ಚಿತ್ರ, ವರದಿ: ರಮೇಶ್ ಉದ್ಯಾವರ
ಬೊರಿವಲಿ, ಜ, 29: ಬಿಲ್ಲವರ ಎಸೋಸಿಯೇಷನ್ ಮುಂಬಯಿ ಬೊರಿವಲಿ ದಹಿಸರ್ ಸ್ಥಳೀಯ ಕಚೇರಿ ವತಿಯಿಂದ 77ನೇ ಗಣರಾಜ್ಯೋತ್ಸವ ಜ. 26ರಂದು ಸಂಘದ ಕಚೇರಿ ಗುರು ಸನ್ನಿಧಿ
ಯಲ್ಲಿ ಆಚರಿಸಲಾಯಿತು.

ಸಂಘದ ಮಾಜಿ ಕಾರ್ಯಧ್ಯಕ್ಷ ಜಿ ಎಂ ಕೋಟ್ಯಾನ್ ಧ್ವಜಾರೋಹಣಗೆದರು. ನಂತರ ರಾಷ್ಟ್ರಗೀತೆ ಹಾಡಲಾಯಿತು. ಬಳಿಕ ಸದಸ್ಯರನ್ನು ಉಪದೇಶಿಸಿ ಮಾತನಾಡಿದ ಅವರು ನಮ್ಮ ಹಿರಿಯ ಸ್ವಾತಂತ್ರ್ಯ ಹೋರಾಟ ಗಾರರು ದೇಶಕ್ಕೆ ಮಾಡಿದ ಆಪಾರ ಸೇವೆಯಿಂದ ನಾವು ನಮ್ಮನ್ನು ಪ್ರಜಾಪ್ರಭುತ್ವ ದೇಶದ ಪ್ರಜೆಗಳು ಹೇಳಲು ಹೆಮ್ಮೆಯಾಗುತ್ತದೆ. ಅವರ ಬಲಿದಾನದಿಂದ ನಾವು ಈಗ ನಮ್ಮ ದೇಶವನ್ನು ಸದೃಢ ರಾಷ್ಟ್ರವಾಗಿ ಮಾಡಿದ್ದೇವೆ. ಅವರ ಅಮೋಘ ಸೇವೆಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳಬೇಕೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಮೋಹನ್ ಬಿ ಅಮೀನ್ ಉಪಕಾರ್ಯಾಧ್ಯಕ್ಷ ಕೃಷ್ಣರಾಜ ಸುವರ್ಣ ರಮೇಶ್ ಡಿ ಕೋಟ್ಯಾನ್ ಕಾರ್ಯದರ್ಶಿ ಜ್ಯೋತಿ ಪ್ರವೀಣ್ ಪೂಜಾರಿ ಜೊತೆ ಕಾರ್ಯದರ್ಶಿ, ವತ್ಸಲಾ ಕೆ ಪೂಜಾರಿ ಕೇಂದ್ರ ಕಚೇರಿಯ ಪ್ರತಿನಿಧಿ ರಜಿತ್ ಎಲ್ ಸುವರ್ಣ ಕೋಶಾಧಿಕಾರಿ ಉಮೇಶ್ ಜಿ ಕೋಟ್ಯಾನ್ ಸದಸ್ಯರಾದ ವಾರಿಜಾ ಸನಿಲ್ ಕೇಶರಂಜನ್ ಮುಲ್ಕಿ ಕುಸುಮ ಪೂಜಾರಿ ಪ್ರವೀಣ್ ಪೂಜಾರಿ ರತ್ನ ಯು ಪೂಜಾರಿ ಕರುಣಾಕರ ಸುಂದರಿ ಪೂಜಾರಿ ಮೋಹಿನಿ ಕರ್ಕೇರ ವಿಮಲಾ ಅಂಚನ್ ಅಶೋಕ್ ನಿಂಜೂರು ಪ್ರೀತಿ ಎಸ್ ಅಮೀನ್ ಶಶಿಕಲಾ ನಲಿನಿ ಅಮೀನ್ ಮಾನವಿ ಪಿ ಪೂಜಾರಿ ಉಪಸ್ಥಿತರಿದ್ದರು. ಉಪಕಾರ್ಯಧ್ಯಕ್ಷ ರಮೇಶ್ ಡಿ ಕೋಟ್ಯಾನ್ ರವರ ವತಿಯಿಂದ ಲಘು ಉಪಹಾರ ಜರುಗಿತು.




