32 C
Mumbai
March 7, 2026
Mumbai News Kannada
ಮುಂಬಯಿ

ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ : ಮಹಾ ಶಿವರಾತ್ರಿಯ ಅಂಗವಾಗಿ ಏಕಹಾ ಭಜನೆ





ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇಲ್ಲಿ ದಿನಾಂಕ 26/02/2024 ಬುಧವಾರ ಮಹಾ ಶಿವರಾತ್ರಿಯ ಅಂಗವಾಗಿ ಏಕಹಾ ಭಜನೆಯ ಜರುಗಿತು.
ಬೆಳಿಗ್ಗೆ 6 ಗಂಟೆ ಸರಿಯಾಗಿ ಮಹಾಗಣಪತಿ ಹೋಮ ಜರುಗಿತು,ನಂತರ 7.30 ಕುಕ್ಕೆ ಸರಿಯಾಗಿ ಏಕಾಹ ಭಜನೆ ದೇವರ ಪ್ರಾರ್ಥನೆ,ದೀಪ ಪ್ರಜ್ವಲನೆ ಯೊಂದಿಗೆ ಪ್ರಾರಂಭಿಸಲಾಯಿತು. ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿ ಯು ಉಪಾಧ್ಯಕ್ಷರಾದ ಶ್ರೀ ಸುಬ್ಬಯ್ಯ ಶೆಟ್ಟಿ, ದೇವಸ್ಥಾನದ ಅಧ್ಯಕ್ಷರಾದ ರಾಜೇಶ್ ಜೆ ಶೆಟ್ಟಿ
ಬಂಟರ ಸಂಘ ಮುಂಬಯಿ ಬಿವಾಂಡಿ ಬದ್ಲಾಪುರ ಪ್ರಾದೇಶಿಕ ಸಮಿತಿ ಯು ಸಂಯೋಜಕರಾದ ರವೀಂದ್ರ ವೈ ಶೆಟ್ಟಿ , ದೇವಸ್ಥಾನದ ಪದಾಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು,


ಅಲ್ಲದೆ ಸಂಜೆ, ಶಿವರಾತ್ರಿಯ ವೀಶೇಷ ಪೂಜೆ ಸಹ ನೆರವೇರಿತು,
ಆಗಮಿಸಿದ ಎಲ್ಲಾ ಭಜನಾ ಮಂಡಳಿಗಳನ್ನು, ಹೂವು,ಹಣ್ಣು ಪ್ರಸಾದ,ಗೌರವ ಕಾಣಿಕೆ ಇತ್ತು ಗೌರವಿಸಲಾಯಿತು.
ಬೆಳಿಗ್ಗೆ ,ಮಧ್ಯಾಹ್ನ, ಸಂಜೆ ಫಲಾಹಾರ, ಅನ್ನಸಂತರ್ಪಣೆ ,ಚಹಾ ದ ವ್ಯವಸ್ಥೆ ಮಾಡಲಾಯಿತು,
ಏಕಾಹ ಭಜನೆಗೆ ವೀಶೇಷ ವಾಗಿ ದೇವಾನಂದ್ ಕೋಟ್ಯಾನ್,ಆಶಾ ನಾಯಕ್, ಶ್ರೀಧರ್ ರೈ, ಅಲ್ಲದೆ, ಜೈ ಪ್ರಸಾದ್ ಶೆಟ್ಟಿ,, ಮಂಡಳಿಯ ಟ್ರಸ್ಟಿಗಳು, ಸಲಹೆ ಗಾರರು, ಮುಖ್ಯ ಸಮಿತಿ,ಉಪ ಸಮಿತಿಯ ಕಾರ್ಯಾಧ್ಯಕ್ಷರರು, ಮಹಿಳಾ ವಿಭಾಗ, ಯುವ ವಿಭಾಗ, ತಂತ್ರಿಯವರು, ಅರ್ಚಕರು, ದೇವಸ್ಥಾನದ ಸಿಬ್ಬಂದಿ ವರ್ಗ, ಬಾರಿ ಉತ್ಸಾಹದಿಂದ ಸಹಕರಿಸಿದರು,


24 ಘಂಟೆಗಳ ಕಾಲ ಅಖಂಡ ಭಜನೆ ಯೊಂದಿಗೆ, ದಿನಾಂಕ 27 ರಂದು ಬೆಳಿಗ್ಗೆ ದೇವರ ಮಂಗಳಾರತಿ ಯೊಂದಿಗೆ ಭಜನೆಗೆ ಮಂಗಳ ಹಾಡಲಾಯಿತು..
ಪ್ರತ್ಯಕ್ಷವಾಗಿ ಪರೋಕ್ಷವಾಗಿ ತನು ಮನ ಧನ ದಿಂದ ಸಹಕರಿಸಿರುವ ಎಲ್ಲಾರಿಗೂ ದೇವಸ್ಥಾನದ ಪರವಾಗಿ ತುಂಬು ಹೃದಯದ ಧನ್ಯವಾದಗಳು..



Related posts

ಪೌರಾಣಿಕ ವಾಚಕ ಸಮಿತಿ ಮುಂಬಯಿ,ಇದರ   49ನೇ ವಾರ್ಷಿಕ ಶನಿಪೂಜೆ

Mumbai News Desk

ಮದರ್ ಇಂಡಿಯಾ ದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ನಿರಂತರವಾಗಿರಲಿ -ಸುರೇಂದ್ರ ಪೂಜಾರಿ ಮುಂಬೈ :

Mumbai News Desk

ಹಸ್ಮೀತ್ ಶೆಟ್ಟಿಗೆ ಶೇ. 92.20 ಅಂಕ.

Mumbai News Desk

ಮುಂಬೈ: ಭಾಯಂದರ್ ಪೂರ್ವದಲ್ಲಿ ಕಟ್ಟಡಕ್ಕೆ ನುಗ್ಗಿದ ದೊಡ್ಡ ಬೆಕ್ಕು(ಚಿರತೆ), 3 ಜನರಿಗೆ ಗಾಯ

Mumbai News Desk

ಅಂಧೇರಿ ಪಶ್ಚಿಮ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಗೆ ಭೇಟಿ ನೀಡಿ ಭಕ್ತರನ್ನು ಹರಸಿದ ಶ್ರೀ ಓಡಿಯೂರು ಸ್ವಾಮಿ

Mumbai News Desk

ಕರ್ನಾಟಕ ಸಂಘ ಕಲ್ಯಾಣ:ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಹಾಗೂ 22ನೇಯ ವಾರ್ಷಿಕೋತ್ಸವ

Mumbai News Desk