ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಯೋಜನೆಯಲ್ಲಿ ‘ಆಟಿದ ಭೂತಾರಾದನೆ’ ಸಾಕ್ಷಾ ಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ ಆಗಸ್ಟ್ 2ರಂದು, ಶನಿವಾರ, ಮಧ್ಯಾಹ್ನ 2 ಗಂಟೆಗೆ ಮಂಗಳೂರು ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರನಾಥ್ ಗಟ್ಟಿ ಕಾಫಿಕಾಡು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರದಲ್ಲಿದ್ದು, ಹಿರಿಯ ಜಾನಪದ ವಿದ್ವಾಂಸರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು ಆದ ಡಾ. ವೈ.ಎನ್. ಶೆಟ್ಟಿ ಅವರು ಸಾಕ್ಷಾಚಿತ್ರ ಬಿಡುಗಡೆಗೊಳಿಸಲಿರುವರು.
ಸಾಕ್ಷಾ ಚಿತ್ರದ ನಿರ್ದೇಶಕ, ಪತ್ರಕರ್ತ ರಮೇಶ್ ಮಂಜೇಶ್ವರ ಮುಖ್ಯ ಅತಿಥಿಯಾಗಿರುವರು. ವಿಟ್ಲ, ಪೆರುವಾಯಿ, ಮೂವರು ದೈವಂಗಳು ದೇವಸ್ಥಾನದ ಗುರಿಕಾರ ಸುಬ್ರಮಣ್ಯ ಭಟ್ ಕೆ.ಜೆ ಹಾಗೂ ಪೆರುವಾಯಿ ವಿಟ್ಲದ ನಿವೃತ್ತ ಶಿಕ್ಷಕ ಎಂ ಕೆ ಕುಕ್ಕಾಜೆ ಅವರು ಆಟಿದ ಭೂತಾರಾದನೆ, ನೇಮದ ಬಗ್ಗೆ ಅಭಿಪ್ರಾಯ ಮಂಡಿಸಲಿರುವರು.
ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಗಟ್ಟಿ ಮಳಿ, ದೈವರಾದಕರುಗಳಾದ ಆನಂದ್ ನಲಿಕೆ, ಐತಪ್ಪ ಅರಿಕ್ಕಾಡಿ ಕುಂಬಳೆ, ಪ್ರಗತಿಪರ ಕೃಷಿಕ ರಾಜೇಂದ್ರನಾಥ ರೈ ಪ್ರತಿಕ್ರಿಯೆ ನೀಡಲಿರುವರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ಸಂಚಾಲಕರಾದ ಬೂಬ ಪೂಜಾರಿ ಎಲ್ಲರಿಗೂ ಪ್ರೀತಿಯ ಸ್ವಾಗತ ಬಯಸಿದ್ದಾರೆ.




