30.5 C
Mumbai
June 8, 2026
Mumbai News Kannada
Uncategorized

ಶಿವಸೇನೆ ದಕ್ಷಿಣ ಭಾರತದ ವಿಭಾಗ, ಡೊಂಬಿವಲಿ – ಆಟಿಡ್ ಒಂಜಿ ದಿನ





ಶಿವಸೇನೆ ದಕ್ಷಿಣ ಭಾರತದ ವಿಭಾಗ, ಡೊಂಬಿವಲಿ ಮತ್ತು ಶ್ರೀ ಮುಕಾಂಬಿಕ ಸಾಮಾಜಿಕ ಕಲ್ಯಾಣ ಪ್ರತಿಷ್ಠಾನವು ಆಗಸ್ಟ್ 3 ರ ರವಿವಾರ ಸಂಜೆ ಲೆವ ಭವನದಲ್ಲಿ ಆಟಿ ಡ್ ಒಂಜಿ ದಿನ (ಆಶಾಡ ದಲ್ಲಿ ಒಂದು ದಿನ) ಎಂಬ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.

ಈ ಕಾರ್ಯಕ್ರಮವು ದಕ್ಷಿಣ ಭಾರತದ ಸಮುದಾಯದ ಸಂಪ್ರದಾಯ, ಸಂಸ್ಕೃತಿ ಮತ್ತು ಏಕತೆಯನ್ನು ಅನುಸರಿಸಿತು. ಮಹಿಳೆಯರ ಸ್ವಯಂಪ್ರೇರಿತ ಭಾಗವಹಿಸುವಿಕೆಯಿಂದಾಗಿ ಈ ಕಾರ್ಯಕ್ರಮವು ಹೆಚ್ಚು ಪ್ರಾಮುಖ್ಯತೆ ಪಡೆಯಿತು. ಕಾರ್ಯಕ್ರಮದಲ್ಲಿ, ಸಾಂಸ್ಕೃತಿಕ ಕಲಾ ಪ್ರದರ್ಶನ, ಸಾಂಪ್ರದಾಯಿಕ ನೃತ್ಯ, ಹಾಡು, ವೇಷಭೂಷಣ ಸ್ಪರ್ಧೆಯ ಆಕರ್ಷಕ ಸಂಗಮ ಕಂಡುಬಂದಿತು. ಸಣ್ಣ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಪ್ರತಿಯೊಬ್ಬರೂ ಭಾಗವಹಿಸಿದರು.

ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಶ್ರೀಕಾಂತ್ ಏಕನಾಥ್ ಶಿಂದೆ ಹಾಗೂ ಶಿವಸೇನಾ ಜಿಲ್ಲಾ ಪ್ರಮುಖ ಗೋಪಾಲ್ ಆರ್. ಲ್ಯಾಂಡ್ಗೆ, ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸ್ಥಳೀಯ ಶಾಸಕ ರಾಜೇಶ್ ಮೋರೆ, ಥಾಣೆ ಯ ಮಾಜಿ ಮೇಯರ್ ಮೀನಾಕ್ಷಿ ಶಿಂಧೆ, ಕಲ್ಯಾಣ್ ಜಿಲ್ಲಾ ಸಂಘಟಕಿ ಶ್ರೀಮತಿ ಲತಾ ಪಾಟೀಲ್ ಉಪಸ್ಥಿತರಿದ್ದು ಗೌರವ ಸ್ವೀಕರಿಸಿ, ಸ್ಪೂರ್ತಿದಾಯಕ ಭಾಷಣ ಮಾಡಿ, ಕಾರ್ಯಕ್ರಮದ ಸೂಕ್ತ ನಿರ್ವಹಣೆಯನ್ನು ನೋಡಿ ಘಟಕದ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ಹಬ್ಬಗಳ ಹೊಳಪು, ಸಾಮರಸ್ಯ ಮತ್ತು ಉತ್ಸಾಹವು ಸಮಾರಂಭದಲ್ಲಿ ಕಂಡುಬಂದಿತು. 60 ಜನ ಮಹಿಳೆಯರು ತಮ್ಮ ಮನೆಗಳಲ್ಲಿ ಆಷಾಡ ಮಾಸದ ವಿಶೇಷ ಅಡುಗೆ ಸಿದ್ಧ ಪಡಿಸಿ ತಂದಿದ್ದರು.

ಕಾರ್ಯಕ್ರಮದ ಆಯೋಜಕರುಗಳಾದ ಯುವ ಸೇನೆ ದಕ್ಷಿಣ ಭಾರತ ಘಟಕದ ಮಹಿಳಾ ಅಧ್ಯಕ್ಷ ಅನುಪಮ ಶೆಟ್ಟಿ ಹಾಗೂ ಅಧ್ಯಕ್ಷ ಸುಭಾಷ್ ಶೆಟ್ಟಿ ಇನ್ನಂಜೆ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ವಿಶೇಷ ಧನ್ಯವಾದ ಸಮರ್ಪಿಸಿದರು.

ಈ ಕಾರ್ಯಕ್ರಮ ಯಶಸ್ಸು ಗೊಳ್ಳುವಲ್ಲಿ ಎಲ್ಲಾ ಸಂಘಟಕರು, ಭಾಗವಹಿಸಿದ ಕಲಾವಿದರು, ಮಹಿಳೆಯರು, ಸ್ವಯಂಸೇವಕರು ಮತ್ತು ಪ್ರಮುಖ ಅತಿಥಿಗಳ ಅಮೂಲ್ಯ ಕೊಡುಗೆಯಾಗಿದೆ. ಎಲ್ಲರ ಸಹಕಾರದಿಂದಾಗಿ, ‘ಆಟಿ ಡ್ ಒಂಜಿ ದಿನ’ (ಆಶಾಡ ದಲ್ಲಿ ಒಂದು ದಿನ) ಕಾರ್ಯಕ್ರಮವು ಸ್ಮರಣೀಯವಾಗಿತ್ತು.



Related posts

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk

ಮುಂಬಯಿ ಬಿಲ್ಲವರ ಹಿತಚಿಂತಕರು ಮತ್ತು ಜಯ ಸಿ ಸುವರ್ಣ ಅಭಿಮಾನಿಗಳ ವತಿಯಿಂದ ಪತ್ರಕರ್ತ,ವಾಗ್ಮಿ ,ದಿನೇಶ್ ಮಟ್ಟು ಅವರಿಗೆ ಗೌರವ.

Mumbai News Desk

Pruitt’s Successor Wants Rollbacks, Too. And He Wants Them to Stick

admin

U.S. employers add over 261,000 jobs in October 2017

admin

Allen Weisselberg, Trump Organization’s Finance Chief, May Be Questioned

admin

ಮಹಾರಾಷ್ಟ್ರದ ಕಲ್ಯಾಣ್‌ ನಲ್ಲಿ ಕನ್ನಡ ಕಲೆಯ ರಸದೌತಣ: ಅ. 6 ರಂದು ಯಕ್ಷಗಾನ ಕಲಾರಾಧನೆ ‘ಪರ್ಣಕುಟೀರ’

Mumbai News Desk