
ಕಾಪು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಇಂದು
(ಜು. 11) ಮಧ್ಯಾಹ್ನ 2 ಗಂಟೆಗೆ ಹೆಜಮಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತ ದಿ.ಜಯಂತ್ ಪಡುಬಿದ್ರಿ ಸಂಸ್ಮರಣೆ,ದತ್ತಿ ನಿಧಿ ವಿತರಣೆ ಹಾಗೂ ದತ್ತಿ ಉಪನ್ಯಾಸ ನಡೆಯಲಿದೆ..
ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಹೆಜಮಾಡಿ ಅಧ್ಯಕ್ಷತೆ ವಹಿಸಲಿದ್ದು, ಜಾನಪದ ಚಿಂತಕ ಡಾಕ್ಟರ್ ವೈ ಎನ್ ಶೆಟ್ಟಿ ದತ್ತಿ ನಿಧಿ ವಿತರಿಸಿ ದತ್ತಿ ಉಪನ್ಯಾಸ ನೀಡಲಿರುವರು.. ಸಂಘದ ಪೂರ್ವ ಅಧ್ಯಕ್ಷ ರಾಕೇಶ್ ಕುಂಜೂರು ಪತ್ರಿಕಾ ದಿನಾಚರಣೆ ಕುರಿತು ಉಪನ್ಯಾಸ ನೀಡಲಿದ್ದಾರೆ.. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಹೆಜಮಾಡಿ ಪದವಿ ಪೂರ್ವ ಕಾಲೇಜ್ ನ ಪ್ರಿನ್ಸಿಪಾಲ ವಿನ್ಸೆಂಟ್ ವಿನೋದ್ ಡಿಸೋಜ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸಂಪಾವತಿ ಅತಿಥಿಗಳಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.




