32 C
Mumbai
March 7, 2026
Mumbai News Kannada
ಸುದ್ದಿ

ಬೊಯಿಸರ್ ಸೋಮೇಶ್ವರ ಮಂದಿರದ 15 ನೆಯ ವರ್ಧಂತ್ಯುತ್ಸವ ಸಂಪನ್ನ.





ಚಿತ್ರ ವಿವರ : ಪಿ.ಆರ್.ರವಿಶಂಕರ್, ಬೊಯಿಸರ್ : 05.03.2025

ಬೊಯಿಸರ್  ಪರಿಸರದಲ್ಲಿನ    ಧಾರ್ಮಿಕ ಮುಂದಾಳು  ಹಾಗೂ ತುಳುಕನ್ನಡಿಗರ ಪ್ರತಿಷ್ಟಿತ  ಮೀರಾ ಡಹಾಣೂ ಬಂಟ್ಸ್ ( ರಿ) ಸಂಸ್ಥೆಯ ಪಾಲ್ಘರ್ ಬೊಯಿಸರ್ ವಲಯದ ಮಾಜಿ ಅದ್ಯಕ್ಷರಾದ ಶ್ರೀ ವಿಜಯ್ ಶೆಟ್ಟಿಯವರ ಸಮರ್ಥ  ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸ್ಥಳೀಯ ಶ್ರೀ ಸೋಮೇಶ್ವರ ಮಂದಿರದಲ್ಲಿ ಪ್ರತೀ ವರ್ಷವೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳು ಜರಗುತ್ತಾ ಬಂದಿವೆ.              

ಬೊಯಿಸರ್ ಪೂರ್ವದ ಖೈರಾಪಾಡಾದ ಮಹಾದೇವ್ ನಗರದಲ್ಲಿನ  ಶ್ರೀ ಸೋಮೇಶ್ವರ್ ಮಂದಿರದಲ್ಲಿ ಇದೇ 03 ಮಾರ್ಚ್ 2025 ನೆಯ ಸೋಮವಾರದಂದು ಮಂದಿರದ  15 ನೆಯ ವಾರ್ಷಿಕ ವರ್ಧಂತ್ಯುತ್ಸವ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

     ಪ್ರಾತಃಕಾಲ ಗಣಹೋಮ ಮತ್ತು ಶ್ರೀ ಗಣೇಶಪೂಜೆ ಯೊಂದಿಗೆ ಕಾರ್ಯಕ್ರಮ ಆರಂಭವಾಗಿ ನವ ಅಭಿಷೇಕ ಮತ್ತು ನಾಗ ಪೂಜೆಯ ಬಳಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಜರಗಿತು. ಜೊತೆಗೆ ಸ್ಥಳೀಯ ಭಜನಾ ಮಂಡಳಿಯವರ ವತಿಯಿಂದ ಭಕ್ತಿಪ್ರಧಾನ ಗೀತೆಗಳು , ಭಜನಾ ಕಾರ್ಯಕ್ರಮವಿತ್ತು.

ಮದ್ಯಾಹ್ನ 12.30 ರ ಮಹಾ ಮಂಗಳ ಆರತಿಯ ಬಳಿಕ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ಜರಗಿತು.

ವೈದಿಕ  ಪೂಜಾ ವಿಧಿವಿಧಾನಗಳು ಡಾ •ಎಮ್. ಜೆ.ಪ್ರವೀಣ್ ಭಟ್ ( ಅಂತರ ರಾಷ್ಟ್ರೀಯ ಆಧ್ಯಾತ್ಮಿಕ ಗುರು) ಇವರ ನೇತೃತ್ವ ಹಾಗೂ ಪುರೋಹಿತ ಶ್ರೀನಿವಾಸ ಉಡುಪ ಐರೋಳಿ ಇವರ ಸಹಕಾರದಲ್ಲಿ ಜರಗಿದವು.

  ಕಾರ್ಯಕ್ರಮದಲ್ಲಿ ಸೋಮೇಶ್ವರ್ ಮಂದಿರ್ ಮಿತ್ರಮಂಡಳ್ ಮತ್ತು ಮಹಿಳಾ ವಿಭಾಗದ ಸದಸ್ಯರು , ಸ್ಥಳೀಯ ಭಕ್ತಾಭಿಮಾನಿಗಳು , ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಪಾಲ್ಘರ್, ಬೊಯಿಸರ್ ಹಾಗೂ ಡಹಾಣೂ ವಿನ ವಿವಿಧ ಸ್ಥಳಗಳಿಂದ ಆಗಮಿಸಿದ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

✒️ ಚಿತ್ರ ಮತ್ತು ಸುದ್ದಿ : ಪಿ.ಆರ್.ರವಿಶಂಕರ್, ಡಹಾಣು 8483980035



Related posts

ಜಿಲ್ಲಾ ಧಾರ್ಮಿಕ ಪರಿಷತ್ ಸಮಿತಿಯ ಸದಸ್ಯರಾಗಿ ಜಗನ್ನಾಥ ಚೌಟ ಬದಿಗುಡ್ಡೆ ನೇಮಕ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಸಡಗರದ ದೀಪಾವಳಿ ಹಬ್ಬದ ಆಚರಣೆ

Mumbai News Desk

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

Mumbai News Desk

ಬೊಯಿಸರ್ : ಸದ್ಗುರು ಸ್ವಾಮಿ ನಿತ್ಯಾನಂದ ಮಂದಿರದಲ್ಲಿ  63 ನೇ ಪುಣ್ಯತಿಥಿ ಆಚರಣೆ.

Mumbai News Desk

ಮುಲ್ಕಿ ಹೊಸ ಆಂಗಣ ತಿಂಗಳ ಬೆಳಕು ಕಾರ್ಯಕ್ರಮ, ದೈವ ಪಾತ್ರಿ ಮಾನಂಪಾಡಿ ಯಾದವ ಪೂಜಾರಿಗೆ ಸನ್ಮಾನ.

Mumbai News Desk

ದರ್ಶನ್ ಗೆ 6 ವಾರ ಕಾಲ ಶರತ್ತು ಬದ್ದ ಜಾಮೀನು

Mumbai News Desk