29 C
Mumbai
March 7, 2026
Mumbai News Kannada
ಸುದ್ದಿ

ಜಯಪ್ರಕಾಶ್ ಪೂಜಾರಿ, ಮುಂಬೈ ಅವರಿಗೆ ತುಳುವರ್ಲ್ಡ್ ಸಮ್ಮಾನ್





ಬೆಂಗಳೂರು: ಅಲಯನ್ಸ್ ಯೂನಿವರ್ಸಿಟಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ತುಳು ವಿಚಾರ ಸಂಕಿರಣದ ವೇದಿಕೆಯಲ್ಲಿ, ಮುಂಬೈನಲ್ಲಿ ತುಳು ಭಾಷೆ–ಸಂಸ್ಕೃತಿ ಹಾಗೂ ಸಮುದಾಯ ಸಂಘಟನೆಯ ಕ್ಷೇತ್ರದಲ್ಲಿ ಸಲ್ಲಿಸಿದ ಮಹತ್ವದ ಸೇವೆಯನ್ನು ಗುರುತಿಸಿ ಶ್ರೀ ಜಯಪ್ರಕಾಶ್ ಪೂಜಾರಿ ಅವರಿಗೆ ಗೌರವಾನ್ವಿತ ತುಳುವರ್ಲ್ಡ್ ಸಮ್ಮಾನ್ ಪ್ರದಾನ ಮಾಡಲಾಯಿತು.

ಮುಂಬೈ ಮಹಾನಗರದಲ್ಲಿ ತುಳು ಸಮುದಾಯವನ್ನು ಒಂದೇ ವೇದಿಕೆಗೆ ತರುವಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸಂಘಟನೆ ಮತ್ತು ಭಾಷಾ ಚಟುವಟಿಕೆಗಳ ಮೂಲಕ ತುಳು ನುಡಿಯನ್ನು ಜೀವಂತವಾಗಿ ಉಳಿಸುವಲ್ಲಿ ಜಯಪ್ರಕಾಶ್ ಪೂಜಾರಿ ಅವರು ವಹಿಸಿದ ಸಕ್ರಿಯ ಪಾತ್ರವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಸನ್ಮಾನ ಸಮಾರಂಭದಲ್ಲಿ ತುಳು ವರ್ಡ್ ಫೌಂಡೇಶನ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಬಿ, ಡಾ. ಮಾಧವ ಎಂ.ಕೆ., ಡಾ. ರಾಜೇಶ್ ಆಳ್ವ, ಅಲಯನ್ಸ್ ಯುನಿವರ್ಸಿಟಿಯ ರಿಜಿಸ್ಟರ್ ಜನರಲ್ ಸುರೇಖಾ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.
ತುಳುನಾಡಿನ ಮಣ್ಣು ಮತ್ತು ಮಾತನ್ನು ಮಹಾನಗರದಲ್ಲೂ ಜೀವಂತವಾಗಿ ಉಳಿಸುವ ಅವರ ಸೇವೆಗೆ ದೊರೆತ ಈ ಸಮ್ಮಾನ್, ತುಳು ಸಂಸ್ಕೃತಿಯ ವಿಸ್ತಾರ ಮತ್ತು ಸಮುದಾಯ ಬಾಂಧವ್ಯಕ್ಕೆ ಮಹತ್ವದ ಮಾನ್ಯತೆಯಾಗಿದೆ.



Related posts

ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿನ ನೂತನ ಅಧ್ಯಕ್ಷ : ಜೆಸಿ ವಿಕ್ಕಿ ಪೂಜಾರಿ ಮಡುಂಬು

Mumbai News Desk

ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಪ್ರತಿಷ್ಠಿತ ‘ಮಂತ್ರಾಲಯ ಪರಿಮಳ’ ಪ್ರಶಸ್ತಿ ಪ್ರದಾನ

Mumbai News Desk

ಇನ್ನಂಜೆ ಹಾಲು ಉತ್ಪಾದಕರ ಸಂಘ ದ ನೂತನ ಅಧ್ಯಕ್ಷರಾಗಿ ಶಿವರಾಮ್ ಜೆ ಶೆಟ್ಟಿ ಮಂಡೇಡಿ ಆಯ್ಕೆ,

Mumbai News Desk

ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರ ಮಾತೃಶ್ರೀ ಲೀಲಾವತಿ ಶೆಟ್ಟಿ ನಿಧನ,

Mumbai News Desk

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ : ಕಾಪು ಮಾರಿಯಮ್ಮ ದರುಶನ

Mumbai News Desk

ಅಂತರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ, ಪುರೋಹಿತರಾದ ಡಾ. ಎಂ. ಜೆ. ಪ್ರವೀಣ್ ಭಟ್ ಅವರ ಜಾಹೀರಾತು ಮುಂಬೈ ಲೋಕಲ್ ಟ್ರೈನ್ ನಲ್ಲಿ ನೀಡಿ ಅಭಿಮಾನ ಮೆರೆದ ಅವರ ಅಭಿಮಾನಿ.

Mumbai News Desk