32 C
Mumbai
March 7, 2026
Mumbai News Kannada
ಮುಂಬಯಿ

ಮುಂಬಯಿಯ ಚಾರ್ಕೋಪ್ ಕನ್ನಡಿಗರ ಬಳಗದಲ್ಲಿ ರಂಗೋಲಿ ಸ್ಪರ್ಧೆ





ಮುಂಬಯಿ: ಚಾರ್ಕೋಪ್ ಕನ್ನಡಿಗರ ಬಳಗದ ವತಿಯಿಂದ ಕಳೆದ ನವೆಂಬರ್ 16ರಂದು ಬಳಗದ ಮಹಿಳಾ ಮಂಡಳಿಯು ಮಹಿಳೆಯರು ಮತ್ತು ಮಕ್ಕಳಿಗೆ ರಂಗೋಲಿ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿತ್ತು.

​ಮಹಿಳಾ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ ಹಾಗೂ ಸಂಚಾಲಕಿ ಶಾಂತ ಭಟ್ ಅವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಬಳಗದ ಸದಸ್ಯ ಮಹಿಳೆಯರು ಮತ್ತು ಮಕ್ಕಳು ಅತ್ಯುತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಗೆ ಮೆರುಗು ನೀಡಿದರು.

​ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ ಅವರು, “ಯಾವುದೇ ಸ್ಪರ್ಧೆಯಲ್ಲಿ ಬಹುಮಾನದ ಅಪೇಕ್ಷೆಗಿಂತಲೂ ಭಾಗವಹಿಸುವ ಮನೋಭಾವ ಮುಖ್ಯ. ಇದು ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ” ಎಂದು ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರೋತ್ಸಾಹದ ಮಾತು ಹೇಳಿದರು. ಮುಂದಿನ ತಿಂಗಳು ನಡೆಯಲಿರುವ ಅಡುಗೆ ಪಾಕಶಾಸ್ತ್ರ ಸ್ಪರ್ಧೆ ಹಾಗೂ ಆರತಿ ತಟ್ಟೆ ಶೃಂಗಾರ ಸ್ಪರ್ಧೆಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.

​ಸಂಚಾಲಕಿ ಶಾಂತ ಭಟ್ ಅವರು ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ಪ್ರಕಟಿಸಿದರು.

​ವಿಜೇತರ ವಿವರ:

ಮಕ್ಕಳ ವಿಭಾಗದಲ್ಲಿ:

  • ಪ್ರಥಮ: ಕುಮಾರಿ ನಮಿತ ಶೇರಿಗಾರ್
  • ದ್ವಿತೀಯ: ಕುಮಾರಿ ಲಕ್ಷ್ ಶೇರಿಗಾರ್
  • ತೃತೀಯ: ಕುಮಾರಿ ಸಂಜನ ಕೋಡ್ಲೇಕರ
  • ಆಕರ್ಷಕ: ಕುಮಾರಿ ಭೂಮಿ ಗಾಣಿಗ

ಮಹಿಳೆಯರ ವಿಭಾಗದಲ್ಲಿ:

  • ಪ್ರಥಮ: ಕುಮಾರಿ ರೋಶನಿ ಆಚಾರ್ಯ
  • ದ್ವಿತೀಯ: ಶ್ರೀಮತಿ ರಾಜೇಶ್ವರಿ ಗಾಯತ್ರಿ
  • ತೃತೀಯ: ಶ್ರೀಮತಿ ಮಲ್ಲಿಕಾ ರಾಮಕ್ಷತ್ರಿಯ
  • ಆಕರ್ಷಕ: ಶ್ರೀಮತಿ ನಿರ್ಮಲ ಶೆಟ್ಟಿ

​ಶ್ರೀಮತಿ ಲೋಹಿತ ರಾವ್, ಕುಮಾರಿ ದಿವ್ಯಾ ಬಾಲ್ಗುಡೆ, ಮತ್ತು ಶ್ರೀಮತಿ ಉಮಾ ಜೋಶಿ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

​ಬಳಗದ ಸದಸ್ಯೆಯರಾದ ರೂಪ ಭಟ್, ಶ್ರೀಮತಿ ತನುಜಾ ಭಟ್, ಶ್ರೀಮತಿ ರಶ್ಮಿ ಆಚಾರ್ಯ, ಮತ್ತು ಶ್ರೀಮತಿ ಪದ್ಮಾವತಿ ನಾಯಕ್ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

​ಬಳಗದ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಹಾಗೂ ಪೂಜಾ ಸಮಿತಿಯ ಸಂಚಾಲಕ ಶ್ರೀ ಹರೀಶ್ ಚೇವಾರ್ ಅವರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



Related posts

ಜೋಗೇಶ್ವರಿ : ಸಂಸ್ಕೃತಿ ಅಮೀನ್ ದುರ್ಮರಣ ಪ್ರಕರಣ – ಬಿಲ್ಡರ್ ನ ನಿರೀಕ್ಷಣಾ ಜಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ ಅಭಿಯಾನ: 

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ರಕ್ತದಾನ ಶಿಭಿರ,

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಗ್ರೀಷ್ಮ ಪ್ರಕಾಶ್ ಕರ್ಕೇರ ಗೆ ಶೇ 82 ಅಂಕ.

Mumbai News Desk

ಮಹಾರಾಷ್ಟ್ರ ಮಾನವ ಸೇವಾ ಸಂಘ ದಹಿಸರ್ ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ

Mumbai News Desk

ಭಾರತ್ ಬ್ಯಾಂಕ್ ಇದರ ಭಾಯಂದರ್ ಶಾಖಾ ಪ್ರಭಂದಕರಾದ ಪ್ರವೀಣ್ ಎಂ. ಬಂಗೇರ ಸೇವಾ ನಿವೃತಿ

Mumbai News Desk