July 23, 2026
Mumbai News Kannada
ಪ್ರಕಟಣೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ : ಆಗಸ್ಟ್ 2ಕ್ಕೆ ಆಟಿದ ಬೂತಾರಾದನೆ, ಸಾಕ್ಷ ಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ








ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಯೋಜನೆಯಲ್ಲಿ ‘ಆಟಿದ ಭೂತಾರಾದನೆ’ ಸಾಕ್ಷಾ ಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ ಆಗಸ್ಟ್ 2ರಂದು, ಶನಿವಾರ, ಮಧ್ಯಾಹ್ನ 2 ಗಂಟೆಗೆ ಮಂಗಳೂರು ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರನಾಥ್ ಗಟ್ಟಿ ಕಾಫಿಕಾಡು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರದಲ್ಲಿದ್ದು, ಹಿರಿಯ ಜಾನಪದ ವಿದ್ವಾಂಸರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು ಆದ ಡಾ. ವೈ.ಎನ್. ಶೆಟ್ಟಿ ಅವರು ಸಾಕ್ಷಾಚಿತ್ರ ಬಿಡುಗಡೆಗೊಳಿಸಲಿರುವರು.
ಸಾಕ್ಷಾ ಚಿತ್ರದ ನಿರ್ದೇಶಕ, ಪತ್ರಕರ್ತ ರಮೇಶ್ ಮಂಜೇಶ್ವರ ಮುಖ್ಯ ಅತಿಥಿಯಾಗಿರುವರು. ವಿಟ್ಲ, ಪೆರುವಾಯಿ, ಮೂವರು ದೈವಂಗಳು ದೇವಸ್ಥಾನದ ಗುರಿಕಾರ ಸುಬ್ರಮಣ್ಯ ಭಟ್ ಕೆ.ಜೆ ಹಾಗೂ ಪೆರುವಾಯಿ ವಿಟ್ಲದ ನಿವೃತ್ತ ಶಿಕ್ಷಕ ಎಂ ಕೆ ಕುಕ್ಕಾಜೆ ಅವರು ಆಟಿದ ಭೂತಾರಾದನೆ, ನೇಮದ ಬಗ್ಗೆ ಅಭಿಪ್ರಾಯ ಮಂಡಿಸಲಿರುವರು.
ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಗಟ್ಟಿ ಮಳಿ, ದೈವರಾದಕರುಗಳಾದ ಆನಂದ್ ನಲಿಕೆ, ಐತಪ್ಪ ಅರಿಕ್ಕಾಡಿ ಕುಂಬಳೆ, ಪ್ರಗತಿಪರ ಕೃಷಿಕ ರಾಜೇಂದ್ರನಾಥ ರೈ ಪ್ರತಿಕ್ರಿಯೆ ನೀಡಲಿರುವರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ಸಂಚಾಲಕರಾದ ಬೂಬ ಪೂಜಾರಿ ಎಲ್ಲರಿಗೂ ಪ್ರೀತಿಯ ಸ್ವಾಗತ ಬಯಸಿದ್ದಾರೆ.



Related posts

ಶ್ರೀ ರಜಕ ಸಂಘ ಮುಂಬಯಿ, ವಸಾಯಿ ಘಟಕದ ವತಿಯಿಂದ ಸೆ. 28ಕ್ಕೆ ಶಾರದಾ ಪೂಜೆ

Mumbai News Desk

ಫೆ. 10ಕ್ಕೆ ಸಚ್ಚೇರಿಪೇಟೆಯಲ್ಲಿ ಸಾರ್ವಜನಿಕ ಶನೈಶ್ಚರ ಪೂಜೆ – ಸಂತ ಸಮಾಗಮ

Mumbai News Desk

ಕುಮಾರ  ಕ್ಷತ್ರಿಯ ಸಂಘ  ಮುಂಬಯಿ: ಫೆಬ್ರವರಿ 11 : 58 ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಕುಮಾರ  ಕ್ಷತ್ರಿಯ ಸಂಘ  59 ನೇ ವಾರ್ಷಿಕ ಮಹಾಸಭೆ, ಪೆ.16 :   ಸತ್ಯನಾರಾಯಣ ಮಹಾಪೂಜೆ, ಹಳದಿ ಕುಂಕುಮ

Mumbai News Desk

ಎ. 13ರಂದು ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದಲ್ಲಿ ಕುಮಾರ್ ಬಂಗೇರ ಮತ್ತು ಮನೆಯವರಿಂದ ಹರಕೆಯ ಕೋಲ

Mumbai News Desk

  ಜ 22 :  ಪುಣೆ  ಪಿಂಪ್ರೀ ಚಿಂಚ್ವಾಡ್ ಬಂಟರ ಸಂಘ ವತಿಯಿಂದ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ರಿಂದ  “ಸೀತಾರಾಮ ಕಲ್ಯಾಣ” ಹರಿಕಥೆ, ಶ್ರೀರಾಮ ದೇವರಿಗೆ ಮಹಾಪೂಜೆ .

Mumbai News Desk