30.8 C
Karnataka
April 15, 2025
ಮುಂಬಯಿ

ಸದ್ಗುರು ಶ್ರೀ ಅನಿರುದ್ಧ ಉಪಾಸನಾ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿರ.



ಚಿತ್ರ, ವರದಿ: ಉಮೇಶ್ ಕೆ.ಅಂಚನ್.


ಮುಂಬಯಿ,ಎ.14: ಮುಂಬಯಿಯ ಆಧ್ಯಾತ್ಮಿಕ ಸಂಸ್ಥೆ ಶ್ರೀ ಅನಿರುದ್ಧ ಉಪಾಸನಾ ಟ್ರಸ್ಟ್ , ಅನಿರುದ್ಧ ಅಕೇಡಮೀ ಆಫ್ ಡಿಸಾಸ್ಟರ್ ಮೆನೇಜ್ಮೆಂಟ್, ಅನಿರುದ್ಧ ಆದೇಶ್ ಪಥಕ್ ಹಾಗೂ ಇದರ ಸಹ ಸಂಸ್ಥೆಗಳ ವತಿಯಿಂದ ಸದ್ಗುರು ಶ್ರೀ ಅನಿರುದ್ಧ ಬಾಪೂರವರ ಮಾರ್ಗದರ್ಶನದಲ್ಲಿ ಪ್ರತೀ ವರ್ಷ ಮಹಾರಾಷ್ಟ್ರ ಅಲ್ಲದೆ ದೇಶದ ಇನ್ನಿತರ ರಾಜ್ಯಗಳಲ್ಲಿ ಪ್ರತೀ ವರ್ಷ ರಕ್ತದಾನ ಶಿಬಿರವು ನಡೆಯುತ್ತಿದೆ.


ಪ್ರಸ್ತುತ ವರ್ಷದ ರಕ್ತದಾನ ಶಿಬಿರವು ಮುಂಬಯಿ ಬಾಂದ್ರಾ ಖೇರ್ವಾಡಿ ನ್ಯೂ ಇಂಗ್ಲಿಷ್ ಶಾಲಾ ವಠಾರ ಸೇರಿದಂತೆ ಮಹಾರಾಷ್ಟ್ರದ ಹಲವು ಜಾಗದಲ್ಲಿ ಅಲ್ಲದೆ ಗೋವಾ, ಕರ್ನಾಟಕ, ಗುಜರಾತ್,ಮಧ್ಯಪ್ರದೇಶ , ದೆಹಲಿ ಮೊದಲಾದ ರಾಜ್ಯಗಳಲ್ಲೂ ಎಪ್ರಿಲ್ 13ರಂದು ನಡೆಯಿತು.


ದೇಶದ ಒಟ್ಟು 128 ಜಾಗದಲ್ಲಿ ಶಿಬಿರವು ನಡೆದಿದ್ದು ಇದರಲ್ಲಿ 178 ಬ್ಲಡ್ ಬ್ಯಾಂಕುಗಳು ಭಾಗವಹಿಸಿ ಸುಮಾರು 14974 ಬ್ಯಾಗ್ ರಕ್ತ ಜಮಾ ಆಗಿದೆ.
ಮುಂಬಯಿಯಲ್ಲಿ ಅತೀ ಹೆಚ್ಚು ಅಂದರೆ 7275 ರಕ್ತ ಬ್ಯಾಗ್ ಜಮಾ ಆಗಿದ್ದು ಇಲ್ಲಿ 38 ಬ್ಲಡ್ ಬ್ಯಾಂಕುಗಳು ಭಾಗವಹಿಸಿದ್ದವು. ಅಲ್ಲದೆ ಪುಣೆಯಲ್ಲಿ 9ಬ್ಲಡ್ ಬ್ಯಾಂಕುಗಳಿಂದ 1022 ರಕ್ತ ಬ್ಯಾಗ್ ಹಾಗೂ ಇನ್ನಿತರ ದೇಶದ 126 ಶಿಬಿರಗಳಲ್ಲಿ 129 ಬ್ಲಡ್ ಬ್ಯಾಂಕುಗಳಿಂದ 6677 ಬ್ಯಾಗ್ ರಕ್ತ ಜಮಾ ಆಗಿದೆ.
ಸದ್ಗುರು ಶ್ರೀ ಅನಿರುದ್ಧ ಬಾಪೂರವರ ಮೇಲಿನ ಪ್ರೀತಿಯಿಂದ ಸಾವಿರಾರು ಸ್ವಯಂಸೇವಕರು ಮತ್ತು ಬಾಪೂ ಅನುಯಾಯಿಗಳು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಯಶಸ್ಸಿಗೆ ಸಹಕರಿಸಿದ್ದರು.

Related posts

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕಲ್ಲುರ್ಟಿ ಮಂತ್ರದೇವತಾ ಸಾನಿಧ್ಯ ಕೋಪರಖೈರಣೆ, ಧರ್ಮದೈವ ತಾಯಿ ಕಲ್ಲುರ್ಟಿಯ ಮಾಸಿಕ ಸಂಕ್ರಾಂತಿ ಸೇವೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅಂಕಿತಾ ಭಾಸ್ಕರ್ ಭಂಡಾರಿ ಗೆ ಶೇ 82.60 ಅಂಕ.

Mumbai News Desk

ಬಿಲ್ಲವರ ಅಸೋಸಿಯೇಷನ್ ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ತುಳು ಸಂಪ್ರದಾಯ ಕಾರ್ಯಕ್ರಮ ಆಟಿಡೊಂಜಿ ಕೂಟ

Mumbai News Desk

ಕರ್ನಾಟಕ ಸಂಘ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

Mumbai News Desk

ಕಾಮೊಟೆ : ಶ್ರೀ ದುರ್ಗಾಪರಮೇಶ್ವರಿ ಮಂದಿರದ  ನವರಾತ್ರಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ.

Mumbai News Desk

 ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನ (ರಿ) ಮುಂಬೈಯ 26ನೇ ವಾರ್ಷಿಕ ಉತ್ಸವ ಸಂಭ್ರಮ,

Mumbai News Desk