April 2, 2025
ಸುದ್ದಿ

ನಗರದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಅವರಿಗೆ ಬೆಸ್ಟ್ ಡಾಕ್ಟರ್ ಆಫ್ ಮುಂಬೈ 2025 ಪುರಸ್ಕಾರ.

ಸಾಯನ್ ನಲ್ಲಿ ಸದಾನಂದ ಹೆಲ್ದಿ ಲಿವಿಂಗ್ (Sadanand Healthy Living) ವೈದ್ಯಕೀಯ ಕೇಂದ್ರದ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿರುವ, ಡಾ. ಸದಾನಂದ ಆರ್ ಶೆಟ್ಟಿ ಅವರು ಮುಂಬೈಯ ಉತ್ತಮ ಡಾಕ್ಟರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಔಟ್ ಲುಕ್ ಮೆಗಾಸಿನ್ ಪ್ರತಿ ವರ್ಷ ನೆಬಿ ಮೀಡಿಯಾದ ಮೂಲಕ ದೇಶದ ಪ್ರಾಮುಖ್ಯ ನಗರಗಳಲ್ಲಿ ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರುಗಳ ಸಮೀಕ್ಷೆ ನಡೆಸಿ ಪ್ರಶಸ್ತಿ ನೀಡುತ್ತಿದ್ದು, ಮುಂಬೈಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹೃದಯಶಾಸ್ತ್ರ ವಿಭಾಗಗಳಲ್ಲಿ ಸಾಯನ್ ನ ಡಾ. ಸದಾನಂದ ಆರ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದೆ.
ಡಾ. ಸದಾನಂದ ಶೆಟ್ಟಿ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಡಾಕ್ಟರೇಟ್ ಇನ್ ಮೆಡಿಕಲ್ ( ಹೃದ್ರೋಗ), ಎಂ. ಡಿ. (ಮೆಡಿಕಲ್ ), ಎಫ್ಎಸಿಸಿ, ಎಫ್ಎಸ್ಸಿಎಐ ( ಅಮೇರಿಕ) ಪದವೀಧರರಾಗಿದ್ದರೆ.
ಲಿಪಿಡ್ ಅಸೋಸಿಯೇಷನ್ ಆಫ್ ಇಂಡಿಯಾ, ಇದರ ಸಂಘಟನಾ ಕಾರ್ಯದರ್ಶಿಯಾಗಿರುವ ಡಾ. ಸದಾನಂದ ಶೆಟ್ಟಿ ಅವರು, ಡಿ. ವೈ. ಪಾಟೀಲ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಇದರ ವಿಶ್ರಾಂತ ಪ್ರಾಚಾರ್ಯ ಆಗಿರುವರು. ಪ್ರಸ್ತುತ ಡಾ. ಸದಾನಂದ ಶೆಟ್ಟಿ ಅವರು ಸೋಮಯ್ಯ ಸೂಪರ್ ಸ್ಪೆಷಾಲಿಟಿ ಇನ್ಸ್ಟಿಟ್ಯೂಟ್, ಮುಂಬಯಿ, ಇದರ ಹೃದ್ರೋಗ ವಿಭಾಗದ ನಿರ್ದೇಶಕರಾಗಿರುವರು.
ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ, ಅತಿಕಾರಿಬೆಟ್ಟು ದೆಪ್ಪುಣಿಗುತ್ತು ಮನೆತನದವರಾದ ಡಾ. ಸದಾನಂದ ಶೆಟ್ಟಿ ಅವರು ಮುಂಬೈ ಬಂಟ್ಸ್ ಮೆಡಿಕಲ್ ಪ್ರಾಕ್ಟಿಶನರ್ಸ್ ಅಸೋಸಿಯೇಶನ್ ಸಂಚಾಲಕರಾಗಿಯೂ, ಕನ್ನಡ ಸಂಘ ಸಯನ್ ನ ಸಲಹೆಗಾರರಾಗಿಯೂ ಸೇವಾ ನಿರತರಾಗಿರುವರು.
ಡಾ. ಸದಾನಂದ ಶೆಟ್ಟಿ ಅವರಿಗೆ ಸತತವಾಗಿ 5ನೇ ಬಾರಿ ಬೆಸ್ಟ್ ಡಾಕ್ಟರ್ ಆಫ್ ಮುಂಬೈ ಪ್ರಶಸ್ತಿ ಲಭಿಸಿರುವುದು ವಿಶೇಷವಾಗಿದೆ.

.

Related posts

ಬೆಂಗಳೂರಲ್ಲಿ ಮುಂಬಯಿಯ ನಿಶಿತ ಸೂರ್ಯಕಾಂತ್ ಸುವರ್ಣರ ಇಮೇಜ್ ಕನ್ಸಲ್ಟೆಂಟ್ ನ ಅದ್ದೂರಿಯ ಕರ್ನಾಟಕ ಸ್ಟೈಲ್ ಐಕಾನ್ 2023 ಕಾರ್ಯಕ್ರಮ

Mumbai News Desk

ಕಾಂಗ್ರೆಸ್ ಗೆ ಕೈ ಕೊಟ್ಟ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ

Mumbai News Desk

ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ ನಿಧನ

Mumbai News Desk

ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರಿಗೆ ಮಾತೃ ವಿಯೋಗ

Mumbai News Desk

ನ್ಯೂ ಪನ್ವೇಲ್ ನ ನಗರ ಸೇವಕ ಸಂತೋಷ್ ಜಿ ಶೆಟ್ಟಿ ಸಾಯೋಗದಲ್ಲಿ ಶ್ರೀ ಜೈ ಅಂಬೇ ಮಾತಾ ಮಂದಿರ ದ ಮೈದಾನದಲ್ಲಿ  ಶ್ರೀ ರಾಮ ಮಹೋತ್ಸವ ಸಂಭ್ರಮ ಆಚರಣೆ .

Mumbai News Desk

ಕರ್ನಿರೆ ವಿಶ್ವನಾಥ್ ಶೆಟ್ಟಿ ಯವರಿಗೆ ಮಾತೃ ವಿಯೋಗ

Mumbai News Desk