July 23, 2026
Mumbai News Kannada
ಸುದ್ದಿ

ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿನ ನೂತನ ಅಧ್ಯಕ್ಷ : ಜೆಸಿ ವಿಕ್ಕಿ ಪೂಜಾರಿ ಮಡುಂಬು







28 ವರುಷಗಳನ್ನು ಪೂರೈಸಿರುವ ವಲಯ 15ರ ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿಗೆ ನೂತನ ಅಧ್ಯಕ್ಷ ಜೆಸಿ ವಿಕ್ಕಿ ಪೂಜಾರಿ ಮಡುಂಬು ಅವರು ಆಯ್ಕೆಯಾಗಿದ್ದಾರೆ.

ಪದಪ್ರಧಾನ ಸಮಾರಂಭವು ಡಿಸೆಂಬರ್ 31ರ ಶನಿವಾರ ಕಾಪು ಜೆಸಿಐ ಭವನದಲ್ಲಿ ಜರಗಿತು.

ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ವಲಯಾಧ್ಯಕ್ಷ ಜೆಸಿ ಸಂತೋಷ್ ಶೆಟ್ಟಿ ವಿಟ್ಲ, ವಲಯ ಪೂರ್ವಾಧ್ಯಕ್ಷ ಜೆಸಿ ರಾಕೇಶ್ ಕುಂಜೂರು, ವಲಯ ಉಪಾಧ್ಯಕ್ಷ ಜೆಸಿ ಅರುಣ್ ಮಾಂಜ, ನಿಕಟಪೂರ್ವ ಅಧ್ಯಕ್ಷೆ ಜೆಸಿ ಅನಿತಾ ಹೆಗ್ಡೆ ಉಪಸ್ಥಿತರಿದ್ದರು.

2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಗೃಹ ರಕ್ಷಕ ದಳದಲ್ಲಿ ಸೇವಾ ನಿರತರಾಗಿರುವ ಲಕ್ಷ್ಮೀ ನಾರಾಯಣ ರಾವ್ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

2026ನೇ ಸಾಲಿಗೆ ಜೆಸಿಐ ಕಾಪು ಘಟಕದ ಕಾರ್ಯದರ್ಶಿಯಾಗಿ ಜೆಸಿ ಶ್ರುತಿ ಶೆಟ್ಟಿ, ಲೇಡಿ ಜೆಸಿ ಕೋ-ಆರ್ಡಿನೆಟರ್ ಜೆಸಿ ಕವಿತಾ ಕುಂದರ್, ಜೂನಿಯರ್ ಜೆಸಿ ಅಧ್ಯಕ್ಷರಾಗಿ ಜೆಜೆಸಿ ಮನ್ವಿತ್ ಬಂಗೇರ, ಕೋಶಾಧಿಕಾರಿಯಾಗಿ ಜೆಸಿ ಶ್ರಾವ್ಯ ಜೆ. ಬಂಗೇರ ಕಾರ್ಯನಿರ್ವಹಿಸಲಿದ್ದಾರೆ.



Related posts

ಉಡುಪಿ: ನಾರಾಯಣಗುರು ಸಂದೇಶ ಸಾಮರಸ್ಯ ಜಾಥಾ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಅಗಸ್ಟ್ 23 : ಹರಿಣಿ ಎಂ ಶೆಟ್ಟಿ ಕಾಪು ಇವರ ಮುತ್ತುದಾ… ಪನಿ… ಕವನ ಸಂಕಲನ ಲೋಕಾರ್ಪಣೆ

Mumbai News Desk

ಉದ್ಯಮಿ, ಸಂಘಟಕ ಗೋಪಾಲ ಪುತ್ರನ್ ಅವರಿಗೆ ಪಿತೃ ವಿಯೋಗ

Mumbai News Desk

ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್

Mumbai News Desk

ಶ್ರದ್ಧಾಂಜಲಿ: ದಿನೇಶ್ ಆನಂದ್ ಹೆಗ್ಡೆ ಅವರ ನಿಧನ

Mumbai News Desk

ಪತ್ರಕರ್ತ, ಅಪೂರ್ವ ಸಂಘಟಕ ಬಿ ದಿನೇಶ್ ಕುಲಾಲ್ ಅವರಿಗೆ “ಶ್ರೀ ಕೃಷ್ಣ ಅನುಗ್ರಹ ಪ್ರಸಾದ” ಪ್ರಶಸ್ತಿ

Mumbai News Desk