಯಾಗಿದೆ.



Related posts

ಮೂಲತ್ವ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ

Mumbai News Desk

ಬಗ್ವಾಡಿ, ಬಚ್ಚು ಸಿ ಕುಂದರ್ ನಿಧನ

Mumbai News Desk

ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ, 18 ಜನರ ಸಾವು

Mumbai News Desk

ಬೆಂಗಳೂರು : ರಾಜ್ಯಪಾಲರಿಂದ ಗೀತಾಲಕ್ಷ್ಮಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ: ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗೆ ಮನ್ನಣೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ-ನಿರ್ದೇಶಕರಾಗಿ  ಬೆಳ್ಳಾಡಿ ಅಶೋಕ್ ಶೆಟ್ಟಿ ಸೇರ್ಪಡೆ

Mumbai News Desk

ಸಮಾಜ ಸೇವೆಯ ಕಾರ್ಯ ಸಾಧನೆಗೆ  ಸದಾನಂದ ಕಾರ್ಕಳ  ರವರಿಗೆ “ಕಾಯಕ ರತ್ನ ” ಪ್ರಶಸ್ತಿ.

Mumbai News Desk