29.2 C
Karnataka
June 3, 2025
ಸುದ್ದಿ

ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಅಮೃತ ವರ್ಷಿಣಿ ” ಉದ್ಘಾಟನೆ



ತೋಕೂರು: ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ಮೇ 30 ರಂದು ದ.ಕ ಹಾಲು ಉತ್ಪಾದಕರ ಒಕ್ಕೂಟ ದ ಅಧ್ಯಕ್ಷ ರವಿರಾಜ್ ಹೆಗ್ಡೆ ಉದ್ಘಾಟಿಸಿದರು.
ಈ ವೇಳೆ ಒಕ್ಕೂಟದ ಬಗ್ಗೆ ಮಾತನಾಡುತ್ತಾ, “ಹುಟ್ಟಿದ ಕರುವಿನಿಂದ ಹಿಡಿದು ಹಸು ಮರಣ ಹೊಂದುವವರೆಗೆ ಹೈನುಗಾರರಿಗೆ ಒಕ್ಕೂಟವು ಸವಲತ್ತುಗಳನ್ನು ನೀಡುತ್ತಿದೆ” ಎಂದರು.
ವ್ಯವಸ್ಥಾಪಕ ನಿರ್ದೇಶಕರಾದ ಸುಚರಿತ ಶೆಟ್ಟಿ ದೀಪ ಗೋದಾಮನ್ನು ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆಗೆ ಹೈನುಗಾರಿಕೆಯನ್ನು ಪರಿಚಯಿಸುವುದು ನಮ್ಮ ಕರ್ತವ್ಯ ಎಂದರು.

ಮುಲ್ಕಿ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಶಾಖೆಗೆ ಭೇಟಿ ನೀಡಿ, ಕಟ್ಟಡಕ್ಕೆ ಅನುದಾನ ನೀಡುವ ಭರವಸೆಯನ್ನು ನೀಡಿದರು. ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಸುಧಾಕರ್ ರೈ ,ವ್ಯವಸ್ಥಾಪಕರಾದ ರವಿರಾಜ್ ಉಡುಪ ಸಂಘಕ್ಕೆ ಭೇಟಿ ನೀಡಿ ನಿರ್ವಹಣೆಯ ಬಗ್ಗೆ ಪ್ರಶಂಸಿಸಿದರು.

ವ್ಯವಸ್ಥಾಪಕ ನಿರ್ದೇಶಕರಾದ ಸವಿತಾ ಶೆಟ್ಟಿ , ನಂದರಾಮ್ , ಗುರುಪ್ರಸಾದ್ , ಹಾಗೂ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ , ಪಂಚಾಯತ್ ಉಪಾಧ್ಯಕ್ಷರಾದ ಹೇಮನಾಥ ಅಮೀನ್ , ದೇವಪ್ರಸಾದ್ ಪುನರೂರು , ಧರ್ಮಸ್ಥಳ ಗ್ರಾಮಾಭಿೃದ್ಧಿ ಯೋಜನೆಯ ವತಿಯಿಂದ ಹಳೆಯಂಗಡಿ ವಲಯಾಧಿಕಾರಿ ನಿಶ್ಮಿತಾ, ಒಕ್ಕೂಟದ ಉಪ ವ್ಯವಸ್ಥಾಪಕರಾದ ಚಂದ್ರಶೇಖರ್ ಭಟ್, ವಿಸ್ತರಣಾಧಿಕಾರಿ ಸಂದೀಪ್, ಗ್ರಾಮದ ಗಣ್ಯರಾದ ಪದ್ಮನಾಭ್ ಆಚಾರ್ಯ, ವ್ಯವಸ್ಥಾಪನಾ ಸದಸ್ಯರಾದ ತೋಕೂರು ಗುತ್ತುಸಂಪತ್ ಶೆಟ್ಟಿ, ಸವಿತಾ ಬೆಳ್ಳಯಾರು, ಕುಸುಮ ಹರೀಶ್ , ಪಂಜ ನವೀನ್ ಶೆಟ್ಟಿ .,ಪ್ರಮೀಳಾ ಡಿ ಶೆಟ್ಟಿ ತೋಕೂರು ಯುವಕ ಸಂಘದ ಅಧ್ಯಕ್ಷರಾದ ರಮೇಶ್ ದೇವಾಡಿಗ ಉಪಸ್ಥಿತರಿದ್ದರು.

ಅಧ್ಯಕ್ಷರಾದ ಲತಾ ಡಿ ಭಟ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಿತು. ಅಧ್ಯಕ್ಷರು ಸ್ವಾಗತಿಸಿದರು. ಮುಖ್ಯ ನಿರ್ವಹಣಾಧಿಕಾರಿಯಾದ ಪದ್ಮಪ್ರಿಯಾ ವರದಿಯನ್ನು ವಾಚಿಸಿದರು. ನಿರೂಪಣೆಯನ್ನು ಗೀತ ಸದಾನಂದ್ ನೆರವೇರಿಸಿದರು. ಆಡಳಿತ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.

Related posts

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಮುಂಬೈಯ ನಿಷ್ಠಾವಂತ ಪತ್ರಕರ್ತ ನವೀನ್ ಕೆ ಇನ್ನ ಆಯ್ಕೆ.

Mumbai News Desk

ಮಂಜೇಶ್ವರ – ಉಪ್ಪಳ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಲ.ಕಮಲಾಕ್ಷ ಪಂಜ

Mumbai News Desk

ಬೊಯಿಸರ್ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಸಾರ್ವಜನಿಕ ಆಶ್ಲೇಷಾ ಪೂಜೆ , ದುರ್ಗಾ ಪೂಜೆ , ಶನಿಪೂಜೆ ಸಂಪನ್ನ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಲಾಸ್ಯಾ ಶಂಕರ ಶೆಟ್ಟಿ ಶೇ. 90.80, ಲಿಖಿತ್ ಶಂಕರ್ ಶೆಟ್ಟಿಗೆ ಶೇ. 85 ಅಂಕ.

Mumbai News Desk

ಡಾ. ಕಾತ್ಯಾಯಿನಿ ಕುಂಜಿಬೆಟ್ಟು ರಚಿತ ಕವನ ಸಂಕಲನ “ತಂಬೂರಿ” ಹಾಗೂ ‘ಕಾಯ ತಂಬೂರಿ’ ನಾಟಕ ಕೃತಿ ಬಿಡುಗಡೆ

Mumbai News Desk

ಟ್ರಂಪ್ ಸುಂಕ ನೀತಿಯಿಂದ ತಲ್ಲಣ : ಭಾರತ ಸೇರಿದಂತೆ ವಿಶ್ವದಾದ್ಯಂತ ಶೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

Mumbai News Desk