28.1 C
Karnataka
June 10, 2025
ಸುದ್ದಿ

ಬೈಂದೂರು: ಕೊಡೇರಿ ಕಡಲ್ಕೊರೆತ ಪ್ರದೇಶಕ್ಕೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ತಂಡ ಭೇಟಿ: ಸ್ಥಳೀಯರೊಂದಿಗೆ ಸಮಾಲೋಚನೆ



ಚಿತ್ರ, ವರದಿ : ದಿನೇಶ್ ಕುಲಾಲ್ 

ಉಡುಪಿ: ಜೂನ್ 10: ಅವಿಭಜಿತ ದಕ ಜಿಲ್ಲೆಯ ಪರಿಸರ,ಉದ್ಯಮ ಮತ್ತು ಸಾಂಸ್ಕ್ರತಿಕ ಪ್ರಗತಿಗೆ ಪಣತೊಟ್ಟು ದುಡಿಯುತ್ತಿರುವ ಪ್ರತಿಷ್ಠಿತ ಸರಕಾರೇತರ ಸ್ವಯಂ ಸೇವಾ ಸಂಸ್ಥೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ(ರಿ) ತನ್ನ ವಾರ್ಷಿಕ  ಅಧ್ಯಯನ ಭೇಟಿ ಸಂದರ್ಭದಲ್ಲಿ ಈ ಬಾರಿ ಉಡುಪಿ ಜಿಲ್ಲೆಯ ತ್ರಾಸಿ .ಮರವಂತೆ ಬೀಚ್ ನ ಕಡಲ್ಕೊರೆತ ಪ್ರದೇಶಗಳಿಗೆ ಜೂನ್ 9 ರಂದು ಭೇಟಿ ನೀಡಿ ಪ್ರತ್ಯಕ್ಷ ಪರಿಶೀಲನೆ ನಡೆಸಿತು.

ಬೈಂದೂರು ತಾಲೂಕು ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಂದರು ಪ್ರದೇಶದಲ್ಲಿ  ಸಮುದ್ರ ಮತ್ತು ನದಿ ದಂಡೆಗೆ ಸಮಿತಿ ಭೇಟಿ ನೀಡಿ ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿ ಕಡಲು ಮತ್ತು ನದಿ ಕೊರೆತ ಸಮಸ್ಯೆಗಳ ಬಗ್ಗೆ ಅವರ ಅಹವಾಲುಗಳನ್ನು ಆಲಿಸಿತು.

ಕೊಡೇರಿ ಪ್ರದೇಶ ಎಡಮಾವಿನ ಹೊಳೆ ಮತ್ತು ಸಮುದ್ರ ಕೂಡು ಪ್ರದೇಶವಾಗಿದ್ದು ಸ್ಥಳೀಯ ಜನತೆ ಬಳಸುವ ಪುಟ್ಟ ಬಂದರೂ ಇದ್ದು ಕಡಲ್ಕೊರೆತ ಸಮಸ್ಯೆಯಿಂದ ಬಾಧಿತವಾಗಿದೆ. ಇಂದು ಪರಿಸರದ ಜನ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಅಳಲನ್ನು ತೋಡಿಕೊಂಡಿದ್ದರು.

ಒಂದೊಮ್ಮೆ ದಡದಿಂದ 5೦೦ ಮೀಟರ್ ಗೂ ಹೆಚ್ಚು ದೂರವಿದ್ದ ಸಮುದ್ರ ಪ್ರಸ್ತುತ 2೦0 ಮೀಟರ್ ಗೂ ಕಡಿಮೆ ಅಂತರವನ್ನು ಹೊಂದಿದೆ. ವರ್ಷಾವರ್ಷ ಕಡಲು ತಟವನ್ನು ನುಂಗುತ್ತಲೆ ನಡೆದಿದ್ದು ದಂಡೆಯ ಬಹಳಷ್ಟು ಭಾಗಕ್ಕೆ ತಡೆಗೋಡೆ ನಿರ್ಮಾಣ ಬಾಕಿ ಇದೆ. ಹಲವು ಬಾರಿ ಕಾಂಟ್ರಾಕ್ಟ್ ನೀಡಲಾಗಿದ್ದರೂ ಸೀಮಿತ ಪ್ರದೇಶದಲ್ಲಷ್ಟೆ ಬಂಡೆಹಾಸಿನ ತಡೆ ನಿರ್ಮಾಣ ವಾಗಿರುತ್ತದೆ ಎಂದು ಸ್ಥಳೀಯ ಮತ್ಸ್ಯೋದ್ಯಮಿ‌ ರಮೇಶ್ ಖಾರ್ವಿ ಸಮಿತಿ ಗೆ ವಿವರಿಸಿದರು.
ಇದೇ ರೀತಿ ಸಮುದ್ರ ಕ್ಕೆ ಸಮಾನಾಂತರ ವಾಗಿ ಬಹಳ ದೂರ ಸಾಗುವ ಎಡಮಾವಿನ ಹೊಳೆಯ ದಂಡೆಗಳು ನದಿಕೊರೆತಕ್ಕೊಳಗಾಗಿವೆ ಎಂದು ಅವರು ವಿವರಿಸಿದರು.
ಮಧ್ಯಾಹ್ನದಿಂದ ಸಂಜೆವರೆಗೆ ಪೂರ್ತಿ ಪರಿಸರವನ್ನು ಪರಿಶೀಲನೆ ನಡೆಸಿ ಸರಕಾರ ಈ ಬಗ್ಗೆ ಜಾಗೃತರಂತೆ ನಾವು ಒತ್ತಾಯಿಸುತ್ತೇವೆ ಎಂದು ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ಜಯಕೃಷ್ಣ ಶೆಟ್ಟಿ ಪರಿಸರದ ಜನರಿಗೆ ಭರವಸೆಯನ್ನು ನೀಡಿದರು. 

ಜಯಶ್ರೀಕೃಷ್ಣ ಪರಿಸರ ಪ್ರೇಮಿ  ಸಮಿತಿಯ ತಂಡದಲ್ಲಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ , ಕೋಶಾಧಿಕಾರಿ ಸದಾನಂದ ಆಚಾರ್ಯ, ಸಮಿತಿಯ ವಕ್ತಾರ ದಯಾಸಾಗರ್ ಚೌಟ, ಉಪಾಧ್ಯಕ್ಷರು ಕೇಂದ್ರ ಮತ್ತು ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ.ಸಮಿತಿಯ ಸಮಿತಿಯ ರಾಜ್ಯ ಸಂಯೋಜಕರಾದ ಕೆ. ಪಿ. ಜಗದೀಶ್ ಅಧಿಕಾರಿ .

ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಮಾಜಿ ಅಧ್ಯಕ್ಷರಾದ ಧರ್ಮಪಾಲ್  ದೇವಾಡಿಗ .

, ನ್ಯಾ. ಆರ್. ಎಂ. ಭಂಡಾರಿ, , ತೋನ್ಸೆ ಡಾ. ವಿಜಯಕುಮಾರ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಗಿರೀಶ್ ಬಿ. ಸಾಲ್ಯಾನ್,   ದೇವದಾಸ್ ಕುಲಾಲ್,  ಸಿಎಸ್ ಗಣೇಶ್ ಶೆಟ್ಟಿ, ರಾಕೇಶ್ ಭಂಡಾರಿ ಮತ್ತು ಮಹೇಶ್ ಕಾರ್ಕಳ,    ,   ಸಮಿತಿಯ ಸದಸ್ಯರುಗಳಾದ ಪೆಲಿಕ್ಸ್ ಡಿ’ಸೋಜಾ ದಂಪತಿ., , ತೋನ್ಸೆ ಅಶೋಕ್ ಎಸ್. ಶೆಟ್ಟಿ, ತುಳಸಿದಾಸ್ ಎಲ್. ಅಮೀನ್, ನ್ಯಾ. ದಯಾನಂದ ಶೆಟ್ಟಿ, , ಚಿತ್ರಾಪು ಕೆ.ಎಂ. ಕೋಟ್ಯಾನ್, , ಜಿಲ್ಲಾ ಗೌರವ ಕಾರ್ಯದರ್ಶಿ ಸುರೇಂದ್ರ ಮೆಂಡನ್, ದಿವಾಕರ್ ಪೊಸ್ರಾಲ್, ರವಿ ಮೆಂಡನ್, ಶೇಖರ ಗುಜ್ಜರಬೆಟ್ಟು, ಪ್ರತಾಪ್ ಕೋಟ್ಯಾನ್, ರವಿರಾಜ್ ಕಲ್ಯಾಣ್ಪುರ್, , ನಿರಂಜನ್ ಕರ್ಕೇರ, ನಾಗೇಶ್ ಶೆಟ್ಟಿ ಮಣಿ ಗುತ್ತು  , ಜಯಪ್ರಕಾಶ್ ಹೆಗ್ಡೆ, ನ್ಯಾ. ಗುಣಾಕರ್ ಶೆಟ್ಟಿ 

ಜಿಲ್ಲಾ ಕೋಶಾಧಿಕಾರಿ ಪ್ರಭಾಕರ ಬಂಗೇರ ಕಾರ್ಕಳ,   ಹಾಗೂ ಸಮಿತಿಯ ಇತರ ಪದಾಧಿಕಾರಿಗಳು   ಉಪಸ್ಥರಿದ್ದರು.

B. Dinesh Kulal

Mob.: 9821868674

Related posts

ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಅವರಿಗೆ ಪರಿಸರ ಪ್ರೇಮಿ ಸಮಿತಿಯಿಂದ ಸ್ವಾಗತ.

Mumbai News Desk

ಮೈಲ್ ಸ್ಟೋನ್ ಮಿಸ್ ಮತ್ತು ಮಿಸೆಸ್ ಗ್ಲೋಬಲ್ ಇಂಟರ್ನ್ಯಾಷನಲ್ ವರ್ಲ್ಡ್ ಪೇಜೆಂಟ್ 2024, ಪ್ರಭಾ ಸುವರ್ಣ ಟೂರಿಸಂ ಎಂಬಾಸಿಡರ್ ಆಗಿ ಆಯ್ಕೆ

Mumbai News Desk

ಐಕ್ಯ ಸ್ವರೂಪಿಣಿ ಕಾಪು ಮಾರಿಯಮ್ಮ ನವ ದುರ್ಗಾ ಲೇಖನಯಜ್ಞ ಪುಸ್ತಕ ವಸಯಿ ದಾಹಣು , ಪ್ರಾದೇಶಿಕ ಸಮಿತಿಯಯಿಂದ  ಭಕ್ತರಿಗೆ ವಿತರಣೆ

Mumbai News Desk

ಮುಲುಂಡ್:ಸದಾಶಿವ ಕುಕ್ಯಾನ್ ನಿಧನ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ ವತಿಯಿಂದ ಪ್ರತಿಷ್ಠ ತ  ಹೋಟೆಲ್ ಉದ್ಯಮಿ ಶಿವಚಂದ್ರ ಶೆಟ್ಟಿ ದಂಪತಿಗಳಿಗೆ ಸನ್ಮಾನ

Mumbai News Desk

ಬಜೆಟ್ ನಲ್ಲಿ ನಿರ್ಲಕ್ಷ್ಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಗ್ರಹ* ಬಂಟರ ಅಭಿವೃದ್ದಿ ನಿಗಮ ಸ್ಥಾಪಿಸಿ : ಐಕಳ ಹರೀಶ್ ಶೆಟ್ಟಿ

Mumbai News Desk