30.9 C
Mumbai
June 8, 2026
Mumbai News Kannada
ಪ್ರಕಟಣೆ

ಎ 4: ಮೀರಾ – ಭಾಯಂದರ್ ತುಳು – ಕನ್ನಡಿರಿಂದ ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಅವರಿಗೆ ಸನ್ಮಾನ.






ತುಳು – ಕನ್ನಡಿಗ 200 ಕ್ಕಿಂತ ಹೆಚ್ಚು ಕಲಾವಿದರಿಂದ ಯಕ್ಷ-ಗಾನ- ನಾಟ್ಯ ಸಂಭ್ರಮ.

ಮೀರಾ ರೋಡ್ :. ಪ್ರತಾಪ್ ಸರ್ ನಾಯಕ್ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಿರುವ
ಚೈತ್ರ ನವರಾತ್ರೋತ್ಸವ ಕಾರ್ಯಕ್ರಮದಲ್ಲಿ ಮೀರಾ – ಭಾಯಂದರ್ ಸಂಘಟಕ ಬಂಟರ ಸಂಘ, ಮುಂಬೈಯ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರು ಮತ್ತು ಮೀರಾ – ಭಾಯಂದರ್ ಭಾರತೀಯ ಜನತಾ ಪಕ್ಷದ ಮುಖಂಡ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು ನೇತೃತ್ವದಲ್ಲಿ ತುಳು ಕನ್ನಡಿಗರ ಒಗ್ಗಟ್ಟಿನಲ್ಲಿ ಎ. 4 ರಂದು ಶುಕ್ರವಾರ ಸಂಜೆ ಗಂಟೆ 6:00 ರಿಂದ 9:00ರ ವರೆಗೆ
ನಾಮ್ಹಾರ್ ಗೋಖಲೆ ಮೈದಾನ, ಬೆವರ್ಲಿ ಪಾರ್ಕ್‌, ಆ‌ರ್.ಬಿ.ಕೆ ಶಾಲೆ ಹತ್ತಿರ, ಮೀರಾ ಭಾಯಂದರ್ ಇಲ್ಲಿ ಮಹಾರಾಷ್ಟ್ರದ ನೂತನ
ಸಾರಿಗೆ ಸಚಿವ ಪ್ರತಾಪ್ ಸರ್ ನಾಯಕ್ ಇವರಿಗೆವಿಶೇಷ ಸನ್ಮಾನ ಹಾಗೂ ತುಳು – ಕನ್ನಡಿಗ 200 ಕ್ಕಿಂತ ಹೆಚ್ಚು ಕಲಾವಿದರಿಂದ ಯಕ್ಷ-ಗಾನ ನಾಟ್ಯ ಸಂಭ್ರಮ ನಡೆಯಲಿದೆ.
ಮೀರಾ – ಭಾಯಂದರ್ ನ ತುಳು – ಕನ್ನಡಿಗರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ, ಹೋಟೆಲ್ ಉದ್ಯಮಿಗಳ, ರಾಜಕೀಯ ನಾಯಕರ ಉಪಸ್ಥಿತಿಯಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ.
ಪ್ರಪ್ರಥಮ ಬಾರಿಗೆ ಸುಮಾರು 200 ತುಳು ಕನ್ನಡದ ಕಲಾವಿದರು ತಮ್ಮ ನೃತ್ಯ ಪ್ರದರ್ಶನವನ್ನು ನೀಡಲಿದ್ದಾರೆ.
ಮೀರಾ – ಭಾಯಂದರ್ ನ ಜನಪ್ರಿಯ ಶಾಸಕರಾಗಿ ತುಳು ಕನ್ನಡಿಗರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಪ್ರತಾಪ್ ಸರ್ ನಾಯಕ್ ಈ ಬಾರಿಯ ಮಹಾರಾಷ್ಟ್ರ ಸರಕಾರದ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದು ಅವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದ ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ತುಳು ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘಟಕರಾದಗಿರೀಶ್ ಶೆಟ್ಟಿ ತೆಳ್ಳಾರು, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು ಹಾಗೂ ಮೀರಾ- ಭಾಯಂದರ್ ನ ತುಳು ಕನ್ನಡಿಗರು ವಿನಂತಿಸಿಕೊಂಡಿದ್ದಾರೆ.



Related posts

ಮಿಸ್ಟರ್/ಮಿಸ್/ಮಿಸೆಸ್ ಕರ್ನಾಟಕ ಸ್ಟೈಲ್ ಐಕಾನ್‌-2025: ಗ್ರ್ಯಾಂಡ್ ಫಿನಾಲೆ ಡಿ. 18 ರಂದು ನಿಶಿತಾ ಸೂರ್ಯಕಾಂತ್ ಸುವರ್ಣ ಆಯೋಜನೆಯಲ್ಲಿ ‘ಸೀಸನ್‌ 6’ ರ ಅಂತಿಮ ಹಂತ

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ : ಅ. 9ರಂದು ನಾಗರಪಂಚಮಿ ಉತ್ಸವ.

Mumbai News Desk

ಶ್ರೀ ದುರ್ಗಾ ಭಜನಾ ಸೇವಾ ಮಂಡಳ, ಜ.21ಕ್ಕೆ 17ನೇ ವಾರ್ಷಿಕ ಮಹಾಪೂಜೆ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಜ.21ರಂದು ಸನಾತನ ಶಿವಾಮಯ ದೀಪೋತ್ಸವ.

Mumbai News Desk

ಶ್ರೀ ಮಹಾವಿಷ್ಣು ಮಂದಿರ: ಜುಲೈ -27 ರಂದು 48 ನೇ ವಾರ್ಷಿಕ ಮಹಾಸಭೆ.

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ (ರಿ), ಕಿಸಾನ್ ನಗರ ಥಾಣೆ :ಡಿ. 19ರಿಂದ 21ರ ತನಕ ರಜತ ಮಹೋತ್ಸವ, 25ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk