32 C
Mumbai
March 7, 2026
Mumbai News Kannada
ಮುಂಬಯಿ

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರುಇವರ ಸಹಯೋಗದಲ್ಲಿ” ಆಟಿದ ಪೊರ್ಲ ಪೊಲಬು”





ಅಟಿದ ಕೂಟ ಸಂಭ್ರಮವಾಗದೇ ಹಿಂದೆ ದಿನ ನೆನಪಾಗುವಂತಾಗಲಿ ಡಾ. ಎಮ್ ಜೆ ಪ್ರವೀಣ್ ಭಟ್,

ಮುಂಬಯಿ ಆ45. ಬಿಲ್ಲವ ಸಮಾಜದ ಹಿರಿಯ ಮುಖಂಡ    ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರು
ಇವರ ಸಯೋಗದಲ್ಲಿಜಯ ಸಿ. ಸುವರ್ಣ ಮಹಿಳಾ ಅಭಿಮಾನಿಗಳ
ವತಿಯಿಂದಆಟಿದ ಪೊರ್ಲ ಪೊಲಬು ಕಾರ್ಯಕ್ರಮ ಆ 02 ಆಗಸ್ಟ್ 2025   ಜಯಲೀಲಾ ಬ್ಯಾಂಕ್ವೆಟ್ ಸಭಾಗೃಹ, ಗೋರೆಗಾಂವ್ ಪೂರ್ವ ಇಲ್ಲಿ ನಡೆಯಿತು,

  ಕಾರ್ಯಕ್ರಮವನ್ನುಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಉದ್ಘಾಟಿಸಿದರು,

  ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕನ್ನಡ ಸಂಘ ಸಯನ್  ಅಧ್ಯಕ್ಷರಾದಡಾ.  ಎಂ ಜೆ. ಪ್ರವೀಣ್  ಭಟ್ ಮಾತನಾಡುತ್ತಾ ಸಮಾಜವನ್ನು ಒಗ್ಗಟ್ಟು ಮಾಡುವುದಕ್ಕೆ ಇಂಥ ಕಾರ್ಯಕ್ರಮಗಳು ಅಗತ್ಯ ಇದು ಸಂಭ್ರಮವಾಗದೆ, ಅಂದಿನ ಕಾಲದ ನೆನಪುಗಳಾಗಬೇಕುವ ಕ್ರಮ ಆಗಬೇಕು, ಮಹಿಳೆಯರು ಒಗ್ಗಟ್ಟಾಗಿ ಸಮಾಜವನ್ನು ಮುನ್ನಡೆಸಬೇಕು ಎಂದು ನುಡಿದರು,,

ಅತಿಥಿಯಾದ  ಸಾಹಿತಿ ಲತಾ ಸಂತೋಷ್ ಶೆಟ್ಟಿ ಸಂದರ್ಭ ಉಚಿತವಾಗಿ ಮಾತನಾಡಿ ಶುಭ ಹಾರೈಸಿದರು,

ವೇದಿಕೆಯಲ್ಲಿ   ಧಾಣೆ ಮಹೇಶ್ ಕರ್ಕೇರ ,ನೈನಾ ಓಕೆ (ಮನಃಶಾಸ್ತ್ರಜ್ಞೆ), ಕಲ್ಪನಾ ಹರೀಶ್ ಕುಮಾರ್ ( ಯೋಗ ಶಿಕ್ಷಕಿ) ,ಪುಷ್ಪಲತಾ ಬಿ. ಪಾಲನ್ (ಸಮಾಜ ಸೇವಕಿ) ಲತಾ ಸಂತೋಷ್ ಶೆಟ್ಟಿ -( ಸಮಾಜ ಸೇವಕಿ), ಲತಾ ಎಸ್. ಸುವರ್ಣ – (ಸಮಾಜ ಸೇವಕಿ), ಪೂರ್ಣಿಮಾ ಎಂ. ಪೂಜಾರಿ (- ಸಮಾಜ ಸೇವಕಿ) ಮತ್ತಿತರರು ಉಪಸ್ಥಿತರಿದ್ದರು,

ಈ ಸಂದರ್ಭದಲ್ಲಿ ದೇವಕಿ ಸದಾಶಿವ್ ಕರ್ಕೇರ, ಅರುಣಾ ದಾಮೋದರ್, ಶಾಂತ ಅಚ್ಚಣ್ಣ,ಲೀಲಾ ಗಣೇಶ್,
 ರೂಪಾoಜಲಿ ಧನಂಜಯ್, ಸಬಿತಾ ಜಿ ಪೂಜಾರಿ, ಹೇಮಾ ಕೇಶವ್, ಪುಷ್ಪ ಅಮೀನ್, ಆಶಾ ಸಂಜೀವ್, ಆಶಾಲತಾ ಕೇಶವ್, ವಿಜಯ ನರೇಂದ್ರ ಮೂಲ್ಕಿ, ಸರೋಜಿನಿ ವಾಶಿ, ವನಿತಾ ಅಶೋಕ್, ಸರಸ್ವತಿ ಆಶೋಕ್ , ಉಷಾ ರವಿ ಕೋಟ್ಯಾನ್ ಇವರನ್ನು ಗೌರವಿಸಲಾಯಿತು,

ಕಾರ್ಯಕ್ರಮವನ್ನು ಶಶಿಧರ್ ಬಂಗೇರ ನಿರೂಪಿಸಿ ಹೊಂದಿಸಿದರು,

  ಕಾರ್ಯಕ್ರಮದಲ್ಲಿ   ಮುಂಬಯಿಯ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಬಿಲ್ಲವ ಕುಟುಂಬಗಳು ಒಮ್ಮನಸ್ಸಿನಿಂದ ಮುಂಬಯಿಯ ಗೊರೆಗಾಂವ್‌ನ ಜಯಲೀಲಾ ಸಭಾಗೃಹದಲ್ಲಿ ಸೇರಿಕೊಂಡಿದ್ದಾರು,
ಕಾರ್ಯಕ್ರಮದಲ್ಲಿ ಮುಖ್ಯವಾಗಿ 350ಕ್ಕೂ ಹೆಚ್ಚು ಸಂಪ್ರದಾಯಿಕ ತಿಂಡಿ ತಿನಿಸುಗಳು, ಮುಂಬಯಿಯ ವಿವಿಧ ಬಿಲ್ಲವ ಮನೆಗಳಿಂದ ಮಹಿಳೆಯರು ತಾವು ತಯಾರಿಸಿದವುಗಳನ್ನು ತಂದು, ಈ ಸಮಾರಂಭಕ್ಕೆ ಶೋಭೆಯನ್ನು ನೀಡಿದರು. ಮಕ್ಕಳ ನೃತ್ಯಗಳು, ಮಹಿಳೆಯರ ಜಾನಪದ ನೃತ್ಯಗಳು, ಹಾಗೂ ವಿಶೇಷವಾಗಿ “ಪೊರ್ಲ ಸಂಸಾರ” ನಾಟಕವು ತುಳುನಾಡಿನ ದಿನಚರಿ, ಜೀವನದ ಸಾಂಸ್ಕೃತಿಕ ತಾತ್ವಿಕತೆಯನ್ನು  ಕಣ್ಣಿಗೆ ಕಟ್ಟುವಂತೆ ಸಾದರ ಪಡಿಸಿತು.,

—-***-

  ಮಹಿಳಾಯರು   ಆರೋಗ್ಯವಂತರಾಗಿದ್ದಾಗ ಮನೆಯನ್ನು ಸಮಾಜವನ್ನು ಸಮರ್ಥರಿಗೆ ಮುನ್ನಡೆಸಬಹುದು:ನಿಶಿತಾ ಸೂರ್ಯಕಾಂತ್ ಸುವರ್ಣ

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಜಯ ಸಿ. ಸುವರ್ಣ ಅಭಿಮಾನಿಗಳ ಳು ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ನಿಶಿತಾ ಸೂರ್ಯಕಾಂತ್ ಸುವರ್ಣ ಮಾತನಾಡುತ್ತಾ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಒಗ್ಗಟ್ಟಾಗಿದ್ದಾರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ಭದ್ರಗೊಳಿಸುವ, ಎಲ್ಲ ಮಹಿಳೆಯರು ಆರೋಗ್ಯದ ಕಡೆ ಗಮನ ನೀಡಬೇಕು, ಆರೋಗ್ಯವಂತರಾಗಿದ್ದಾಗ ಮನೆಯನ್ನು ಸಮಾಜವನ್ನು ಸಮರ್ಥರಿಗೆ ಮುನ್ನಡೆಸಬಹುದು ಎಂದು ನುಡಿದರು

B. Dinesh Kulal

Mob.: 9821868674



Related posts

ಬಿಲ್ಲವರ ಅಸೋಸಿಯೇಷನ್ ಮುಂಬಯಿ : ಮೀರಾರೋಡ್ ಸಮಿತಿವತಿಯಿಂದ ಧಾರ್ಮಿಕ ಯಾತ್ರೆ

Mumbai News Desk

ಸದ್ಗುರು ಅನಿರುದ್ಧ ಕನ್ನಡ ಉಪಾಸನಾ ಕೇಂದ್ರದ ಧಾರ್ಮಿಕ ಪ್ರವಾಸ.

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆಯ 12ನೇ ವಾರ್ಷಿಕ ಮಹಾಪೂಜೆ

Mumbai News Desk

ಮಲಾಡ್ ಶ್ರೀ ಮಹಮ್ಮಾಯಿ  ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದೊಂದಿಗೆ ದಸರಾ ಮಹೋತ್ಸವ ಸಂಪನ್ನ

Mumbai News Desk

ವರ್ಲಿ  ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ನಲ್ಲಿ ಭಕ್ತಿ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿ (ರಿ ) ಮಹಿಳಾ ವಿಭಾಗದ ವತಿಯಿಂದ ಖಾರ್ ಘರ್ ನಲ್ಲಿರುವ ಗಿರಿಜಾ ವೆಲ್ಫೇರ್ ಅನಾಥಾಶ್ರಮಕ್ಕೆ ಭೇಟಿ

Mumbai News Desk