32 C
Mumbai
March 7, 2026
Mumbai News Kannada
ಮುಂಬಯಿ

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ಮಧ್ವ ನವಮೀ ಆಚರಣೆ 





   ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯಲ್ಲಿರುವ ಉಡುಪಿ ಶ್ರೀ ಪೇಜಾವರ ಮಠದಲ್ಲಿ  ಮಧ್ವ ನವಮೀ ಆಚರಣೆಯನ್ನು ವೈಭವೋಪೇತವಾಗಿ ಆಚರಿಸಲಾಯಿತು. ಶ್ರೀಪೇಜಾವರ ಮಠದ ಮುಖ್ಯ ಪ್ರಬಂಧಕರಾದ ಡಾ! ರಾಮದಾಸ ಉಪಾಧ್ಯಾಯ ಇವರು ಪ್ರಸನ್ನ ಪೂಜೆ ಮಾಡಿ ಆಶೀರ್ವದಿಸಿದರು.  

ಬಳಿಕ ಅಮೇರಿಕಾ ರಾಷ್ಟ್ರದ ನ್ಯೂಯಾರ್ಕ್ ನಗರದಲ್ಲಿ, ಆಚಾರ್ಯ ಮಧ್ವರ ತತ್ವಜ್ಞಾನಪ್ರಸಾರಕಾರ್ಯ ನಡೆಸುತ್ತಿರುವ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸರೂ ಶ್ರೀ ಪೇಜಾವರ ಮಠಾಧೀಶರ ಶಿಷ್ಯರೂ ಆದ ವಿದ್ವಾನ್ ಶ್ರೀ ಶ್ರೀಧರ ಆಚಾರ್ಯರು ಉಪನ್ಯಾಸವನ್ನು ನಡೆಸಿಕೊಟ್ಟರು.

ಪರಮಪೂಜ್ಯ ಗುರುಗಳನ್ನು ಸ್ಮರಿಸುವುದರೊಂದಿಗೆ ಶ್ರೀಮಧ್ವಾಚಾರ್ಯರ ಅವತಾರ, ಅವರ ಮಹತ್ವ ಮತ್ತು ಅವರ ಲೀಲೆ.. ಲೋಕಕಲ್ಯಾಣಕ್ಕೆ ನಮ್ಮ ಕರ್ತವ್ಯ ಏನು? ಮುಂತಾದ ವಿಚಾರದಲ್ಲಿ ನೆರೆದ ಭಕ್ತರಿಗೆ ಮನಕ್ಕೆ ಮುದ ನೀಡುವಂತೆ ಸುಂದರವಾಗಿ ತಿಳಿಸಿದರು. 

ಪೇಜಾವರ ಮಠದ “ಮಧ್ವೇಶ ಭಜನಾ ಮಂಡಳಿ” ಯಿಂದ ಹರಿ ನಾಮ ಸಂಕೀರ್ತನೆ.. ನರ್ತನಸೇವೆಯೊಂದಿಗೆ ಕಾರ್ಯಕ್ರಮವು ವೈಭವೋಪೇತವಾಗಿ ಸಂಪನ್ನಗೊಂಡಿತು.

ಆರಂಭದಲ್ಲಿ ಪೇಜಾವರ ಮಠದಲ್ಲಿನ ಶಿಲಾಮಯಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣನ ಸನ್ನಿಧಾನದಲ್ಲಿ ಅರ್ಚಕ ರಾಮಚಂಡ ಸಾಮಗ ಶಾಸಾನುಸಾರ ದೈನಂದಿನ ಪೂಜಾವಿಧಿಗಳನ್ನು ನೆರವೇರಿಸಿದರು. 

ಶ್ರೀ ಪೇಜಾವರ ಮಠದ ವಿದ್ವಾನ್ ಕೆರ್ವಾಶೆ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೈ ಸಹಕರಿಸಿದರು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿದರು. 



Related posts

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ 11 ನೇ ವಾರ್ಷಿಕೋತ್ಸವ ಸಂಭ್ರಮ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ಮೀರಾ – ಬಾಯಂದರ್ ಶಾಖೆಯಲ್ಲಿ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆಯ 12ನೇ ವಾರ್ಷಿಕ ಮಹಾಪೂಜೆ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ವಾರ್ಷಿಕ ಮಹಾಸಭೆ.

Mumbai News Desk

ಒಕ್ಕಲಿಗರ ಸಂಘದ ಮಹಾರಾಷ್ಟ್ರ ಪದಾಧಿಕಾರಿಗಳು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ, ಮುಂಬೈಯಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಭರವಸೆ

Mumbai News Desk

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಭಕ್ತಿಪೂರ್ವಕ ಮಹಾಶಿವರಾತ್ರಿ ಮತ್ತು ಭಜನೋತ್ಸವ

Mumbai News Desk