32 C
Mumbai
March 7, 2026
Mumbai News Kannada
ಮುಂಬಯಿ

ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಅರಶಿನ ಕುಂಕುಮ, ವಿಧವೆಯರಿಗೆ  ಸೀರೆ, ಧನ ಸಹಾಯ ವಿತರಣೆ





  ಮಹಿಳೆಯರೆಲ್ಲರೂ ಒಗ್ಗಟ್ಟಾದಾಗ  ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ: ನಿಶಿತಾ ಸೂರ್ಯಕಾಂತ್ ಸುವರ್ಣ

  ಜಯ ಸುವರ್ಣ ಅಭಿಮಾನಿಗಳ ಪ್ರಾಯೋಜಕತ್ವದಲ್ಲಿ ಮುಂಬೈ ಬಿಲ್ಲವರು ಆಯೋಜಿಸಿದ ಅರಶಿನ ಕುಂಕುಮ ಕಾರ್ಯಕ್ರಮ ಫೆ.1 ರಂದು ಗೊರೇಗಾವ್ ಪೂರ್ವದ ಜಯಲೀಲಾ ಬ್ಯಾಂಕ್ವೇಟ್ ಹಾಲ್ ನಲ್ಲಿ ಜರಗಿತು.

   ಅಪರಾಹ್ನದಿಂದ  ಸಂಜೆ ತನಕ  ನಗರದ ವಿವಿಧ ಉಪನಗರಗಳಿಂದ ಆಗಮಿಸಿದ ಮಹಿಳೆಯರಿಂದ ಭಜನಾ ಸಂಕೀರ್ತನ  ಜರಗಿತು. ತದ ನಂತರ ಅರಶಿನ ಕುಂಕುಮದ ಸಭಾ ಕಾರ್ಯಕ್ರಮವನ್ನು ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣರ ಪತ್ನಿ ,ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ ವ್ಯವಸ್ಥಾಪಕಿ ನಿಶಿತಾ ಸೂರ್ಯಕಾಂತ್ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಬಹಳ ಉತ್ಸಾಹದಿಂದ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀರಿ, ಇದನ್ನು ಕಂಡಾಗ ಸಂತೋಷವಾಗುತ್ತದೆ, ನಾವೆಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಬಲಿಷ್ಠ ಗೊಳಿಸಬೇಕಾಗಿದೆ, ಅದಕ್ಕಾಗಿ ಮುಂದೆ ಮಹಿಳೆಯರೆಲ್ಲರೂ ಒಗ್ಗಟ್ಟಾಗಿ ಮಹಿಳಾ ದಿನಾಚರಣೆ ಮತ್ತಿತರ ಕಾರ್ಯಕ್ರಮಗಳನ್ನು ಒಗ್ಗಟ್ಟಿನಿಂದ ಆಚರಿಸೋಣ. ಇದು ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರದಿಂದ ಸಾಧ್ಯವಾಗುತ್ತದೆ, ಸಮಾಜ ಸೇವೆಯನ್ನು  ನಾವೆಲ್ಲರೂ  ಹೊಂದಾಣಿಕೆಯಿಂದ ಮಾಡೋಣ, ಮಹಿಳೆಯರ ಸಂಘಟನಾ ಚತುರತೆಗೆ ವೇದಿಕೆ ನಿರ್ಮಿಸೋಣ ಎಂದು ನುಡಿದರು

ಈ ಸಂದರ್ಭದಲ್ಲಿ  ಅತಿಥಿಗಳಾದ  ಶೋಭಾ ದಯಾನಂದ್,  ಪ್ರಭಾ ಎನ್ ಸುವರ್ಣ,  ಸುಕೇಶಿನಿ ವೈ ಪೂಜಾರಿ,  ಸಭಿತಾ ಜಿ ಪೂಜಾರಿ,  ಕುಮುದಾ ಪೂಜಾರಿ,  ಮಮತಾ ಎಸ್ ಪೂಜಾರಿ,  ವನಿತಾ ಎ ಕುಕ್ಯಾನ್, ಮಾಲತಿ ಬಂಗೇರ,  ಹೇಮಲತಾ ಪೂಜಾರಿ,  ದೇವಕಿ ಎಸ್ ಕರ್ಕೇರ ಹಾಗೂ  ಶಶಿಕಲಾ ಕೋಟ್ಯಾನ್ ದೀಪ ಬೆಳಗಿಸಿದರು.

    ಮುತ್ತೈದೆಯರ ಅರಶಿನ ಕುಂಕುಮ ಮಹತ್ವದ ಕುರಿತು  ಬಬಿತ ಡಿ ಪೂಜಾರಿ ಮಾತನಾಡಿದರು, ಕಾರ್ಯಕ್ರಮದಲ್ಲಿ 23 ವಿಧವೆಯರಿಗೆ  ಸೀರೆ ಮತ್ತು ಧನ ಸಹಾಯ ನೀಡಿ ಮತ್ತೈದೆಯರು ಹಾಗೂ ಹಿರಿಯ ಗಣ್ಯ ವ್ಯಕ್ತಿಗಳು  ಗೌರವಿಸಿದರು. 

  ಕಾರ್ಯಕ್ರಮದಲ್ಲಿ ಮುಂಬೈಯ ವಿವಿಧ ಉಪನಗರಗಳಿಂದ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು . ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳಿಗೆ ಹಾಗೂ ಪಾಲ್ಗೊಂಡ ಎಲ್ಲರಿಗೂ ಜಯ ಸುವರ್ಣ ಅಭಿಮಾನಿಗಳಿಂದ, ಮುಂಬೈ ಬಿಲ್ಲವರಿಂದ ಧನ್ಯವಾದ ಸಮರ್ಪಸಲಾಯಿತು.



Related posts

ಸದ್ಗುರು ಅನಿರುದ್ಧ ಕನ್ನಡ ಉಪಾಸನಾ ಕೇಂದ್ರದ ಧಾರ್ಮಿಕ ಪ್ರವಾಸ.

Mumbai News Desk

ಎಸ್ ಎಸ್ ಸಿ ಯಲ್ಲಿ ಅದಿತಿ ಆರ್ ಶೆಟ್ಟಿ ಯವರಿಗೆ ಶೇಕಡಾ 96.20 ಅಂಕ

Mumbai News Desk

ಬಿಎಂಸಿ ಚುನಾವಣೆ 2026: ಮುಂಬೈ ಮಹಾಸಮರಕ್ಕೆ ಕ್ಷಣಗಣನೆ; ನಾಳೆ ಮತದಾನ

Mumbai News Desk

ಡಿಸೆಂಬರ್ 8, 9 ರಂದು ಮುಂಬೈನ ಅರ್ಧಕ್ಕಿಂತ ಹೆಚ್ಚು ಭಾಗಕ್ಕೆ ಶೇ 15ರಷ್ಟು ನೀರಿನ ಕಡಿತ

Mumbai News Desk

ತ್ರಿಶಾ ಉದಯ ಶೆಟ್ಟಿ ಶೇಗೆ   80.00 %

Mumbai News Desk

ಮುಂಬೈ ನ ಎಲ್ಲಾ ಕಟ್ಟಡಗಳಿಗೆ ‘ಒಸಿ’ (ಆಕ್ಯುಪೇಷನ್ ಸರ್ಟಿಫಿಕೇಟ್) ನೀಡಲು ಗೋಪಾಲ್ ಶೆಟ್ಟಿ ಆಗ್ರಹ

Mumbai News Desk