
ಮುಂಬೈ : ಭಾರತದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನ ವಿಶೇಷ ಸ್ಥಾನವನ್ನು ಉಳಿಸಿಕೊಂಡಿರುವ ಭಾರತ್ ಬ್ಯಾಂಕ್ ತನ್ನ 47ನೇ ಸಂಸ್ಥಾಪನಾ ದಿನಾಚರಣೆಯನ್ನು ಬೊಯಿಸರ್ ಶಾಖೆಯಲ್ಲಿ ಭಾವಭರಿತವಾಗಿ ಹಾಗೂ ಉತ್ಸಾಹದಿಂದ ಆಚರಿಸಿತು.
ಈ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ಶ್ರೀನಿವಾಸ್ ಕೋಟ್ಯಾನ್, ಪರಶುರಾಮ ಪಾಟೀಲ್, ಪ್ರಕಾಶ್ ಶೆಟ್ಟಿ, ಜಿನೇಂದ್ರ ಪೂಜಾರಿ ಮತ್ತು ಯೋಗೇಶ್ ಶೆಟ್ಟಿ ಉಪಸ್ಥಿತರಿದ್ದು ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.
ಶಾಖಾ ವ್ಯವಸ್ಥಾಪಕಿ ಜೆನಿಫರ್ ಸಿಕ್ವೈರಾ, ಸಹಾಯಕ ವ್ಯವಸ್ಥಾಪಕ ದಿನೇಶ್ ಎಸ್. ಪೂಜಾರಿ ಹಾಗೂ ಸಿಬ್ಬಂದಿಗಳಾದ ಸಮಿಕ್ಷಾ ರಾವೂತ್, ಶರಣ್ಯ ಶೆಟ್ಟಿ, ಕಿರಣ್ ಪಾಥಾರೆ ಮತ್ತು ಆಸಾವರಿ ಗುಪ್ತಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಅತಿಥಿಗಳು ತಮ್ಮ ಸಂದೇಶದಲ್ಲಿ ಭಾರತ್ ಬ್ಯಾಂಕ್ ಕಳೆದ ನಾಲ್ಕು ದಶಕಗಳಲ್ಲಿ ಸಾಧಿಸಿದ ಪ್ರಗತಿಯನ್ನು ಮೆಚ್ಚಿ, ಭವಿಷ್ಯದಲ್ಲಿ ಬ್ಯಾಂಕ್ ಇನ್ನಷ್ಟು ಶ್ರೇಯೋಭಿವೃದ್ಧಿ ಸಾಧಿಸಲಿ ಎಂಬ ಹಾರೈಕೆ ವ್ಯಕ್ತಪಡಿಸಿದರು. ಬ್ಯಾಂಕಿನ ಗ್ರಾಹಕರ ವಿಶ್ವಾಸ, ಸಿಬ್ಬಂದಿಗಳ ಸಮರ್ಪಿತ ಸೇವಾಭಾವನೆ ಮತ್ತು ನಿರಂತರ ನವೀಕರಣವೇ ಈ ಸಾಧನೆಯ ಪ್ರಮುಖ ಕಾರಣವೆಂದು ಅವರು ಒತ್ತಿಹೇಳಿದರು.
ಸಮಾರಂಭದಲ್ಲಿ ಸಿಬ್ಬಂದಿಗಳ ಉತ್ಸಾಹದ ಬಣ್ಣ ಹೆಚ್ಚಿಸಿತು. ಆತ್ಮೀಯ ವಾತಾವರಣದಲ್ಲಿ ನಡೆದ ಈ ಸಮಾರಂಭವು ಬ್ಯಾಂಕಿನ ನಂಬಿಕೆ, ನಿಷ್ಠೆ ಮತ್ತು ಗ್ರಾಹಕಸೇವೆ ಎಂಬ ಮೌಲ್ಯಗಳನ್ನು ಮತ್ತೊಮ್ಮೆ ಪ್ರತಿಬಿಂಬಿಸಿತು.




