July 23, 2026
Mumbai News Kannada
ಮುಂಬಯಿ

ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಅರಶಿನ ಕುಂಕುಮ, ವಿಧವೆಯರಿಗೆ  ಸೀರೆ, ಧನ ಸಹಾಯ ವಿತರಣೆ







  ಮಹಿಳೆಯರೆಲ್ಲರೂ ಒಗ್ಗಟ್ಟಾದಾಗ  ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ: ನಿಶಿತಾ ಸೂರ್ಯಕಾಂತ್ ಸುವರ್ಣ

  ಜಯ ಸುವರ್ಣ ಅಭಿಮಾನಿಗಳ ಪ್ರಾಯೋಜಕತ್ವದಲ್ಲಿ ಮುಂಬೈ ಬಿಲ್ಲವರು ಆಯೋಜಿಸಿದ ಅರಶಿನ ಕುಂಕುಮ ಕಾರ್ಯಕ್ರಮ ಫೆ.1 ರಂದು ಗೊರೇಗಾವ್ ಪೂರ್ವದ ಜಯಲೀಲಾ ಬ್ಯಾಂಕ್ವೇಟ್ ಹಾಲ್ ನಲ್ಲಿ ಜರಗಿತು.

   ಅಪರಾಹ್ನದಿಂದ  ಸಂಜೆ ತನಕ  ನಗರದ ವಿವಿಧ ಉಪನಗರಗಳಿಂದ ಆಗಮಿಸಿದ ಮಹಿಳೆಯರಿಂದ ಭಜನಾ ಸಂಕೀರ್ತನ  ಜರಗಿತು. ತದ ನಂತರ ಅರಶಿನ ಕುಂಕುಮದ ಸಭಾ ಕಾರ್ಯಕ್ರಮವನ್ನು ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣರ ಪತ್ನಿ ,ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆ ವ್ಯವಸ್ಥಾಪಕಿ ನಿಶಿತಾ ಸೂರ್ಯಕಾಂತ್ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಬಹಳ ಉತ್ಸಾಹದಿಂದ  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀರಿ, ಇದನ್ನು ಕಂಡಾಗ ಸಂತೋಷವಾಗುತ್ತದೆ, ನಾವೆಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಬಲಿಷ್ಠ ಗೊಳಿಸಬೇಕಾಗಿದೆ, ಅದಕ್ಕಾಗಿ ಮುಂದೆ ಮಹಿಳೆಯರೆಲ್ಲರೂ ಒಗ್ಗಟ್ಟಾಗಿ ಮಹಿಳಾ ದಿನಾಚರಣೆ ಮತ್ತಿತರ ಕಾರ್ಯಕ್ರಮಗಳನ್ನು ಒಗ್ಗಟ್ಟಿನಿಂದ ಆಚರಿಸೋಣ. ಇದು ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರದಿಂದ ಸಾಧ್ಯವಾಗುತ್ತದೆ, ಸಮಾಜ ಸೇವೆಯನ್ನು  ನಾವೆಲ್ಲರೂ  ಹೊಂದಾಣಿಕೆಯಿಂದ ಮಾಡೋಣ, ಮಹಿಳೆಯರ ಸಂಘಟನಾ ಚತುರತೆಗೆ ವೇದಿಕೆ ನಿರ್ಮಿಸೋಣ ಎಂದು ನುಡಿದರು

ಈ ಸಂದರ್ಭದಲ್ಲಿ  ಅತಿಥಿಗಳಾದ  ಶೋಭಾ ದಯಾನಂದ್,  ಪ್ರಭಾ ಎನ್ ಸುವರ್ಣ,  ಸುಕೇಶಿನಿ ವೈ ಪೂಜಾರಿ,  ಸಭಿತಾ ಜಿ ಪೂಜಾರಿ,  ಕುಮುದಾ ಪೂಜಾರಿ,  ಮಮತಾ ಎಸ್ ಪೂಜಾರಿ,  ವನಿತಾ ಎ ಕುಕ್ಯಾನ್, ಮಾಲತಿ ಬಂಗೇರ,  ಹೇಮಲತಾ ಪೂಜಾರಿ,  ದೇವಕಿ ಎಸ್ ಕರ್ಕೇರ ಹಾಗೂ  ಶಶಿಕಲಾ ಕೋಟ್ಯಾನ್ ದೀಪ ಬೆಳಗಿಸಿದರು.

    ಮುತ್ತೈದೆಯರ ಅರಶಿನ ಕುಂಕುಮ ಮಹತ್ವದ ಕುರಿತು  ಬಬಿತ ಡಿ ಪೂಜಾರಿ ಮಾತನಾಡಿದರು, ಕಾರ್ಯಕ್ರಮದಲ್ಲಿ 23 ವಿಧವೆಯರಿಗೆ  ಸೀರೆ ಮತ್ತು ಧನ ಸಹಾಯ ನೀಡಿ ಮತ್ತೈದೆಯರು ಹಾಗೂ ಹಿರಿಯ ಗಣ್ಯ ವ್ಯಕ್ತಿಗಳು  ಗೌರವಿಸಿದರು. 

  ಕಾರ್ಯಕ್ರಮದಲ್ಲಿ ಮುಂಬೈಯ ವಿವಿಧ ಉಪನಗರಗಳಿಂದ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು . ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳಿಗೆ ಹಾಗೂ ಪಾಲ್ಗೊಂಡ ಎಲ್ಲರಿಗೂ ಜಯ ಸುವರ್ಣ ಅಭಿಮಾನಿಗಳಿಂದ, ಮುಂಬೈ ಬಿಲ್ಲವರಿಂದ ಧನ್ಯವಾದ ಸಮರ್ಪಸಲಾಯಿತು.



Related posts

ಜ್ಞಾನ ವಿಕಾಸ ಮಂಡಲದ ಮೆಹತಾ ಕಾಲೇಜ್ ಐರೋಲಿ: ವಿದ್ಯಾರ್ಥಿಗಳಿಗೆ  ಲೀಡರ್ಶಿಪ್ ಬಗ್ಗೆ ಉಪನ್ಯಾಸ. 

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ನಮಿತ್ ಉಮೇಶ್ ಪೂಜಾರಿಗೆ ಶೇ 87.40 ಅಂಕ.

Mumbai News Desk

ತೀಯಾ ಸಮಾಜ ಮುಂಬಯಿ, ಸತ್ಯನಾರಾಯಣ ಪೂಜೆ, ಅರಸಿನ ಕುಂಕುಮ, ಬೋಳ್ನಾಡು ಕ್ಷೇತ್ರದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಬಿಲ್ಲವರ ಅಸೋಸಿಯೇಶನ್ , ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿ : 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಗುರು ಪೂರ್ಣಿಮ ಪೂಜೆ.

Mumbai News Desk

ಮೀರಾ-ಭಾಯಂದರ್ ನಲ್ಲಿ ಸಾವಿರಾರು ಸಂಖ್ಯೆಯ ತುಳು ಕನ್ನಡಿಗರ ಒಗ್ಗೂಡುವಿಕೆಯಲ್ಲಿ ಸಾರಿಗೆ ಸಚಿವ ಪ್ರತಾಪ್ ಸರ್ ನಾಯ್ಕ್ ಗೆ ತುಳುನಾಡ ಶೈಲಿಯಲ್ಲಿ ಸನ್ಮಾನ.

Mumbai News Desk