30.9 C
Mumbai
June 8, 2026
Mumbai News Kannada
ಮುಂಬಯಿ

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ ಅಭಿಯಾನ: 





——-

ಮುಂಬಯಿ ಜ 19. ಮಾಲಾಡ್  ಪೂರ್ವದ ತುಳು ಕನ್ನಡಿಗರು ಸ್ಥಾಪಿಸಿದ ಶ್ರೀ ವರ ಮಹಾಲಕ್ಷ್ಮಿ ಪೂಜಾ  ಸಮಿತಿಯಲ್ಲಿ ಭಜನಾ ತಂಡ ರೂಪಗೊಂಡಿದ್ದು ಮೀರಾ ರೋಡ್ ಶ್ರೀ ಧರ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ಭಜನೆ ಅಭ್ಯಾಸ ನಡೆಯುತ್ತಿದ್ದು ಈ ಭಜಕರಿಂದ ಜನವರಿಯ 22 ರಂದು ಆಯ್ಯೋದ್ಯಯಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆಯ ಸುಸಂದರ್ಭದಲ್ಲಿ  ಮಲಾಡ್ ನ್  ತುಳು ಕನ್ನಡಿಗರ ಮನೆ ಮನೆ ಯಲ್ಲಿ “ಶ್ರೀ ರಾಮ ನಾಮ ಸ್ಮರಣೆ *ಅಭಿಯಾನವು ಸಮಿತಿಯ ಅಧ್ಯಕ್ಷ ನ್ಯಾ. ಜಗನ್ನಾಥ್ ಶೆಟ್ಟಿ ಪಣಿಯೂರ್ ಇವರ  ನೇತೃತ್ವದಲ್ಲಿ   ಬೆಳಿಗ್ಗೆ 9 ರಿಂದ ಸಂಜೆ 5.30ವರೆಗೆ ಭಜನೆ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆ ನಡೆದ ಬಳಿಕ   ಭಜನೆಗೆ  ಆಮಂತ್ರಿತ ತುಳು ಕನ್ನಡಿಗರ ಮನೆಗಳಲ್ಲಿ ದೀಪ ಬೆಳಗಿಸುವುದರ ಜೊತೆಗೆಭಜನೆ ಮಂಗಳಾರತಿ ನಡೆಯಲಿದೆ.

ಜಗತ್ತಿನಾದ್ಯಂತ ರಾಮ ಜಪ ಆರಂಭವಾಗಿದ್ದು, ಮಲಾಡ ನಲ್ಲಿ ಭಜನೆಯ ಯಜ್ಞ ನಡೆಯಲಿದೆ ಎಂದು ಪೂಜಾ ಸಮಿತಿಯ ಉಪಾಧ್ಯಕ್ಷರುಗಳಾದ ಸಂತೋಷ್ ಕೆ ಪೂಜಾರಿ ,ಕುಮಾರೇಶ್ ಆಚಾರ್ಯ ,ಪ್ರದಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಮೆಂಡನ್, ಮಹಿಳಾ ವಿಭಾಗದ  ಕಾರ್ಯದ್ಯಕ್ಷೆ ರತ್ನ . ಡಿ. ಕುಲಾಲ್, ಕಾರ್ಯದರ್ಶಿ ಶ್ರೀಮತಿ ಕೆ ಆಚಾರ್ಯ, ಕೋಶಾಧಿಕಾರಿ ಶೀಲಾ ಪೂಜಾರಿ ಹಾಗೂ ಯುವ ವಿಭಾಗದ  ಕಾರ್ಯದ್ಯಕ್ಷೆ ಸೌಮ್ಯ ಮೆಂಡನ್, ಕಾರ್ಯದರ್ಶಿ ಸುದೀಪ್ ಪೂಜಾರಿ ,. ಕೋಶಧಿಕಾರಿ ದಿಶಾ ಕರ್ಕೇರ ಹಾಗೂ ಸಮಿತಿಯ ಪದಾಧಿಕಾರಿಗಳು ತಿಳಿಸಿರುತ್ತಾರೆ.

ಕಳೆದ ವರ್ಷ ವರಮಹಾಲಕ್ಷ್ಮಿ ಪೂಜಾ  ಸಮಿತಿಯ ಯುವ ವಿಭಾಗ ಮಕ್ಕಳ ಉತ್ಸವ ಕಾರ್ಯಕ್ರಮ ದ   ಸಂದರ್ಭದಲ್ಲಿ ಶ್ರೀ ರಾಮನ ಕಥೆಯನ್ನ ಆಧರಿಸಿ ಶ್ರೀರಾಮ ಪಟ್ಟಾಭಿಷೇಕ ಎನ್ನುವ ನಾಟಕ ಡಾ  ಶಶಿನ್ ಆಚಾರ್ಯ, ಯೋಗೇಶ್ವರಿ ಗೌಡ,.ಸುದೀಪ್ ಪೂಜಾರಿ, ಪವನ್ ರಾವ್ , ನಿಧಿ ನಾಯಕ್, ಪ್ರಥಮ್ ಪೂಜಾರಿ ಇವರ ಸಂಯೋಜನೆಯಲ್ಲಿ ಮೂಡಿಬಂದಿದೆ.



Related posts

ದಹಿಸರ್ ಶ್ರೀ ಕಾಶೀಮಠದಲ್ಲಿ ಕೊಂಕಣಿಯಲ್ಲಿ ಯಕ್ಷಗಾನ

Mumbai News Desk

ಮುಂಬಯಿ: ಬಿಲ್ಲವರ ಅಸೋಸಿಯೇಷನ್ ವತಿಯಿಂದ ಸಾಹಿತ್ಯ, ಯಕ್ಷಗಾನ ಪ್ರಶಸ್ತಿ ಪ್ರದಾನ

Mumbai News Desk

ಕುಮಾರಕ್ಷತ್ರಿಯ ಸಂಘ ವಾರ್ಷಿಕ ಸ್ನೇಹ ಸಮ್ಮಿಲನ, ಧಾರ್ಮಿಕ ಕಾರ್ಯಕ್ರಮ.

Mumbai News Desk

ಥಾಣೆ ಘೋಡ್ ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ದಶಮಾನೋತ್ಸವ, ಸಾಂಸ್ಕೃತಿಕ ವೈಭವ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರೀತಮ್ ಮೋಹನ್ ಬಂಗೇರ ಗೆ ಶೇ 88 ಅಂಕ.

Mumbai News Desk

ಕುಲಾಲ ಭವನದ ಆಹ್ವಾನ ಪತ್ರಿಕೆ ವಿತರಣೆ: ಕುಲಾಲ ಸಂಘ ಮುಂಬಯಿ-ಥಾಣೆ, ಕಾಸರ, ಖರ್ಜತ್, ಬಿವಂಡಿ ಸ್ಥಳೀಯ ಸಮಿತಿ

Mumbai News Desk