May 13, 2025
ಸುದ್ದಿ

ಶ್ರೀಧರ ವೆಂಕಟೇಶ ಕುಲಕರ್ಣಿ ನಿಧನ




13/05/25,ಕಲ್ಯಾಣ (ಪ):ತಿಳಿಸುವುದೇನೆಂದರೆ ಸಂಘದ ಪ್ರಮುಖ ಕಾರ್ಯಕರ್ತ ಶ್ರೀ ಶ್ರೀಧರ ವೆಂಕಟೇಶ ಕುಲಕರ್ಣಿಯವರು ವಯಸ್ಸು 81,ಅಲ್ಪ ಕಾಲದ ಅನಾರೋಗ್ಯದ ನಂತರ 11/05/25ರಂದು ಮಧ್ಯಾಹ್ನ ತಮ್ಮ ಸ್ವಗ್ರಹದಲ್ಲಿ ದೈವಾಧೀನರಾಗಿದ್ದಾರೆ ಎಂದು ತಿಳಿಸುವುದಕ್ಕೆ ವಿಷಾದಿಸುತ್ತೇವೆ. ಬಾಗಲಕೋಟ, ಕರ್ನಾಟಕದಲ್ಲಿ 1944ರಲ್ಲಿ ಜನಿಸಿದ ಶ್ರೀಯುತರು ಉದ್ಯೋಗ ನಿಮಿತ್ತ 1967ರಲ್ಲಿ ಮುಂಬೈಗೆ ಆಗಮಿಸಿದ್ದು, ಮಹಾರಾಷ್ಟ್ರ ಸರಕಾರದಲ್ಲಿ ಎಕ್ಸಸೖಸ್(Excise) ವಿಭಾಗದಲ್ಲಿ ಅಧಿಕಾರಿಗಳಾಗಿ 38 ವರ್ಷ ಕಾರ್ಯ ನಿರ್ವಹಿಸಿ 2005ರಲ್ಲಿ ನಿವೃತ್ತರಾದರು. ತಮ್ಮ ಉದ್ಯೋಗ ಅವಧಿಯಲ್ಲಿ ಓರ್ವ ನಿಷ್ಟಾವಂತ ಪ್ರಾಮಾಣಿಕ ಅಧಿಕಾರಿಯಾಗಿ ಹೆಸರು ಗಳಿಸಿದ ಶ್ರೀಯುತರು ಸಂಘದ ಮಹಾ ಪೋಷಕರು ಹಾಗೂ ಸಂಪರ್ಕ ಅಧಿಕಾರಿಗಳಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಹಲವಾರು ಅಖಿಲ ಭಾರತ ಹೊರನಾಡ ಕನ್ನಡಿಗರ ಸಮಾವೇಶಗಳಲ್ಲಿ ಸಂಘವನ್ನು ಪ್ರತಿನಿಧಿಸಿದ ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಕೂಡಾ ಆಗಿದ್ದರು. ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಪತ್ನಿ, ಮಕ್ಕಳು, ಮೊಮ್ಮಕ್ಕಳು, ಸಮಸ್ತ ಹಿತ ಚಿಂತಕರು ಹಾಗೂ ಸಂಘದ ಸದಸ್ಯರಿಗೆ ಇವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಅಧ್ಯಕ್ಷರು ಹಾಗೂ ಸಮಸ್ತ ಸದಸ್ಯರು
ಕರ್ನಾಟಕ ಸಂಘ, ಕಲ್ಯಾಣ

Related posts

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ ಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉದಯ ಎಸ್. ಶೆಟ್ಟಿ

Mumbai News Desk

ಲೇಖಕ,ಪ್ರಸಿದ್ಧ ರಂಗ ನಟ   ಸುಂದರ ಮೂಡಬಿದ್ರಿ ಯವರಿಗೆಅಮೂಲ್ಯ   ಪತ್ರಿಕೆ ಯ  ಬೆಳ್ಳಿ ಹಬ್ಬದ ವಿಶೇಷ  ಸನ್ಮಾನ

Mumbai News Desk

ಅರಸಿನ ಕುಂಕುಮ ಎಂದರೆ ಬರೇ ಒಂದು ಕಾರ್ಯಕ್ರಮವಲ್ಲ, ನಮ್ಮ ಸಂಸ್ಕೃತಿಯನ್ನು, ಸಂಘಟನೆಯನ್ನು ಬಲಪಡಿಸುವ ಸಾಧನವಾಗಿದೆ – ಡಾ. ಸುಷ್ಮಾ ಮೆಂಡನ್‌.

Mumbai News Desk

ದೇಗುಲಗಳು ಸರಕಾರದ ವಶದಿಂದ ಮುಕ್ತಗೊಳ್ಳಲಿ : ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

Mumbai News Desk

ಶಬರಿಮಲೆ ಯಾತ್ರೆಗೆ ಈ ವರ್ಷದಿಂದ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

Mumbai News Desk

ಶ್ರೀ ಭಗವತೀ ಕ್ಷೇತ್ರ ಉಪ್ಪಳ, ಮುಂಬಯಿ ಸಮಿತಿ ರಚನೆ

Mumbai News Desk